ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸ್ಫುರಣ

ಸ್ಫುರಣ

ಮೃಗಜಲದಿಂದ ಧ್ರುವಜಲದೆಡೆಗೆ

ಮೃಗಜಲದಿಂದ ಧ್ರುವಜಲದೆಡೆಗೆ

* ಸಂತ ಜ್ಞಾನೇಶ್ವರ ಮಹಾರಾಜರು ಬ್ರಹ್ಮಜ್ಞಾನಪ್ರಾಪ್ತಿಗೆ ಪೂರ್ವದಲ್ಲಿ ಪ್ರಪಂಚಜ್ಞಾನದ ಆವಶ್ಯಕತೆಯೂ ಇರುತ್ತದೆ. ಇಲ್ಲವಾದರೆ ಸ್ವರೂಪಜ್ಞಾನದ ಕಾಲಕ್ಕೆ ಬುದ್ಧಿಯು ಕುಂಠಿತವಾಗುವುದು. ದಂಡೆಗೆ ಮುಟ್ಟಿದ ನಾವು ಅಲ್ಲಾಡುವುದೆ? ಅದರಂತೆ ಸ್ವರೂಪದಲ್ಲಿ ಬುದ್ಧಿಯು ಪ್ರವೇಶಿಸಲಾರದು. ವಿಚಾರವು ಹಿಂದಿನ ಹೆಜ್ಜೆಯಿಂದಲೇ ಹಿಂತಿರುಗುವುದು ಮತ್ತು ಅದರ ಬಗೆಗೆ ತರ್ಕದ ಚಾತುರ್ಯವು ನಡೆಯದು. ಅರ್ಜುನಾ! ಜ್ಞಾನವೆಂಬುದು ಅದೇ. ಅದರಿಂದ ಹೊರತಾದ ಪ್ರಪಂಚವು ವಿಜ್ಞಾನವು ಮತ್ತು ಆ ಪ್ರಪಂಚದಲ್ಲಿರುವ ಸತ್ಯತ್ವ ಬುದ್ಧಿಯೇ ಅಜ್ಞಾನವೆಂದು ತಿಳಿ. ಈಗ ಅಜ್ಞಾನವೆಲ್ಲ ಇಲ್ಲದಾಗುವುದು, ಪ್ರಪಂಚವೆಲ್ಲ ಹುರುಪಳಿಸುವುದು-ಬಾಧಿತವಾಗುವುದು. ಮತ್ತು ನಾವು ಜ್ಞಾನಸ್ವರೂಪರಾಗುವೆವು. ಸಾವಿರಾರು […]

ಚಿರಂತನ ತಥ್ಯ

ಚಿರಂತನ ತಥ್ಯ

* ಗುರುದೇವ ರಾ. ದ. ರಾನಡೆ ಪ್ರತ್ಯೇಕ ಸಂಗತಿಗಳಲ್ಲಿ ಸಾರ್ವಕಾಲಿಕ-ಸಾರ್ವತ್ರಿಕ ತಿರುಳನ್ನು ಗ್ರಹಿಸಬೇಕೆಂಬ ತತ್ತ್ವವನ್ನು ಅನಾದಿಕಾಲದಿಂದ ತಾತ್ತ್ವಿಕರೂ ಅಧಿಪತಿಗಳೂ ಮನಗಂಡಿದ್ದಾರೆ. ದೈನಂದಿನ ವ್ಯವಹಾರಗಳಲ್ಲಿಯೂ ಸಾರ್ವತ್ರಿಕ ಅಂಶಗಳನ್ನು ಕಾಣುವ ದೃಷ್ಟಿವೈಶಾಲ್ಯದಿಂದಾಗಿಯೆ ಪ್ಲೇಟೋ ಮಹಾಶಯನ ಹೆಸರು ಸ್ಥಾಯಿಯಾಗಿ ಉಳಿದಿರುವುದು. ಯಾವುದನ್ನು ಅರಿತುಕೊಂಡಲ್ಲಿ ಉಳಿದೆಲ್ಲದರ ಪರಿಜ್ಞಾನ ಉಂಟಾಗುತ್ತದೋ ಅದರ ಅನ್ವೇಷಣೆಯಲ್ಲಿಯೆ ಶಂಕರಾಚಾರ್ಯರ ಜೀವನವಷ್ಟೂ ಸಾಗಿದುದು. ಆ ನೆಲೆಯಿಂದ ಮನುಷ್ಯನ ಬಾಳು ಈಗ ಬಹಳ ದೂರ ಕ್ರಮಿಸಿದೆ. ಜ್ಞಾನದ ಪರಿಧಿ ವಿಸ್ತರಿಸಿದೆ; ವಿಜ್ಞಾನಪ್ರಗತಿ ಜೀವನವನ್ನು ಸಮೃದ್ಧಗೊಳಿಸಿದೆ, ಜಗತ್‌ಸ್ಥಿತಿ ಬದಲಾಗಿದೆ. ಆದರೂ ಮಾನವಜೀವನದ ಲಕ್ಷ್ಯವಾಗಲಿ […]

ಭಗವತ್‌ಸ್ಮರಣೆಯಿಂದ ನಮ್ಮ ಅವಗುಣಗಳ ಪರಿಜ್ಞಾನ

ಭಗವತ್‌ಸ್ಮರಣೆಯಿಂದ ನಮ್ಮ ಅವಗುಣಗಳ ಪರಿಜ್ಞಾನ

* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು * ಜಗತ್ತಿನಲ್ಲಿಯ ಅನೇಕ ಸಾಧನೆಗಳನ್ನು ನೋಡಿದರೆ ಎಲ್ಲ ಸಾಧನೆಗಳ ಮೊದಲನೆ ಮೆಟ್ಟಲು ಎಂದರೆ ಮನುಷ್ಯನಿಗೆ ತನ್ನ ಅವಗುಣಗಳು ಕಾಣತೊಡಗುವುದು. ಸಾಧನೆಯು ಬೆಳೆಯುತ್ತಹೋದಂತೆ ನಮ್ಮಲ್ಲಿಯ ಅವಗುಣಗಳು ಪ್ರಖರವಾಗಿ ಕಾಣತೊಡಗುತ್ತವೆ ಹಾಗೂ ಮುಂದೆ ಮುಂದೆ, ಈ ಅವಗುಣಗಳ ಪರ್ವತವೇ ಇದ್ದಂತೆ ಅನ್ನಿಸುತ್ತದೆ. “ಹೇ ಭಗವಂತನೇ, ನಾನು ಇಷ್ಟೆಲ್ಲ ಅವಗುಣಗಳಿಂದ ತುಂಬಿಕೊAಡಿರುವಾಗ ನಿನ್ನ ದರ್ಶನವಾಗಬೇಕೆಂದು ಅಪೇಕ್ಷೆಯನ್ನಾದರೂ ಹೇಗೆ ಮಾಡಲಿ? ಇಂಥ ಪರ್ವತಪ್ರಾಯ ಅವಗುಣಗಳ ರಾಶಿಯೊಳಗಿನಿಂದ ನನಗೆ ನಿನ್ನ ದರುಶನವು ಕಾಲತ್ರಯದಲ್ಲಾದರೂ ಆಗಲು ಶಕ್ಯವೆ?” […]

ಅಂತರಂಗದ ನಿಶ್ಚಲತ್ವ

ಸ್ಫುರಣ ಅಂತರಂಗದ ನಿಶ್ಚಲತ್ವ – ಸಂತ ಜ್ಞಾನೇಶ್ವರ ಮಹಾರಾಜರು ಹೃದಯದಲ್ಲಿ ಯೋಗಯುಕ್ತಿಯ ವಿಚಾರವಿಲ್ಲದವನು ವಿಷಯದ ಪಾಶದಿಂದ ಕಟ್ಟಲ್ಪಡುವನು. ಅರ್ಜುನ! ಅಂತಹವನ ಬುದ್ಧಿಯು ಎಂದೂ ಸ್ಥಿರವಾಗದು. ಮತ್ತು ಅದು ಸ್ಥಿರವಾಗಿರಬೇಕೆಂಬ ಬಯಕೆಯೂ ಅವನಲ್ಲಿರುವುದಿಲ್ಲ. ನಿಶ್ಚಲತ್ವದ ಗಂಧವು ಕೂಡ ಇಲ್ಲದವನ ಮನಸ್ಸಿಗೆ ಶಾಂತಿಯು ಅದೆಂತು ದೊರೆತೀತು? ಪಾಪಿಯಾದ ಮನುಷ್ಯನಲ್ಲಿ ಮೋಕ್ಷವು ವಾಸಿಸಲರಿಯದು. ಅದರಂತೆ ಶಾಂತಿಯ ಆದ್ರ್ರತೆಯಿಲ್ಲದವನನ್ನು ಸುಖವೂ ಇಣಿಕಿಕ್ಕಿ ಸಹ ನೋಡದು. ಹುರಿದ ಬೀಜವು ಮೊಳೆತರೆ ಮಾತ್ರ ಅಶಾಂತ ಮನುಷ್ಯನಿಗೆ ಸುಖವು ದೊರೆತೀತು. ಆದಕಾರಣ ಮನಸ್ಸಿನ ಚಂಚಲತೆಯೇ ದುಃಖದ ಬೀಜವು. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ