ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಬಡತನವನ್ನು ಹಿಂದಿಕ್ಕಿರುವ ಜನವರ್ಗ

ಕೇಂದ್ರಸರ್ಕಾರದ ಈಚಿನ ವರ್ಷಗಳ ಹಲವು ಯೋಜನೆಗಳ ಫಲಿತವಾಗಿ ದೇಶದ ಸಮಾಜದ ಅಂತರ್ವಿನ್ಯಾಸದಲ್ಲಿ ಎದ್ದುಕಾಣುವ ಪರಿವರ್ತನೆಯಾಗುತ್ತಿರುವುದು ಒಂದು ಗಣನಾರ್ಹ ಬೆಳವಣಿಗೆ. ಕಳೆದ ಒಂಬತ್ತು ವರ್ಷಗಳಲ್ಲಿ ಯೋಜನೆಗಳ ಲಕ್ಷ್ಯಸಾಧಕತೆಯ ಸಾಂದ್ರತೆಯಿಂದಾಗಿ ಅಭಿವೃದ್ಧಿಯು ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಜಲಶಕ್ತಿ, ಆಯುಷ್ ಮೊದಲಾದ ಕ್ಷೇತ್ರಗಳು ಹಿಂದಿದ್ದುದಕ್ಕಿಂತ ಹೆಚ್ಚು ದೃಢಿಷ್ಠವಾಗಿರುವುದರಿಂದ ಎಲ್ಲ ಜನವರ್ಗಗಳ ಸ್ಥಿತಿಯೂ ಉತ್ತಮಗೊಂಡಿದೆ. ಕೌಶಲವೃದ್ಧಿ, ಸಹಕಾರಿ ಕ್ಷೇತ್ರ ಮೊದಲಾದವಕ್ಕೇ ಮೀಸಲಾದ ಪ್ರತ್ಯೇಕ ಸಚಿವಾಲಯಗಳೇ ಕಾರ್ಯನಿರತವಾಗಿವೆ. ಬಹುತೇಕ ಬಡ ವರ್ಗಗಳಿಗೆ ಆಸರೆ ನೀಡುವ ಹೈನುಗಾರಿಕೆ ಮೊದಲಾದ ಕ್ಷೇತ್ರಗಳಿಗೆ ವಿಶೇಷ ನೆರವನ್ನು ನೀಡಲಾಗಿದೆ. ಈ […]

ಬಾಹ್ಯಾಕಾಶ ವಿಜ್ಞಾನ: ಭಾರತದ ಅನುಪಮ ಸಾಧನೆ

ಕಳೆದ (೨೦೨೩) ಜುಲೈ ೧೪ರಂದು ಶ್ರೀಹರಿಕೋಟಾದ ಸತೀಶ್‌ಧವನ್ ವೇದಿಕೆಯಿಂದ ಯಶಸ್ವಿಯಾಗಿ ಉಡ್ಡಯನಗೊಂಡ ಇಸ್ರೋ-ನಿರ್ಮಿತ ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಈ ಪ್ರೌಢಕ್ಷೇತ್ರದಲ್ಲಿ ಭಾರತದ ವಿಜ್ಞಾನಿಗಳ ಮೇಲ್ಮಟ್ಟದ ಸಾಧನೆಯನ್ನು ಅಸಂದಿಗ್ಧವಾಗಿ ಸಾಕ್ಷ್ಯಪಡಿಸಿದೆ. ಹಾಗೆ ನೋಡಿದರೆ ಇದು ಭಾರತದ ಮೊದಲ ಅಥವಾ ಏಕೈಕ ಸಾಧನೆಯೇನಲ್ಲ. ಇಸ್ರೋ ೪೨೪ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಪ್ರಥಮ ಪ್ರಯತ್ನದಲ್ಲಿಯೆ ಮಂಗಳಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಮೊತ್ತಮೊದಲ ದೇಶ ಭಾರತವೇ. ಇದುವರೆಗೆ ನಿಷ್ಕ್ರಿಯವೆಂದೂ ವಾಸಯೋಗ್ಯವಲ್ಲವೆಂದೂ ಭಾವಿಸಲಾಗಿದ್ದ ಚಂದ್ರನಲ್ಲಿ ನೀರಿನ ಮತ್ತು ಮಂಜುಗಡ್ಡೆಯ ಇರುವಿಕೆಯನ್ನು ಸಾಬೀತುಪಡಿಸಿರುವುದು ಭಾರತ. ಇದೀಗ ಭಾರತ […]

ವಿಕ್ರಮಾರ್ಜಿತಸತ್ತ್ವ

ಅದೊಂದು ಕಾಲವಿತ್ತು. ಮಂಗಳಗ್ರಹ ಯಾನದಲ್ಲಿ ಭಾರತ ಸಫಲಗೊಂಡಾಗ ಧೋತಿ-ಮುಂಡಾಸು ಧರಿಸಿದ ಗ್ರಾಮೀಣನೊಬ್ಬ ಬಾಹ್ಯಾಕಾಶ ಕ್ಲಬ್‌ಗೆ ಪ್ರವೇಶ ಕೋರಿ ಬಾಗಿಲು ತಟ್ಟುತ್ತಿದ್ದಂತೆ ವ್ಯಂಗ್ಯಚಿತ್ರವನ್ನು ಅಮೆರಿಕದ ಪ್ರಸಿದ್ಧ ಪತ್ರಿಕೆಯೊಂದು ಪ್ರಕಟಿಸಿತ್ತು. ಅದು ಈಗ್ಗೆ ಒಂದು ದಶಕ ಹಿಂದೆ. ವಾಸ್ತವವಾಗಿ ಆ ವೇಳೆಗೇ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಗಣನೀಯ ಸಾಧನೆ ಮಾಡಿದ್ದಾಗಿತ್ತು. ಆದರೆ ಭಾರತ ಕಳಪೆ ದೇಶವೆಂಬ ನಿರಾಧಾರ ಮನೋಮುದ್ರಿಕೆ ಮೂಡಿಸಿಕೊಂಡಿದ್ದ ಜನಾಂಗೀಯ ಪೂರ್ವಗ್ರಹಕ್ಕೆ ಏನು ಮಾಡೋಣ! ಈಗ ರಂಗಭೂಮಿಯ ಟ್ರಾನ್ಸ್‌ಫರ್ ಸೀನ್. ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ […]

ಮೋದಿಯವರ ಅಮೆರಿಕ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರದು ಅಮೆರಿಕಕ್ಕೆ ಈಗಿನದು ಮೊದಲ ಭೇಟಿಯಲ್ಲವಾದರೂ ಹಲವು ಕಾರಣಗಳಿಂದ ಇದು ವಿಶಿಷ್ಟವೆನಿಸಿತು – ವಿಶೇಷವಾಗಿ ಪ್ರಕೃತದ ರಾಷ್ಟ್ರ-ರಾಷ್ಟ್ರಗಳ ಸಂಬಂಧಗಳ ಸಂಕೀರ್ಣತೆಯಿಂದಾಗಿ. ‘ಶೀತಲ ಯುದ್ಧ’ ವರ್ಷಗಳ ಅವಧಿಯಲ್ಲಿ ಮತ್ತು ಅದಕ್ಕೆ ಹಿಂದೆ ಭಾರತ-ಅಮೆರಿಕಗಳ ನಡುವೆ ಸ್ನೇಹವು ಸಾಧ್ಯವೇ ಇಲ್ಲವೆನಿಸುವ ಸ್ಥಿತಿ ಇತ್ತು. ಆ ಹಿಂದಿನ ಮಾನಸಿಕತೆಯಿಂದ ಹೊರಬರಲು ೧೯೯೦ರ ದಶಕದಿಂದಾಚೆಗೆ ಭಾರತ ಹೆಣಗಬೇಕಾಯಿತು. ಹೊಸ ಸಹಸ್ರಾಬ್ದದ ಮೊದಲ ದಶಕದ ನಡುಭಾಗದಲ್ಲಿ ‘ಅಣುಶಕ್ತಿ ಒಡಂಬಡಿಕೆ’ ನಿರ್ಮಿಸಿದ ವಿರಸದಿಂದ ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಇತ್ತೀಚಿನ ರಷ್ಯ-ಯುಕ್ರೇನ್ ಸಮರದ […]

ಆತ್ಮನಿರ್ಭರತೆ

ಈಗ್ಗೆ ಮೂರು ವರ್ಷ ಹಿಂದೆ (ಮೇ ೨೦೨೦) ಮೋದಿ ಸರ್ಕಾರ ‘ಆತ್ಮನಿರ್ಭರ ಭಾರತ’ ಗುರಿಯನ್ನು ಘೋಷಿಸಿದಾಗ – ಅದೂ ಕೋವಿಡ್ ೧೯ ಸಾಂಕ್ರಾಮಿಕದ ವಿಘಾತದ ಹಿಂದುಗೂಡಿ – ಶಾಶ್ವತ ಸಿನಿಕತನಕ್ಕೆ ಹೆಸರಾದ ‘ವಿರೋಧಕ್ಕಾಗಿ ವಿರೋಧ’ವನ್ನು ಸ್ವಾಭಾವಿಕವಾಗಿಸಿಕೊಂಡ ಪಡೆಗಳಂತೂ ಎಂದಿನಂತೆ ಅದನ್ನು ಘೋಷಣೆ ಮಾತ್ರವೆಂದು ತಳ್ಳಿಹಾಕಿದುದು ಅವುಗಳ ಜಾಯಮಾನಕ್ಕೆ ಅನುಗುಣವಾಗಿತ್ತು. ಅನ್ಯ ವಲಯಗಳಲ್ಲಿಯೂ ಆ ಲಕ್ಷö್ಯದ ಬಗೆಗೆ ಅತ್ಯುತ್ಸಾಹವೇನೂ ತೋರಿರಲಿಲ್ಲ. ಅಲ್ಲಿಂದೀಚೆಗೂ ಪ್ರಮುಖ ವಿರೋಧಪಕ್ಷವು ಆರೂಢ ಸರ್ಕಾರದ ಪ್ರತಿಯೊಂದು ಉಪಕ್ರಮವನ್ನೂ ಟೀಕಿಸುತ್ತ ಬಂದಿರುವ ರೀತಿಯನ್ನು ನೋಡಿದರೆ ಅದರ ದೃಷ್ಟಿಯಲ್ಲಿ […]

ಸರ್ಕಾರ ಮತ್ತು ಜನತೆ

ಅಧಿಕಾರಕೇಂದ್ರಗಳಿಗೂ ಸಾಮಾನ್ಯ ಜನತೆಗೂ ನಡುವೆ ದೊಡ್ಡ ಕಂದರವಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂಬ ವ್ಯಾಖ್ಯೆ ಹಿಂದಿನ ವರ್ಷಗಳಲ್ಲಿ ಆಗಾಗ ಕೇಳಬರುತ್ತಿತ್ತು. ಅದು ದಿಟವೂ ಆಗಿತ್ತು. ಜನಸಂಪರ್ಕದಿಂದ ಆದಷ್ಟು ದೂರವಿರಿ ಎಂದೇ ಆಡಳಿತ ತರಬೇತಿ ಕೇಂದ್ರದಲ್ಲಿ ಬೋಧಿಸಲಾಗುತ್ತಿತ್ತು ಎಂಬ ವಾಸ್ತವವನ್ನು ಅನೇಕ ಹಿರಿಯ ಅಧಿಕಾರಿಗಳೇ ಹೇಳಿದ್ದಿದೆ; ಅದು ಹಾಗಿರಲಿ. ಸರ್ಕಾರಕ್ಕೂ ಪ್ರಜೆಗಳಿಗೂ ನಡುವೆ ಹೆಚ್ಚು ನಿಕಟವೂ ಸ್ಥಾಯಿಯೂ ಆದ ಸಂಪರ್ಕವನ್ನು ಸಾಧಿಸುವುದು ಈಗಿನ ಆರೂಢ ಸರ್ಕಾರದ ಆದ್ಯತೆಗಳಲ್ಲೊಂದಾಗಿರುವುದು ಅದರ ಹಲವಾರು ಕ್ರಮಗಳಿಂದ ದ್ಯೋತವಾಗುತ್ತಿದೆ. ಇದು ಶ್ಲಾಘನೀಯವೆಂದು ಗುರುತಿಸಬೇಕು. ನಿದರ್ಶನಕ್ಕೆ […]

ಸಂಪರ್ಕಕ್ರಾಂತಿ

ಸಂಪರ್ಕಸಾಧನಗಳು, ಸಂವಹನ ಮಾಧ್ಯಮಗಳು ವಿಸ್ತೃತಗೊಂಡಲ್ಲಿ ಆರ್ಥಿಕ ಅಭ್ಯುದಯಕ್ಕೆ ಹೆಚ್ಚಿನ ವೇಗ ಬರುತ್ತದೆಂಬುದು ಹಿಂದಿನ ಅನುಭವ. ಈ ಹಿನ್ನೆಲೆಯಲ್ಲಿ ಈಗಿನ ಆರೂಢ ಸರ್ಕಾರ ಆರಂಭದಿಂದ ಈ ಕ್ಷೇತ್ರಕ್ಕೆ ಆದ್ಯತೆ ನೀಡುತ್ತ ಬಂದಿರುವುದು ಪ್ರಶಂಸಾರ್ಹವಾಗಿದೆ. ಅಭಿವೃದ್ಧಿಗೆ ಒಂದು ಪ್ರಮುಖ ಚಾಲಕಶಕ್ತಿಯೆಂದರೆ ಮೂಲಸೌಕರ್ಯಗಳ ಹೆಚ್ಚಳ. ಕಳೆದ ಒಂಭತ್ತು ವರ್ಷಗಳಲ್ಲಿ ಮೂಲಸೌಕರ್ಯವರ್ಧನೆಯಲ್ಲಿ ಸತತವಾಗಿ ಹೆಚ್ಚಿನ ಹೂಡಿಕೆಯಾಗಿದೆ. ದೀರ್ಘಾವಧಿ ಲಾಭವಲ್ಲದೆ ಈ ವೃದ್ಧಿಯು ಸಾಮಾನ್ಯ ವ್ಯವಹಾರಗಳ ಗುಣಮಟ್ಟವನ್ನೂ ಉನ್ಮುಖಗೊಳಿಸುತ್ತದೆಂಬುದು ಸ್ಪಷ್ಟವೇ ಆಗಿದೆ. ಸುಸಜ್ಜಿತವಾದ ರಸ್ತೆಗಳು, ರೈಲುಯಾನ, ವಿಮಾನಯಾನ ಸಂಬಂಧಿತ ಒಳಹಂದರ ಮೊದಲಾದವು ಸಮೃದ್ಧ ಭಾರತ […]

ಸಿರಿಧಾನ್ಯಂ ಗೆಲ್ಗೆ!

೨೦೨೩ರ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ವೆಂದು ವಿಶ್ವಸಂಸ್ಥೆಯು ಘೋಷಿಸಿರುವುದು ಒಂದು ಸ್ವಾಗತಾರ್ಹ ಕ್ರಮವಾಗಿದೆ. ಈ ಆಶಯದ ಭಾರತದ ಪ್ರಸ್ತಾವವನ್ನು ಜಗತ್ತಿನ ೭೨ ದೇಶಗಳು ಸಮರ್ಥಿಸಿದುದೂ ಹೃದ್ಯವಾಗಿದೆ. ಚಾರಿತ್ರಿಕವಾಗಿ, ತಾಂತ್ರಿಕವಾಗಿ – ಎರಡೂ ದೃಷ್ಟಿಗಳಿಂದ ಸಿರಿಧಾನ್ಯಗಳಿಗೆ ಮಹತ್ತ್ವ ಸಲ್ಲುತ್ತದೆ. ಮಾನವಕುಲಕ್ಕೇ ಸಿರಿಧಾನ್ಯಗಳು ನಿಸರ್ಗದ ವಿಶಿಷ್ಟ ಕೊಡುಗೆಯಾಗಿವೆ. ಇವು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿ ಇದ್ದಂಥವೇ. ಹೆಚ್ಚಿನ ಪೌಷ್ಟಿಕತೆಯನ್ನುಳ್ಳ ರಾಗಿ, ಸಜ್ಜೆ, ಸಾಮೆ, ನವಣೆ ಮೊದಲಾದವು ಕಡಮೆ ನೀರಿನಲ್ಲಿ ಹಾಗೂ ಒಣಭೂಮಿಯಲ್ಲಿಯೂ ಬೆಳೆಯುವ ಬೆಳೆಗಳಾಗಿವೆಯಾದ್ದರಿಂದ ಆಹಾರಭದ್ರತೆಗೆ ಇವು ಪೂರಕವಾಗಿವೆ. ಭಾರತವಲ್ಲದೆ ಅನ್ಯ ನೂರಾರು […]

ನಿವಾರಣೀಯ ದುರಂತಗಳು

ನಂಬಿ ಕೆಟ್ಟವರಿಲ್ಲವೋ ಎಂಬಂತೆ ಪ್ರಕೃತಿಯನ್ನು ಕೆಣಕಿ ಬದುಕಿದವರಿಲ್ಲವೋ ಎಂದೂ ಹೇಳಬಹುದೇನೊ. ಹಿಮಾಲಯದಲ್ಲಿ ಈಚಿನ ವರ್ಷಗಳಲ್ಲಿಯೂ ಘಟಿಸಿರುವ ದುರಂತಗಳ ಹಿಂದುಗೂಡಿ ಇದೇ ವರ್ಷದ ಆರಂಭದಲ್ಲಿ ಜೋಶಿಮಠ ಭಾಗದಲ್ಲಿ ನೆಲ ಬಿರುಕುಬಿಟ್ಟು ಅನೇಕ ಕಡೆ ನೆಲ ಕುಸಿದು ಜನಜೀವನವನ್ನು ಉಧ್ವಸ್ತಗೊಳಿಸಿದೆ. ೭೦೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಸೀಳಿಹೋಗಿವೆ. ಅಲ್ಲಿಯ ನಿವಾಸಿಗಳು ಸ್ಥಾನಾಂತರಗೊಳ್ಳಬೇಕಾಗಿಬAದಿದೆ. ನೂರಾರು ಕುಟುಂಬಗಳು ಸುರಕ್ಷಿತತೆಯನ್ನರಸಿ ಬೇರೆಡೆಗಳಿಗೆ ವಲಸೆ ಹೋಗುವುದು ಉತ್ತರಾಖಂಡ ಪ್ರಾಂತದಲ್ಲಿ ಮಾಮೂಲೆನಿಸಿಬಿಟ್ಟಿದೆ. ಹೀಗೆ ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬಲಿಗೊಟ್ಟಾದರೂ ಊರ್ಜೋತ್ಪಾದನಾದಿ ಯೋಜನೆಗಳಿಗೆ ಆದ್ಯತೆ ನೀಡಬೇಕೆ? ಅಭಿವೃದ್ಧಿಯೋಜನೆಗಳು ಬೇಡವೆಂದು […]

ಪರಿಸರಸ್ನೇಹಿ ಜೀವನಶೈಲಿ

ಪರಿಸರಸ್ವಾಸ್ಥ್ಯ ಕುಸಿಯುತ್ತಿರುವುದರಿಂದುಂಟಾಗುತ್ತಿರುವ ಸಮಸ್ಯೆಗಳ ಅರಿವು ಈಗ ಜಗತ್ತಿಗೆಲ್ಲ ಆಗಿದೆ. ಆದರೆ ಇದುವರೆಗೆ ಬಹುಮಟ್ಟಿಗೆ ಯಾರಾರನ್ನೋ ಕಾರಣವಾಗಿಸುವುದು, ಪರಿಹಾರವನ್ನು ತಾಂತ್ರಿಕತೆಗಳಲ್ಲಿ ಅರಸುವುದು ಮೊದಲಾದವೇ ನಡೆದಿವೆ. ಈಗಲಾದರೋ ಎಲ್ಲೆಡೆ ಹವಾಮಾನವೈಪರೀತ್ಯ, ಹಿಮನದಿಗಳು ಕರಗುತ್ತಿರುವುದು, ಸಮುದ್ರಮಟ್ಟ ಏರುತ್ತಿರುವುದು, ಅಕಾಲಿಕ ಮಳೆ, ಭೂಕುಸಿತ ಮೊದಲಾದ ವಿದ್ಯಮಾನಗಳು ಹಿಂದಿಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಿಶ್ವ ಪರಿಸರ ದಿನ (ಜೂನ್ ೫) ಮೊದಲಾದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರವರ್ತಿಸುತ್ತ ಬಂದಿರುವ ‘ಮಿಷನ್ ಲೈಫ್’ ಸೂತ್ರಾವಳಿ ಎಲ್ಲರ ಚಿಂತನೆಗೂ ಅನುಷ್ಠಾನಕ್ಕೂ ಅರ್ಹವಾಗಿದೆ. […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ