ಕೇಂದ್ರಸರ್ಕಾರದ ಈಚಿನ ವರ್ಷಗಳ ಹಲವು ಯೋಜನೆಗಳ ಫಲಿತವಾಗಿ ದೇಶದ ಸಮಾಜದ ಅಂತರ್ವಿನ್ಯಾಸದಲ್ಲಿ ಎದ್ದುಕಾಣುವ ಪರಿವರ್ತನೆಯಾಗುತ್ತಿರುವುದು ಒಂದು ಗಣನಾರ್ಹ ಬೆಳವಣಿಗೆ. ಕಳೆದ ಒಂಬತ್ತು ವರ್ಷಗಳಲ್ಲಿ ಯೋಜನೆಗಳ ಲಕ್ಷ್ಯಸಾಧಕತೆಯ ಸಾಂದ್ರತೆಯಿಂದಾಗಿ ಅಭಿವೃದ್ಧಿಯು ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಜಲಶಕ್ತಿ, ಆಯುಷ್ ಮೊದಲಾದ ಕ್ಷೇತ್ರಗಳು ಹಿಂದಿದ್ದುದಕ್ಕಿಂತ ಹೆಚ್ಚು ದೃಢಿಷ್ಠವಾಗಿರುವುದರಿಂದ ಎಲ್ಲ ಜನವರ್ಗಗಳ ಸ್ಥಿತಿಯೂ ಉತ್ತಮಗೊಂಡಿದೆ. ಕೌಶಲವೃದ್ಧಿ, ಸಹಕಾರಿ ಕ್ಷೇತ್ರ ಮೊದಲಾದವಕ್ಕೇ ಮೀಸಲಾದ ಪ್ರತ್ಯೇಕ ಸಚಿವಾಲಯಗಳೇ ಕಾರ್ಯನಿರತವಾಗಿವೆ. ಬಹುತೇಕ ಬಡ ವರ್ಗಗಳಿಗೆ ಆಸರೆ ನೀಡುವ ಹೈನುಗಾರಿಕೆ ಮೊದಲಾದ ಕ್ಷೇತ್ರಗಳಿಗೆ ವಿಶೇಷ ನೆರವನ್ನು ನೀಡಲಾಗಿದೆ. ಈ […]
ಬಡತನವನ್ನು ಹಿಂದಿಕ್ಕಿರುವ ಜನವರ್ಗ
Month : November-2023 Episode : Author :