ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಸಾಧನೆಗಳೇ ಉತ್ಸವಾಚರಣೆ

ಸ್ವಾತಂತ್ರ್ಯದ ಅಮೃತೋತ್ಸವ ಆಚರಣೆಯ ಸಂಭ್ರಮದ ಪರ್ವದಲ್ಲಿದೆ ನಾಡು. ಸಾಮಾನ್ಯವಾಗಿ ಇಂತಹ ಉತ್ಸವಾಚರಣೆಗಳು ಹಲವು ವಿಶೇಷ ಯೋಜಿತ ಕಾರ್ಯಕ್ರಮಗಳ ಮೂಲಕ ನಡೆಯುತ್ತವೆ. ಇಂಡಿಯಾಗೇಟ್‍ನಲ್ಲಿ ನೇತಾಜಿಯವರ ಹಾಲೋಗ್ರಾಂ ಸ್ಥಾಪನೆ ಮೊದಲಾದ ಕ್ರಮಗಳಂತೂ ಇತಿಹಾಸಾರ್ಹವಾಗಿವೆ. ಆದರೆ ಅಂತಹ ಸಾಂಕೇತಿಕ ಕಾರ್ಯಕ್ರಮಗಳ ಆವಶ್ಯಕತೆಯೇ ಇಲ್ಲವೆನಿಸುವ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಉನ್ನತ ಸಾಧನೆಗಳು ಗಮನ ಸೆಳೆಯುತ್ತಿವೆ. ತಾತ್ತ್ವಿಕವಾಗಿ ಯೋಚಿಸುವಾಗ ಈ ಸಾಧನೆಗಳೇ ಸ್ವಾತಂತ್ರ್ಯ ಅಮೃತೋತ್ಸವವನ್ನು ಅರ್ಥಪೂರ್ಣಗೊಳಿಸುವವಾಗಿವೆ ಎನಿಸುತ್ತದೆ. ಕೋವಿಡ್ ಸವಾಲಿಗೆ ಉತ್ತರವಾಗಿ 200 ಕೋಟಿ ಲಸಿಕೆ ಡೋಸ್‍ಗಳ ನೀಡಿಕೆಯ ಕಲ್ಪನೆಗೆ ಮೀರಿದ ಗುರಿಯನ್ನು ಸಾಧಿಸಿರುವುದಲ್ಲದೆ […]

ಮಹತ್ತ್ವಾಕಾಂಕ್ಷೆಯ ‘ಅಗ್ನಿಪಥ್’ಯೋಜನೆ

ಮಹತ್ತ್ವಾಕಾಂಕ್ಷೆಯ ‘ಅಗ್ನಿಪಥ್’ಯೋಜನೆ

ಸಂಪಾದಕೀಯ ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತಿರಬೇಕೆಂಬ ಏಕಾಂಶ ನೀತಿ ತಳೆದಿರುವ ವಿಪಕ್ಷಗಳು ‘ಅಗ್ನಿಪಥ್’ ಬಗೆಗೂ ಕೊಂಕು ತೆಗೆಯಹೊರಟಿದ್ದರೂ, ಅವುಗಳ ಕುತ್ಸಿತ ಟೀಕೆಗಳ ಪೊಳ್ಳುತನವನ್ನು ಜನತೆಯಿಂದ ಬಂದ ಅಪೂರ್ವ ಸ್ಪಂದನವೇ ಬಯಲು ಮಾಡಿದೆ. ದೇಶದ ಭದ್ರತೆಗೆ ಸವಾಲುಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದೇಶದಲ್ಲಿ ಶೇ. 18ಕ್ಕೂ ಮಿಗಿಲಾಗಿರುವ ಯುವಜನತೆಗೆ ಸೇನೆಯೊಡನೆ ಸಹಕರಿಸುವ ಅವಕಾಶವನ್ನು ‘ಅಗ್ನಿಪಥ್’ ಕಲ್ಪಿಸಿರುವುದು ಅಭೂತಪೂರ್ವವೂ ಪ್ರಶಂಸನೀಯವೂ ಆಗಿದೆ. ಸೇನೆಯ ಆಧುನಿಕೀಕರಣ, ರಕ್ಷಣೋಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಸಾಧನೆ ಮೊದಲಾದ ಕ್ರಮಗಳ ಜೊತೆಗೆ ಯುವಜನರ ಅಲ್ಪಾವಧಿ ನೇಮಕಾತಿ ವ್ಯವಸ್ಥೆಯನ್ನು […]

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ […]

ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ

ಭಾರತೀಯ ಇತಿಹಾಸವನ್ನೂ ಸಮಾಜವನ್ನೂ ನೈಜ ಭಾರತೀಯತೆಯ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಅದೇ ರೀತಿಯಲ್ಲಿ ಭಾರತೀಯರಿಗೆ ಕಾಣಿಸಿದ ಸಂಶೋಧಕರಲ್ಲಿ ಅಗ್ರಗಣ್ಯರಾದ ಒಬ್ಬರು ಧರ್ಮಪಾಲ್ (೧೯.೨.೧೯೨೨-೨೪.೧೦.೨೦೦೬). ಭಾರತದಲ್ಲಿನ ಹಾಗೂ ಲಂಡನ್ನಿನ ಲೇಖ್ಯಾಗಾರಗಳಲ್ಲಿ ಅಸೀಮ ಶೋಧನೆ ನಡೆಸಿದ ಧರ್ಮಪಾಲ್ ಪ್ರಚಲಿತ ಕಥನಗಳಿಂದ ಪೂರ್ಣ ಭಿನ್ನವಾದ ಬ್ರಿಟಿಷ್‌ಪೂರ್ವ ಭಾರತದ ಚಿತ್ರಣವನ್ನೂ ಶಿಕ್ಷಣ, ಕೃಷಿ, ವಿಜ್ಞಾನ-ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಇಂಗ್ಲೆಂಡಿಗಿಂತ ಬಹುಪಾಲು ಉನ್ನತ ಮಟ್ಟದಲ್ಲಿದ್ದುದನ್ನೂ ಬ್ರಿಟಿಷರದೇ ದಾಖಲೆಗಳ ಆಧಾರದ ಮೇಲೆ ದೃಢವಾಗಿ ಸ್ಥಾಪಿಸಿದ ಸಾಧನೆ ದಿಕ್‌ಪ್ರದರ್ಶಕವೂ ರೋಮಾಂಚಕಾರಿಯೂ ಆದದ್ದು. ಈ ಸತ್ಯದರ್ಶನದ ಬೆಳಕಿನಲ್ಲಿ […]

ಬೌದ್ಧಿಕ ದಾಸ್ಯ ನೀಗುವುದೆಂದಿಗೆ?

ದೇಶದ ಸ್ವಾತಂತ್ರ್ಯಪ್ರಾಪ್ತಿಯ ಎಪ್ಪತ್ತೈದನೇ ವರ್ಷಾಚರಣೆ ಸಮೀಪಿಸುತ್ತಿರುವ ಸಂಭ್ರಮ ಒಂದೆಡೆಯಾದರೆ ಆತ್ಮಾವಲೋಕನವನ್ನು ಅವಶ್ಯವಾಗಿಸುವ ಹಲವು ಅಂಶಗಳೂ ಇಲ್ಲದಿಲ್ಲ. ರಾಜಕೀಯ ದಾಸ್ಯದಿಂದ ಮುಕ್ತರಾಗುವ ಪ್ರಕ್ರಿಯೆಯಷ್ಟೇ ಮಾನಸಿಕ-ಬೌದ್ಧಿಕ ದಾಸ್ಯವನ್ನು ಕೊಡವಿಕೊಳ್ಳುವುದೂ ಮುಖ್ಯವಷ್ಟೆ? ಹಲವು ಸಮಾಜೋನ್ನತ – ಎಲೀಟ್ ವರ್ಗಗಳು ಈಗಲೂ ಗುಲಾಮೀ ಮಾನಸಿಕತೆಗೇ ಅಂಟಿಕೊಂಡಿರುವುದಕ್ಕೆ ಪುರಾವೆಗಳು ಆಗಿಂದಾಗ ಎದ್ದುಕಾಣುತ್ತಿರುವುದು ವಿಷಾದಕರ. ಇತ್ತೀಚಿನ ನಿದರ್ಶನವೊಂದು ಗಮನಸೆಳೆಯುತ್ತದೆ. ವಿದೇಶೀ ಆಳ್ವಿಕೆಯ ಪರಿಣಾಮ ಎಷ್ಟು ದಟ್ಟವಾದುದೆಂಬುದನ್ನೂ ಇದು ತೋರಿಸುತ್ತದೆ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಸಂಕಲ್ಪಿಸಿ ವರ್ಷಗಳುದ್ದಕ್ಕೂ ಆ ನಿರ್ಧಾರವನ್ನು ಜೀವಂತವಾಗುಳಿಸಿಕೊಂಡು ಅಂತಿಮವಾಗಿ ಲಂಡನ್ನಿನಲ್ಲಿ ಜನರು […]

ಸಂಪಾದಕೀಯ

ಪ್ರಧಾನಿಗಳ ಪರಿಣಾಮಕಾರಿ ಅಮೆರಿಕ ಪ್ರವಾಸ ಅಮೆರಿಕಕ್ಕೆ ಭಾರತದ ಪ್ರಧಾನಿಗಳ ಭೇಟಿ ಇದೇ ಮೊದಲಿನದಲ್ಲವಾದರೂ ಕಳೆದ ಸೆಪ್ಟೆಂಬರ್ ಕೊನೆಯ ವಾರದ ನರೇಂದ್ರ ಮೋದಿಯವರ ಭೇಟಿಗೆ ವಿಶೇಷ ಭೂಮಿಕೆ ಇತ್ತು; ಅದಕ್ಕೆ ಜಾಗತಿಕ ಮಹತ್ತ್ವ ಇತ್ತು. ಆರ್ಥಿಕ, ವಾಣಿಜ್ಯ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಅಧಿಕಗೊಳ್ಳಬೇಕಾದುದರ ಆವಶ್ಯಕತೆಯನ್ನು ಎರಡೂ ರಾಷ್ಟ್ರಗಳು ಸ್ಥಿರೀಕರಿಸಿದವು. ಭಯೋತ್ಪಾದಕತೆಯನ್ನು ಪ್ರತಿಬಂಧಿಸುವುದರಲ್ಲಿ ಭಾರತವನ್ನು ಬೆಂಬಲಿಸುವ ಅಮೆರಿಕದ ಆಶ್ವಾಸನೆ ಸಾಮಯಿಕವಾಗಿದೆ. ಆಫಘಾನಿಸ್ತಾನವನ್ನು ಉಗ್ರವಾದಪೋಷಕ ನೆಲೆಯಾಗಿಸುವುದಿಲ್ಲವೆಂಬ ಮತ್ತು ತನ್ನ ದೇಶದೊಳಗೆ ಮಾನವಹಕ್ಕುಗಳನ್ನು ಪರಿರಕ್ಷಿಸುವೆನೆಂಬ ವಾಗ್ದಾನಕ್ಕೆ ಬದ್ಧವಾಗಿರ ತಕ್ಕದ್ದೆಂದು ಆಗ್ರಹವನ್ನು ವ್ಯಕ್ತಪಡಿಸಲಾಯಿತು. […]

ಹೊಸ ಶಿಕ್ಷಣನೀತಿ

ಹತ್ತಿರ ಹತ್ತಿರ ಇನ್ನೂರು ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಶಿಕ್ಷಣವ್ಯವಸ್ಥೆಯ ಅಸಮರ್ಪಕತೆ ಬಹಳ ಹಿಂದಿನಿಂದಲೇ ಚಿಂತಕರ ಹಾಗೂ ಸರ್ಕಾರಗಳ ಗಮನಕ್ಕೆ ಬಂದಿದೆ. ಈ ಹಿಂದೆ ಹಲವು ಸುಧಾರಣ ಪ್ರಯತ್ನಗಳು ನಡೆದಿದ್ದುದೂ ಇದೆ. ಪ್ರಮುಖವಾಗಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ (೧೯೬೮) ಸಿದ್ಧಗೊಂಡು ಒಂದಷ್ಟುಮಟ್ಟಿಗೆ ಕಾರ್ಯಗತವೂ ಆದ ಕೊಠಾರಿ ಸಮಿತಿಯ ಶಿಫಾರಸುಗಳನ್ನು (ಕಡ್ಡಾಯ ಪ್ರಾಥಮಿಕ ಶಿಕ್ಷಣ ಇತ್ಯಾದಿ) ಒಂದು ಮೈಲಿಗಲ್ಲೆಂದು ಭಾವಿಸಬಹುದು. ಅನಂತರ ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ (೧೯೮೬) ರಚಿತಗೊಂಡ ಆಯೋಗದ ವರದಿಯಲ್ಲಿ ಸಮಾನಾವಕಾಶ ಮೊದಲಾದ ಅಂಶಗಳು ಪ್ರಾಧಾನ್ಯ ಪಡೆದಿದ್ದವು. ನರೇಂದ್ರ ಮೋದಿಯವರ […]

ಬಂಗಾಳದಲ್ಲಿ ಹಿಂಸಾಚರಣೆಯೇ ಸಂವಾದದ ಭಾಷೆ

ಪಶ್ಚಿಮಬಂಗಾಳದ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಮೇ ಮೊದಲ ವಾರದಲ್ಲಿಯೆ ಆರಂಭಗೊಂಡು ತೃಣಮೂಲ ಕಾಂಗ್ರೆಸಿನ ಗೂಂಡಾ ಪಡೆಗಳಿಂದ ತಿಂಗಳ ಕಾಲ ಅವ್ಯಾಹತವಾಗಿ ನಡೆದ ಹಿಂಸಾಚರಣೆಗಳ, ಅತ್ಯಾಚಾರಗಳ ಸರಣಿಯು ರಾಜ್ಯಾಂಗಮರ್ಯಾದೆಗೆ ಮಾತ್ರವಲ್ಲದೆ ಮಾನವಸಭ್ಯತೆಗೇ ಕಲಂಕಪ್ರಾಯವಾಗಿದೆ. ಕಾನೂನುಪಾಲನೆಯು ಸಾರ್ವಜನಿಕ ಜೀವನದ ಅಡಿಪಾಯವಾಗಿರಬೇಕಾದ ಈ ಕಾಲದಲ್ಲಿ ಇಂತಹ ನಿರ್ಭಿಡೆಯಾದ ಪಾಶವೀಯ ನಡೆಯು ಕಲ್ಪನೆಗೇ ಮೀರಿದ್ದು. ಈ ದೌರ್ಜನ್ಯಗಳು ವಾರಗಳುದ್ದಕ್ಕೂ ನಡೆದವೆಂಬುದೇ ಅವಕ್ಕೆ ಆರೂಢ ಸರ್ಕಾರದ ಬೆಂಬಲವಿದ್ದಿತೆಂಬುದನ್ನು ಸ್ಫುಟಪಡಿಸಿದೆ. ಚುನಾವಣೆಯಲ್ಲಿ ಗೆದ್ದ ಪಕ್ಷವೊಂದು ತಮ್ಮ ವಿರೋಧಪಕ್ಷಗಳವರ ಮೇಲೆ ಆರಿಸಿ ಆರಿಸಿ ಹಲ್ಲೆ ನಡೆಸುವುದು […]

ಮನಸ್ಸಿಗೂ ವ್ಯಾಕ್ಸೀನ್ ಬೇಕಾಗಿದೆ

ಕೊರೋನಾ ಸಾಂಕ್ರಾಮಿಕ ನಿಮಿತ್ತ ಎರಡು ಆವರ್ತ ಲಾಕ್‌ಡೌನ್ ಪರ್ವಗಳನ್ನು ದಾಟಿದ್ದು ಆಗಿದೆ. ಸಾಂಕ್ರಾಮಿಕದ ಪ್ರಕರ್ಷವು ರಕ್ತಬೀಜಾಸುರನನ್ನು ನೆನಪಿಸುತ್ತಿದೆ. ಮೊದಲ ಹಂತಕ್ಕಿಂತ ಆಮೇಲಿನ ಹಂತಗಳು ಹೆಚ್ಚು ಆಘಾತಕಾರಿ ಎನಿಸಿದವು. ಎರಡನೇ ‘ಅಲೆ’ ತಹಬಂದಿಗೆ ಬರುತ್ತಿದ್ದ ಹಾಗೆಯೆ ‘ಬ್ಲ್ಯಾಕ್ ಫಂಗಸ್’ ಇಣುಕಿ ನೋಡುತ್ತಿದೆ. ಮೂರನೇ ಅಲೆಯ ಬಗೆಗೂ ತಜ್ಞರು ಎಚ್ಚರಿಕೆಯನ್ನು ನೀಡುತ್ತಾ ಬರುತ್ತಿದ್ದಾರೆ. ವಿಜ್ಞಾನ ಸಮುದಾಯಕ್ಕೂ ಈಗಿನದು ಅಭೂತಪೂರ್ವ ಸವಾಲೇ ಆಗಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ಲಕ್ಷಾಂತರ ಜೀವಗಳು ಉಳಿದವೆಂಬುದತೂ ವಿವಾದಾತೀತವಾಗಿದೆ. ವೈದ್ಯಕೀಯ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ