ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಕೊರೋನಾ ಎರಡನೇ ಅಲೆಯ ಆಘಾತ

ಕಳೆದ ಹದಿನೈದು ತಿಂಗಳಿಂದ ಕೊರೋನಾ ಸಾಂಕ್ರಾಮಿಕವನ್ನು ಎದುರಿಸಲು ದೇಶವೆಲ್ಲ ಸರ್ವಪ್ರಯತ್ನವನ್ನೂ ತೊಡಗಿಸಿ ಒಂದಷ್ಟುಮಟ್ಟಿನ ನಿಯಂತ್ರಣವನ್ನು ಸಾಧಿಸಿತ್ತು. ಆದರೆ ಎರಡನೇ ಅಲೆಯ ಆಘಾತದ ಪ್ರಮಾಣವೂ ವೇಗವೂ ಎಲ್ಲ ನಿರೀಕ್ಷೆಯನ್ನೂ ಮೀರಿಸಿದೆ. ಮೊದಲ ಅಲೆಯ ಅವಧಿಯಲ್ಲಿ 13 ತಿಂಗಳಲ್ಲಿ ಮೃತರ ಸಂಖ್ಯೆ 4,620ರಷ್ಟು ಇತ್ತು. ಈಗಿನ ಅಲೆಯಲ್ಲಾದರೋ ಒಂದೂವರೆ ತಿಂಗಳೊಳಗೇ ಅಷ್ಟು ಜನ ಅಸುನೀಗಿದ್ದಾರೆ. ಹಿಂದೆಯೇ ದೇಶದಲ್ಲಿ ಆರೋಗ್ಯಸೇವಾ ಲಭ್ಯತೆ ಜನಸಂಖ್ಯೆಗೆ ಪರ್ಯಾಪ್ತವಾಗುವಷ್ಟು ಇರಲಿಲ್ಲ. ಈಗಿನ ಸ್ಥಿತಿಯಂತೂ ಆತಂಕಕಾರಿಯೇ ಆಗಿದೆ. ಅವಶ್ಯ ಪ್ರಮಾಣದ ಲಸಿಕೆ ಪೂರೈಕೆಯಾಗುತ್ತಿಲ್ಲ. ಒಂದು ಹಂತದಲ್ಲಿ ವೆಂಟಿಲೇಟರುಗಳ […]

ಸ್ವಾಸ್ಥ್ಯಜಾಗೃತಿ

ದೇಶದ ಜನತೆಯ ಸ್ವಾಸ್ಥ್ಯದ ಬಗೆಗೆ ಎಲ್ಲರೂ ಚಿಂತಿತರಾಗಬೇಕಾದಂತಹ ಹಲವಾರು ಮಾಹಿತಿಗಳು ಈಚಿನ ವರ್ಷಗಳಲ್ಲಿ ಬರುತ್ತಿವೆ. ತುಂಬಾ ಕಿರಿಯ ಪ್ರಾಯದವರು ಹೃದಯಬೇನೆಗಳಿಗೊಳಗಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆಯೆಂದು ಹೃದಯರೋಗತಜ್ಞರು ಹೇಳುತ್ತಿದ್ದಾರೆ. ಭಾರತೀಯ ಹೃದಯರೋಗಗಳ ಅಧ್ಯಯನ ಸಂಸ್ಥೆ (ಇಂಡಿಯನ್ ಹಾರ್ಟ್ ಅಸೋಸಿಯೇಷನ್) ಇತ್ತೀಚೆಗೆ ಹೊರಹಾಕಿರುವ ಈ ಮಾಹಿತಿ ತಳಮಳ ತರಿಸಬೇಕಾದದ್ದು: ಇಡೀ ಜಗತ್ತಿನಲ್ಲಿ ಹೃದಯಬೇನೆಗಳಿಗೊಳಗಾಗಿರುವವರಲ್ಲಿ ಭಾರತೀಯರ ಪ್ರಮಾಣ ಶೇ. 60ರಷ್ಟಿದೆ. ಹೃದಯಾಘಾತಕ್ಕೆ ಒಳಗಾಗುತ್ತಿರುವವರಲ್ಲಿ ಅರ್ಧದಷ್ಟು ಜನರ ವಯಸ್ಸು 50ಕ್ಕಿಂತ ಕಡಮೆ; ಶೇ. 25ರಷ್ಟು ಜನ 40 ವರ್ಷಕ್ಕಿಂತ ಕಡಮೆಯವರು. ಈ ದುಃಸ್ಥಿತಿಗೆ ಪ್ರಮುಖ […]

ಊರ್ಜಿತಸತ್ತ್ವ

ಇದೀಗ ದೇಶವು ಎಪ್ಪತ್ತೆರಡನೆಯ ಗಣತಂತ್ರದಿನವನ್ನು ಆಚರಿಸಿ ಸ್ವಾತಂತ್ರ್ಯದ ಎಪ್ಪತ್ತೈದನೆ ವರ್ಷಾಚರಣೆಯ ಶುಭಪರ್ವದತ್ತ ಹೆಜ್ಜೆಯಿರಿಸುತ್ತಿದೆ. ಈವರೆಗೆ ಹತ್ತಾರು ಬಾಹ್ಯ ಹಾಗೂ ಆಂತರಿಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದಾಗಿದೆ. ದೇಶದ ಸ್ವಾಯತ್ತತೆಯನ್ನೂ ವರ್ಚಸ್ಸನ್ನೂ ನಿಷ್ಪ್ರಭಗೊಳಿಸುವ ಪ್ರಯತ್ನಗಳು ದಶಕಗಳಿಂದ ನಡೆದಿವೆ. ರಾಜಕೀಯ ಸ್ವಾತಂತ್ರ್ಯ ಈಚಿನದಷ್ಟೆ; ಆದರೆ ದೇಶದ ‘ಊರ್ಜಿತಸತ್ತ್ವ’ ಬಹಳ ಹಿಂದಿನದು. ಅದನ್ನು ಆಗಂತುಕ ಸನ್ನಿವೇಶಗಳು ದುರ್ಬಲಗೊಳಿಸಲು ಸಾಧ್ಯವಾಗಿಲ್ಲ. ಹಿಂದಿನ ದುರಾಕ್ರಮಣಗಳನ್ನೂ ಯುದ್ಧಗಳನ್ನೂ ಕ್ಷಾಮಗಳನ್ನೂ ಬಲಿಷ್ಠ ಬಾಹ್ಯಶಕ್ತಿಗಳ ಪಾಳೆಗಾರಿಕೆಯನ್ನೂ ಸಮರ್ಥವಾಗಿ ಎದುರಿಸಿದ್ದು ಚಾರಿತ್ರಿಕ ಸಂಗತಿ. ಈಚೆಗೆ ಕೋವಿಡ್-19 ಸಾಂಕ್ರಾಮಿಕವನ್ನು ಭಾರತ ನಿರ್ವಹಿಸಿದ ರೀತಿಯಂತೂ […]

ಪುನಶ್ಚೇತನ

ಕಳೆದ ವರ್ಷದ ಆರಂಭದಲ್ಲಿ ಜಗತ್ತನ್ನು ಆಕ್ರಮಿಸಿದ ಕೋವಿಡ್-19 ಸಾಂಕ್ರಾಮಿಕ ಈ ವರ್ಷದ ಆರಂಭದಲ್ಲಿ ಬಹುಮಟ್ಟಿಗೆ ಹಿಂದಕ್ಕೆ ಸರಿಯತೊಡಗಿರುವ ಲಕ್ಷಣಗಳು ಗೋಚರಿಸಿವೆ. ಕಳೆದ ಹತ್ತು-ಹನ್ನೊಂದು ತಿಂಗಳಲ್ಲಿ ದೇಶದ ಸಾಮಾಜಿಕ-ಆರ್ಥಿಕ ಜೀವನವಷ್ಟೂ ಗ್ರಹಣಗ್ರಸ್ತವಾದಂತಿತ್ತು. ಜನರಲ್ಲಿ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಅನುಶಾಸನವನ್ನು ತಂದಿತೆಂಬ ಪ್ರಶಂಸೆಗೂ ವೈರಾಣು ಅರ್ಹವಾಗಿದೆ. ಎಲ್ಲಿಂದಲೊ ಬಂದೆರಗಿದ ವಿಪತ್ತನ್ನು ಶಾಪವಾಗಿ ಭಾವಿಸದೆ ಅವಕಾಶವನ್ನಾಗಿ ಪರಿವರ್ತಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಮುತ್ಸದ್ದಿತನ. ಅದರಿಂದಾಗಿ ಆತ್ಮನಿರ್ಭರತೆಯತ್ತಲೂ ಸ್ವಾವಲಂಬನೆಯತ್ತಲೂ ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ ಸಲ್ಲಬೇಕೆನ್ನುವತ್ತಲೂ ದೇಶದ ಗಮನ ಹರಿಯುವಂತಾಯಿತು. ಪರಿಣಾಮವಾಗಿ ಮುಖ್ಯವಾದ ಆರ್ಥಿಕ […]

ಸ್ವಸ್ಥ ಜೀವನಶೈಲಿ

ಸ್ವಸ್ಥಜೀವನಶೈಲಿ ಪ್ರತಿ ವರ್ಷದಂತೆ ಈ ವರ್ಷ (2021ರ) ‘ಉತ್ಥಾನ’ದ ಜನವರಿ ‘ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕ’ಕ್ಕೆ ಆಯ್ದುಕೊಂಡಿರುವ ವಿಷಯ ‘ಸ್ವಸ್ಥ ಜೀವನಶೈಲಿ’. ‘ವಿಶ್ವ ಆರೋಗ್ಯ ಸಂಸ್ಥೆ’(WHO)ಯು ಸ್ವಾಸ್ಥ್ಯ ಎಂದರೆ ಏನು ಎಂಬುದನ್ನು ಈ ರೀತಿಯಾಗಿ ವಿವರಿಸಿದೆ – ‘Health is a state of complete physical, mental, social and spiritual well-being and not merely the absence of disease or infirmity.’ ಎಂದರೆ, ಒಬ್ಬ ವ್ಯಕ್ತಿಯು ಸ್ವಾಸ್ಥ್ಯಪೂರ್ಣ ವ್ಯಕ್ತಿ ಎನಿಸಬೇಕಾದರೆ ಆತನಲ್ಲಿ ರೋಗಗಳು ಅಥವಾ […]

‘ಅಲೆ’ಯಲ್ಲವೀ ನಡೆಯು ವಿಧಿಯ ಸೆಳೆಯು

ಸಂಪಾದಕೀಯ    ಸದಾ ಚಲನಶೀಲವಾಗಿರುವ ರಾಜಕಾರಣದಲ್ಲಿ ಇದು ಅಂತಿಮ ಸಮರ, ಇದು ಭವಿಷ್ಯವನ್ನು ನಿರ್ಧರಿಸುವ ಘಳಿಗೆ – ಎಂಬಂತಹ ಘೋಷಣೆಗಳನ್ನು ಜನ ಅದೆಷ್ಟು ಸಲ ಕೇಳಿದ್ದಾರೆಂದರೆ ಈಗ ಅವು ಹಾಸ್ಯಾಸ್ಪದವೆಂದೇ ಎನಿಸುವ ಸ್ಥಿತಿಯುಂಟಾಗಿದೆ.  ಅಮೆರಿಕದ ಚುನಾವಣೆಗಿಂತ ಮಹತ್ತ್ವದ್ದೆಂಬಂತೆ ಬಿಹಾರ ಚುನಾವಣೆಯ ಭವಿತವ್ಯ ಕುರಿತು ದಿನಗಳಗಟ್ಟಲೆ ವಿಶ್ಲೇಷಣೆಗಳು ನಡೆದದ್ದೂ ನಡೆದದ್ದೆ! ಫಲಿತಾಂಶಘೋಷಣೆಯ ಹಿಂದಿನ ದಿನವೂ ‘ಈ ಚುನಾವಣೆಯಿಂದ ಎನ್.ಡಿ.ಎ. ಹಿನ್ನಡೆ ಆರಂಭವಾಗುತ್ತದೆ’, ‘ಮಹಾಮೈತ್ರಿಕೂಟದ ಸಾರಥಿ ತೇಜಸ್ವಿ ಯಾದವ್ ಬಹುಮತ ಗಳಿಸಲಿದ್ದಾರೆ’ ವಗೈರೆ ಭವಿಷ್ಯವಾಣಿಗಳು ಮತದಾನೋತ್ತರ ಸಮೀಕ್ಷೆಗಳವರೆಗೆ ಮೆರೆದವು. ಬಿಹಾರದಲ್ಲಿ ಮಾತ್ರವಲ್ಲದೆ […]

ಕೊರೋನೋತ್ತರ ಆರ್ಥಿಕ ಉಜ್ಜೀವನ

ಕಳೆದ ಆರು ತಿಂಗಳಲ್ಲಿ ಕೊರೋನಾ ವಿಷಾಣು ನಿರ್ವಹಣೆಗೆ ಆದ್ಯತೆ ನೀಡಬೇಕಾಗಿ ಬಂದುದರ ಅನಿವಾರ್ಯತೆಯಿಂದಾಗಿ ಆರ್ಥಿಕ ಕ್ಷೇತ್ರದಲ್ಲಿ ಒಂದಷ್ಟುಮಟ್ಟಿನ ಹಿನ್ನಡೆಯಾದದ್ದು ಸಹಜ. ಹೇಗೊ ಬಂದೊದಗಿದ ವಿಕಟ ಪರಿಸ್ಥಿತಿಗೆ ಪ್ರಧಾನಿಯವರ ಸಕಾಲಿಕ ಕರೆಗೆ ಓಗೊಟ್ಟು ದೇಶದ ಜನತೆಯೆಲ್ಲ ಸಂಯಮವನ್ನೂ ಕ್ಷಮತೆಯನ್ನೂ ಮೆರೆದಿರುವುದು ಮೇಲ್ಮಟ್ಟದ ಹೊಣೆಗಾರಿಕೆಯನ್ನು ಬಿಂಬಿಸಿದೆ. ಜನತೆಯಲ್ಲಿ ಇದೇ ಹೊಣೆಗಾರಿಕೆಯ ಮನೋಧರ್ಮ ಮುಂದುವರಿಯುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಇದೀಗ ತೋರಿರುವ ಆರ್ಥಿಕ ಹಿನ್ನಡೆಯನ್ನೂ ಜನತೆ ಸವಾಲಾಗಿ ಸ್ವೀಕರಿಸಲು ಸಾರ್ವಜನಿಕರು ಮಾನಸಿಕವಾಗಿ ಸಿದ್ಧರಿರುವರೆಂಬುದರಲ್ಲಿ ಶಂಕೆಗೆ ಕಾರಣವಿಲ್ಲ. ತಾತ್ಕಾಲಿಕ ಹಿನ್ನಡೆಯಿಂದಾಗಿ ಕಳೆದ ಆರು ವರ್ಷಗಳ […]

ಆತ್ಮನಿರ್ಭರತೆಯತ್ತ ಹೆಜ್ಜೆ ಹಾಕೋಣ

ಈಗ್ಗೆ ಹದಿಮೂರು ತಿಂಗಳ ಹಿಂದೆ  (30 ಮೇ 2019) ಎರಡನೇ ಬಾರಿಗೆ ಭಾಜಪಾ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಷ್ಟ್ರಜೀವನದ ಚಹರೆಯೇ ಬದಲಾಗಿದೆಯೆಂದರೆ ಹೆಚ್ಚು ಹೇಳಿದಂತಾಗಲಿಲ್ಲ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ 370ನೇ ವಿಧಿಯ ರದ್ಧತಿ, ನೆರೆಯ ರಾಷ್ಟ್ರಗಳಲ್ಲಿ ಅವರ್ಣನೀಯ ಕಿರುಕುಳಗಳಿಗೊಳಗಾಗಿದ್ದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿಕೆ ಮೊದಲಾದ ಕ್ರಮಗಳು ಇತಿಹಾಸಾರ್ಹ. ಬಹುತೇಕ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ, ಬಡವರಿಗೆ ಸವಲತ್ತುಗಳ ನೇರ ವರ್ಗಾವಣೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಪ್ರೋತ್ಸಾಹನ ಮತ್ತು ಅದರ […]

ಪ್ರಕೃತಿಯ ಸೇಡು

ಸಂಪಾದಕೀಯ ವಿಜ್ಞಾನ-ತಂತ್ರಜ್ಞಾನಗಳು ಮಾನವತೆಯ ಹಾಗೂ ಇಡೀ ಜೀವರಾಶಿಯ ಹಿತದ ಸಾಧನೆಗಾಗಿ ಮಾತ್ರ ನಡೆಯುವುದು ಆಪೇಕ್ಷಣೀಯ ಎಂದು ಹೇಳುವುದು ಚರ್ವಿತಚರ್ವಣವಾದೀತು. ಆದರೆ ಇಂದು ತದ್ವಿರುದ್ಧ ಸ್ಥಿತಿಯೇ ಇದೆ. ವೈಜ್ಞಾನಿಕ ಸಂಶೋಧನೆಯ ಸಿಂಹಪಾಲು ಸಮರಸಂಬಂಧಿತ ಆವಿಷ್ಕರಣಗಳಿಗೇ ಮೀಸಲಾಗಿರುತ್ತದೆ. ಎಲ್ಲ ಪ್ರಬಲ ದೇಶಗಳಲ್ಲಿಯೂ ಇದೇ ಸ್ಥಿತಿ ಇದೆ. ಸಮರೋಪಯೋಗಿ ಶೋಧಗಳು ಮುಂದುವರಿದಂತೆ ಸ್ವಯಂ  ವಿಜ್ಞಾನಿಗಳಲ್ಲಿಯೂ ಅವುಗಳ ಪಶ್ಚಾತ್ಪರಿಣಾಮಗಳನ್ನು ನಿಯಂತ್ರಿಸುವ ಶಕ್ತಿ ಉಳಿದಿರುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ನಿರತರು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರಮೌಲ್ಯವಾಗಿ ಸ್ವೀಕರಿಸಿ ವರ್ತಿಸುವುದನ್ನು ಬಿಟ್ಟು ಬೇರೆ ಪರಿಹಾರ ಇರದು; ‘ಮಹತೀವಿನಷ್ಟಿಃ’ ಎಂಬ ದುಷ್ಪರಿಣಾಮಸರಣಿಯಿಂದ […]

ಕೌಟುಂಬಿಕತೆ ಬಲಿಷ್ಠವಾಗಲಿ

“ಇತ್ತೀಚೆಗೆ ಅವಿಭಕ್ತ ಕುಟುಂಬ ಪದ್ಧತಿ ದುರ್ಬಲವಾಗುತ್ತಿದೆ. ಜನರಲ್ಲಿ ನೈತಿಕಪ್ರಜ್ಞೆ ಕುಸಿಯುತ್ತಿದೆ. ಆಧುನಿಕವೆನಿಸಿಕೊಳ್ಳುವ ಆಡಂಬರದ ಜೀವನರೀತಿ ಪ್ರಚುರಗೊಂಡಿರುವುದೂ ದಾಂಪತ್ಯವಿಚ್ಛೇದನಗಳಿಗೆ ಒಂದು ಪ್ರಮುಖ ಕಾರಣವೆನಿಸುತ್ತಿದೆ” – ಎಂದು ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ವಿಚ್ಛೇದನ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಹರಿಹರ, ದಾವಣಗೆರೆ – ಈ ಎರಡೇ ತಾಲೂಕುಗಳಲ್ಲಿ ಕಳೆದೊಂದು ದಶಕದಲ್ಲಿ ಸಲ್ಲಿಸಲಾಗಿದ್ದ ವಿಚ್ಛೇದನ ಅರ್ಜಿಗಳು 2848. ಈಗ್ಗೆ ಮೂವತ್ತು-ನಲವತ್ತು ವರ್ಷ ಹಿಂದೆ ವಿಚ್ಛೇದನ ಪ್ರಕರಣಗಳು ತೀರಾ ವಿರಳವಾಗಿದ್ದವು. ಈಗ ಜಿಲ್ಲಾ ಕೌಟುಂಬಿಕ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ