ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಶ್ರೀಶಾರದಾಪೀಠ ದಕ್ಕುವುದೆಂದು?

ಅಂತರರಾಷ್ಟ್ರೀಯ ಸ್ತರದಲ್ಲಿ, ದೇಶ-ವಿದೇಶ ಸಂಬಂಧಗಳಲ್ಲಿ ಕೆಲವು ಹೊಂದಾಣಿಕೆಗಳು ಎಲ್ಲೆಡೆ ಪಾಲಿಸಲ್ಪಡುತ್ತವೆ. ಅಂತಹ ಒಂದು ಸಂಗತಿಯೆಂದರೆ ಯಾತ್ರಾಸ್ಥಳಗಳನ್ನೂ ತೀರ್ಥಕ್ಷೇತ್ರಗಳನ್ನೂ ಸಂದರ್ಶಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶಗಳಿರುತ್ತವೆ; ಮತ್ತು ಅವು ಇರುವ ದೇಶಗಳು ಅಂತಹ ಪವಿತ್ರ ಸ್ಥಳಗಳ ದುರಸ್ತಿಗೂ ಗಮನ ಕೊಡುತ್ತವೆ. ಮಧ್ಯಪ್ರಾಚ್ಯದಲ್ಲಿ ಮುಸ್ಲಿಂ ಬಹುಸಂಖ್ಯಾತ ರಾಜ್ಯಗಳಲ್ಲಿ ಕ್ರೈಸ್ತ ಕ್ಷೇತ್ರಗಳಿವೆ. ಯೂರೋಪಿನ ಹಲವೆಡೆ ಕ್ರೈಸ್ತ ಬಾಹುಳ್ಯದ ಪ್ರದೇಶಗಳಲ್ಲಿ ಅನ್ಯಮತೀಯರಿಗೆ ಪವಿತ್ರಗಳೆನಿಸಿರುವ ಸ್ಥಾನಗಳಿವೆ. ಅನ್ಯಮತೀಯವೆಂಬ ಕಾರಣದಿಂದ ಆ ಕ್ಷೇತ್ರಗಳಾವವೂ ಅಲಕ್ಷ್ಯಕ್ಕೆ ಗುರಿಯಾಗಿಲ್ಲ. ಈ ಹಿನ್ನೆಲೆಯನ್ನು ಸ್ಮರಿಸುತ್ತಿರುವುದರ ಉದ್ದೇಶ ಭೌಗೋಳಿಕವಾಗಿ ಈಗಿನ ಪಾಕಿಸ್ತಾನ-ಆಕ್ರಾಂತ ಭಾಗದಲ್ಲಿರುವ […]

ಜಟಿಲ ಸಮಸ್ಯೆಗೆ ಸರಳ ಪರಿಹಾರ ಇರದು

ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ‘ಮನ್ ಕೀ ಬಾತ್’ ಪ್ರಸಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇದೀಗ ನಾಡು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಜಲಕ್ಷಾಮ ಎಂದು ಹೇಳಿದುದು ಸಮುಚಿತವಾಗಿದೆ. ನೀರಿನ ಮಿತವ್ಯಯ ಮತ್ತು ಸಂರಕ್ಷಣೆ, ಹಳೆಯ ಹಾಗೂ ಹೊಸ ವಿಧಾನಗಳ ಮೂಲಕ ಜಲಮೂಲಗಳ ಸಂವರ್ಧನ – ಇವು ಆದ್ಯತೆಯನ್ನು ಬೇಡುತ್ತವೆಂಬ ಪ್ರಧಾನಿಯವರ ಕಳಕಳಿಯ ಮಾತನ್ನು ಎಲ್ಲರೂ ಅಂತಃಸ್ಥ ಮಾಡಿಕೊಳ್ಳಬೇಕಾಗಿದೆ. ನೆರೆಯ ಚೆನ್ನೈ ಎದುರಿಸುತ್ತಿರುವ ಜಲಾಭಾವವು ಮನ ಕಲಕುತ್ತದೆ. ಬೆಂಗಳೂರು ಸೇರಿದಂತೆ ಇನ್ನೂ ಇಪ್ಪತ್ತು ನಗರಗಳಲ್ಲಿ ಅಂತರ್ಜಲವಷ್ಟೂ ಕ್ಷಿಪ್ರವಾಗಿ […]

ನ್ಯಾಯ ವಿಡಂಬನೆ

ಹಲವೊಮ್ಮೆ ಅಪರಾಧ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಂದ ಆಪಾದಿತರು ನಿರಪರಾಧಿಗಳೆಂದು ಘೋಷಿತರಾಗುವುದು ವಿರಳವಲ್ಲವಾದರೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಯೆ ಅತಿದೊಡ್ಡದೆಂಬ ಕುಖ್ಯಾತಿಗೆ ಪಾತ್ರವಾಗಿದ್ದ ಮತ್ತು ಯುಪಿಎ ಅಧಿಕಾರಾವಧಿಯ ಇದೇ ನಮೂನೆಯ ಅನ್ಯ ’ಸಾಧನೆ’ಗಳನ್ನೆಲ್ಲ ಹಿಂದಿಕ್ಕಿದ್ದ ೨-ಜಿ ಸ್ಪೆಕ್ಟ್ರಂ ಹಗರಣ ನಡೆಯಿತೆನ್ನಲು ಆಧಾರಗಳಿಲ್ಲವೆಂದು ಹೇಳಿ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಎಂ. ಕರುಣಾನಿಧಿಯವರ ಪುತ್ರಿ ಕನಿಮೋಳಿ ಸೇರಿದಂತೆ ಎಲ್ಲ ಆಪಾದಿತರೂ ನಿರ್ದೋಷಿಗಳೆಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಕಳೆದ (೨೦೧೭) ಡಿಸೆಂಬರ್ ೨೧ರಂದು ತೀರ್ಪನ್ನಿತ್ತಿರುವುದು ಇಡೀ ದೇಶಕ್ಕೇ ಅಚ್ಚರಿಯನ್ನೂ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ