ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ | ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ || – ಭಗವದ್ಗೀತಾ, ೧೮:೨೮ “ಅಜಾಗರೂಕತೆ, ಸಂಸ್ಕಾರಹೀನತೆ, ಅವಿನಯ, ಶಠತೆ, ಕಾರ್ಯಶೀಲತೆ ಇಲ್ಲದಿರುವುದು, ಆಲಸ್ಯ, ನಿಷ್ಕಾರಣ ವಿಷಾದಪಡುವುದು, ದೀರ್ಘಸೂತ್ರತೆ – ಈ ಸ್ವಭಾವಗಳನ್ನು ಬೆಳೆಸಿಕೊಂಡವನು ‘ತಾಮಸ ಕರ್ತ’ನೆನಿಸುತ್ತಾನೆ.” ಆಗಬೇಕಾದ ಕೆಲಸಗಳಿಂದ ವಿಮುಖರಾಗುವುದು, ಕಲ್ಪಿತ ಕಾರಣಗಳನ್ನು ಮುಂದೊಡ್ಡಿ ನಿರ್ಣಯಗಳನ್ನು ಮುಂದಕ್ಕೆ ಹಾಕುವುದು, ಏನೋ ತೊಂದರೆಯಾಗುತ್ತದೆಂದು ಶಂಕೆಪಟ್ಟು ನಿಷ್ಕ್ರಿಯರಾಗಿರುವುದು – ಇಂತಹ ದೀರ್ಘಸೂತ್ರತೆಯು ವೈಯಕ್ತಿಕ ವಹಿವಾಟುಗಳಲ್ಲಿಯೂ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅದಕ್ಷತೆಯಲ್ಲಿ ಪರಿಣಮಿಸುತ್ತದೆ. […]
ದೀಪ್ತಿ
Month : February-2023 Episode : Author :