ಮಹಿಳೆಯರ ಏಳ್ಗೆಗಾಗಿಯೇ ಸಾಮಾಜಿಕ ಕಾರ್ಯಗಳು ಸ್ಥಿರವಾಗಿ ನಡೆಯುವಂತೆ ವೀರೇಶಲಿಂಗಂ ‘ಶ್ರೀವಿವೇಕವರ್ಧಿನಿ’ (Knowledge Improver) ಎಂಬ ತೆಲುಗು ಮಾಸಪತ್ರಿಕೆಯನ್ನು 1876ರಲ್ಲಿ ಪ್ರಕಟಿಸಿದರು. ಪ್ರಾರಂಭದಲ್ಲಿ ಮದರಾಸಿನಿಂದ ಅಚ್ಚಾಗಿ ಬರುತ್ತಿದ್ದ ಈ ಪತ್ರಿಕೆ ಕ್ರಮೇಣ ಬಹಳ ಜನಪ್ರಿಯಗೊಂಡ ಕಾರಣ ತಾವೇ ರಾಜಮಂದ್ರಿಯಲ್ಲಿ ಸ್ವಂತ ಮುದ್ರಣಾಲಯವನ್ನು ಪ್ರಾರಂಭಿಸಿ ಪ್ರಕಟಿಸಿದರು. ಅನಂತರದಲ್ಲಿ ‘ಸತಿಹಿತಬೋಧಿನಿ’ ಎಂಬ ಮತ್ತೊಂದು ಪತ್ರಿಕೆಯನ್ನು ಮಹಿಳೆಯರಿಗಾಗಿ ಹೊರಡಿಸಿದರು. ಆಂಧ್ರಪ್ರದೇಶದ ತೆಲುಗು ಸಾಹಿತ್ಯ ಚರಿತ್ರೆ ಹಾಗೂ ಸಮಾಜಸೇವೆ ಮತ್ತು ಸುಧಾರಣೆ ಕಾರ್ಯಗಳಲ್ಲಿ ಕಂದುಕೂರಿ ವೀರೇಶಲಿಂಗಂ ಪಂತುಲು ಉನ್ನತ ಸ್ಥಾನವನ್ನು ಗಳಿಸಿಕೊಂಡು ಮಹಾವಿದ್ವತ್ಪಂಕ್ತಿಯಲ್ಲಿಯೂ ಪುರಸ್ಕøತರಾಗಿದ್ದವರು. […]
ಕಂದುಕೂರಿ ವೀರೇಶಲಿಂಗಂ ಪಂತುಲು
Month : June-2021 Episode : Author : ವೇಮಗಲ್ ಸೋಮಶೇಖರ್