ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2016 > February

ರಾಜ್ಯಸಭೆಯ ಸಾರ್ಥಕತೆ

ಭಾರತದ ಸಂಸತ್ತಿನ ಸಂರಚನೆಯ ಸ್ವರೂಪದ ಬಗೆಗೆ ಪುನರಾಲೋಚನೆ ಮಾಡಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ರಾಜ್ಯಾಂಗರಚನೆಯ ಸಮಯದಲ್ಲಿ ರಾಜ್ಯಸಭೆಯ ಅಸ್ತಿತ್ವಕ್ಕೆ ಪ್ರೇರಣೆಯನ್ನು ಒದಗಿಸಿದ್ದುದು ಬಹುಮಟ್ಟಿಗೆ ಸಂಖ್ಯಾಧಾರಿತವಾಗಿ ರಚನೆಗೊಳ್ಳುವ ಲೋಕಸಭೆಯ ನಡವಳಿಯಲ್ಲಿ ತೋರಬಹುದಾದ ಅಸಮರ್ಪಕತೆಗಳಿಗೆ ಪರಿಹಾರ ನೀಡಬಲ್ಲ ಪ್ರತಿಭಾರವಾಗಿ ರಾಜ್ಯಸಭೆಯು ಕೆಲಸ ಮಾಡಬೇಕೆಂಬುದು. ಈ ಹಿನ್ನೆಲೆಯಲ್ಲಿಯೆ ವಿವಿಧ ಜೀವನಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವವನ್ನು ಕಲ್ಪಿಸುವ ಪದ್ಧತಿಯನ್ನು ನೆಲೆಗೊಳಿಸಲಾಗಿತ್ತು. ಕೆಲವು ವರ್ಷಗಳ ಕಾಲ ಈ ವ್ಯವಸ್ಥೆಯು ತಕ್ಕಮಟ್ಟಿಗೆ ಕೆಲಸ ಮಾಡಿದ್ದುದೂ ಹೌದು. ಆದರೆ ಈಚಿನ ದಶಕಗಳಲ್ಲಿ ರಾಜ್ಯಸಭೆಯನ್ನು ಬಲಿಷ್ಠ ಪಕ್ಷದ ಉಪಜೀವಿಗಳಾದವರಿಗೆ […]

ಕವನಗಳು

ಕವನಗಳು

ರೈತನ ಹಾಡು-ಪಾಡು ೧ ಭೂಮಿತಾಯಿಯ ಬೆವರು ಅಂತರ್ಜಲವಾಗಿ ಜಿನುಗಿ ಜುಳುಜುಳು ನಾದವಾಗಿ ಬಂತೈ ಗಂಗೆಯ ತೇರು! ಝರಿ, ಹಳ್ಳ, ತೊರೆಯಾಗುತ್ತ ತೊರೆ ತುಂಬಿ ಹೊಳೆಯಾಗಿ ಕಾಡುಮೇಡಲೆಯುತ್ತ ಸಾಗಿ ಬೆಟ್ಟ ಹತ್ತಿ ಕಣಿವೆಗೆ ಧುಮುಕುತ್ತ ನಿರಂತರ ಓಟವೇ ಆತ್ಮಬಲ! ದಣಿದಷ್ಟು ಚಿಮ್ಮೋ ಹುಮ್ಮಸ್ಸು ಹರಿವ ಹುಳಿಕಿಯೇ ಯಶಸ್ಸು ಜಗವೇ ಬೆವರ ಮಾಯಾಜಾಲ ಮಳೆ ಹೊಳೆ ಬೆವರ ರೂಪಾಂತರ; ಜಂಗಮವೆಲ್ಲ ಸಂಗಮಿಸೆ ಮಹಾಸಾಗರ! ೨ ಕಿಸಾನ್ ಚಾನೆಲ್ಲಿಗೆ ರಾಯಭಾರಿಯಾದರೆ ಅಮಿತಾಭ ಬಚ್ಚನ್‌ಗೆ ರೂಪಾಯಿ ಆರು ಕೋಟಿ! ಖರೆ ಖರೆ….. ಉತ್ತಿ […]

ದೀಪ್ತಿ

ದೀಪ್ತಿ

ಅಹೋ ಏಷಾಂ ವರಂ ಜನ್ಮ ಸರ್ವಪ್ರಾಣ್ಯುಪಜೀವನಮ್| ಸುಜನಸ್ಯೇವ ಯೇಷಾಂ ವೈ ವಿಮುಖಾ ಯಾನ್ತಿ ನಾರ್ಥಿನಃ|| – ಭಾಗವತ ಸಾರ್ಥಕವಾದ ಜನ್ಮವೆಂದರೆ ಈ ಮರಗಳದು. ಇವು ಎಲ್ಲ ಪ್ರಾಣಿಗಳಿಗೂ ಜೀವನವನ್ನು ಕಲ್ಪಿಸುತ್ತವೆ. ಸಜ್ಜನರಲ್ಲಿಗೆ ಬಂದ ಯಾಚಕರು ಹೇಗೆ ಎಂದೂ ಬರಿಗೈಯಾಗಿ ಹಿಂದಿರುಗುವುದಿಲ್ಲವೋ ಹಾಗೆ ಈ ಮರಗಳಲ್ಲಿ ಆಸರೆ ಕೋರಿ ಬಂದವರಾರೂ ನಿರಾಶೆಗೊಳ್ಳುವುದಿಲ್ಲ.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ