ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2020 > ಕೌಟುಂಬಿಕತೆ ಬಲಿಷ್ಠವಾಗಲಿ

ಕೌಟುಂಬಿಕತೆ ಬಲಿಷ್ಠವಾಗಲಿ

“ಇತ್ತೀಚೆಗೆ ಅವಿಭಕ್ತ ಕುಟುಂಬ ಪದ್ಧತಿ ದುರ್ಬಲವಾಗುತ್ತಿದೆ. ಜನರಲ್ಲಿ ನೈತಿಕಪ್ರಜ್ಞೆ ಕುಸಿಯುತ್ತಿದೆ. ಆಧುನಿಕವೆನಿಸಿಕೊಳ್ಳುವ ಆಡಂಬರದ ಜೀವನರೀತಿ ಪ್ರಚುರಗೊಂಡಿರುವುದೂ ದಾಂಪತ್ಯವಿಚ್ಛೇದನಗಳಿಗೆ ಒಂದು ಪ್ರಮುಖ ಕಾರಣವೆನಿಸುತ್ತಿದೆ” – ಎಂದು ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ವಿಚ್ಛೇದನ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಹರಿಹರ, ದಾವಣಗೆರೆ – ಈ ಎರಡೇ ತಾಲೂಕುಗಳಲ್ಲಿ ಕಳೆದೊಂದು ದಶಕದಲ್ಲಿ ಸಲ್ಲಿಸಲಾಗಿದ್ದ ವಿಚ್ಛೇದನ ಅರ್ಜಿಗಳು 2848. ಈಗ್ಗೆ ಮೂವತ್ತು-ನಲವತ್ತು ವರ್ಷ ಹಿಂದೆ ವಿಚ್ಛೇದನ ಪ್ರಕರಣಗಳು ತೀರಾ ವಿರಳವಾಗಿದ್ದವು. ಈಗ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಒಂದರಲ್ಲಿಯೇ ವರ್ಷಕ್ಕೆ ಇನ್ನೂರರಿಂದ ಮುನ್ನೂರರಷ್ಟು ವಿಚ್ಛೇದನ ಅರ್ಜಿಗಳು ದಾಖಲೆಗೊಳ್ಳುತ್ತಿವೆ. ಇದರ ಒಂದು ಪರಿಣಾಮವಾಗಿ ಗಣನೀಯ ಸಂಖ್ಯೆಯ ಅಪ್ರಾಪ್ತವಯಸ್ಕ ಮಕ್ಕಳ ಉಸ್ತುವಾರಿಸಮಸ್ಯೆಯೂ ಬೆಳೆಯುತ್ತಿದೆ. ಈ ಸಂಕೀರ್ಣ ಸಮಸ್ಯೆಗೆ ಮೂಲಭೂತ ಪರಿಹಾರವನ್ನು ಬಹುಶಃ ಕಾನೂನಿನ ಕಕ್ಷೆಯಿಂದ ಆಚೆಗೇ ಅರಸಬೇಕಾದೀತೆನಿಸುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ದೃಢಪಡಿಸುವುದು ಮಾತ್ರ ಅಂತಿಮಪರಿಹಾರವಾದೀತು. ದಾಂಪತ್ಯದಿಂದ ವಿಚ್ಛೇದನ ಕೋರುತ್ತಿರುವವರಲ್ಲಿ ಅಧಿಕಸಂಖ್ಯೆಯವರು ನವವಿವಾಹಿತರು – ಎಂಬ ಸಂಗತಿಯೂ ಹೊರಹೊಮ್ಮಿದೆ. ಇದನ್ನೆಲ್ಲ ಗಮನಿಸುವಾಗ ಶಿಷ್ಟವಾದ ಕೌಟುಂಬಿಕ ವ್ಯವಸ್ಥೆಯನ್ನು ಬಲಪಡಿಸಲು ವ್ಯಾಪಕ ಆಂದೋಲನ ನಡೆಯುವುದು ತೀರಾ ಆವಶ್ಯಕವೆನಿಸುತ್ತದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ