ಪ್ರಮುಖರ ಬಂಧನದಿಂದಾಗಿ ತಲೆದೋರಿದ್ದ ನಾಯಕತ್ವಾಭಾವ, ಹೆಚ್ಚು ಬಿಗಿಗೊಳ್ಳುತ್ತಿದ್ದ ಸರ್ಕಾರೀ ದಮನಶಾಹಿ – ಈ ಪ್ರತಿಕೂಲ ಸನ್ನಿವೇಶದಲ್ಲಿಯೂ ನಿರ್ಭೀತ ರಾಷ್ಟ್ರಭಕ್ತರ ಪ್ರಭುತ್ವವಿರೋಧಿ ಭೂಗತ ಚಟುವಟಿಕೆಗಳು ನಿಲ್ಲಲಿಲ್ಲ. ಇನ್ನು ಸ್ವದೇಶೀ ಆಂದೋಲನವಂತೂ ದೇಶದೆಲ್ಲೆಡೆ ವೃದ್ಧಿಂಗತವಾಗಿತ್ತು. ಅರವಿಂದರ ಸ್ಥಾನಾಂತರದಿಂದಾಗಿ ನಿವೇದಿತಾ ವಹಿಸಿಕೊಳ್ಳಲೇಬೇಕಾಗಿಬಂದ ಕರ್ಮಯೋಗಿನ್ ಪತ್ರಿಕೆಗಾಗಿ ಅವರು ಮೌಲಿಕ ಲೇಖನಗಳನ್ನು ಬರೆದರು. ಆ ಬರಹಗಳಲ್ಲಿ ಅವರು ಸ್ಫುಟೀಕರಿಸಿದ ರಾ ದರ್ಶನವು ಚಿರಕಾಲಿಕ ಸಂಗತತೆಯುಳ್ಳದ್ದಾಗಿದೆ. ಉದಾಹರಣೆಗೆ ೧೯೧೦ ಮಾರ್ಚ್ ೧೨ರ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಅವರು ಹೀಗೆಂದಿದ್ದರು: ವೇದ-ಉಪನಿಷತ್ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ಧರ್ಮಸಂಸ್ಥಾಪನೆ ಮತ್ತು ರಾಜ್ಯನಿರ್ಮಿತಿಯಲ್ಲಿ ಶ್ರೇಷ್ಠ […]
ಕೆಳಗಿಳಿದ ಜವನಿಕೆ
Month : July-2018 Episode : ನಿವೇದಿತಾ ಸ್ಮರಣ ಮಾಲಿಕೆ -9 Author : ಎಸ್.ಆರ್. ರಾಮಸ್ವಾಮಿ