ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡಿತು. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿ ಸೇರಿದಂತೆ ಹಲವು ಮಂದಿ ಹಿರಿಯ ರಾಷ್ಟ್ರೀಯ ನಾಯಕರು ಖಂಡಿಸಿದರು. ಅದರ ಬೆನ್ನಲ್ಲೇ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟು ಪ್ರತಿಭಟನಾ ಮೆರವಣಿಗೆಗಳು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಯಾದ್ಯಂತ ನಡೆದವು. ಚಿಕ್ಕಬಳ್ಳಾಪುರದ ಕೆ. ಸಂಪಂಗಿರಾಮಯ್ಯ, ಕೆ. ವೆಂಕಟಪ್ಪ, ಕೆ. ವೆಂಕಟಕೃಷ್ಣಪ್ಪ, ಚಿಕ್ಕಬಳ್ಳಾಪುರದ ಸಂಪತ್ಕುಮಾರನ್, ಯಲ್ದೂರು ನರಸಿಂಹಯ್ಯ, ಎ.ಸಿ. ಹನುಮಂತಯ್ಯ, ಎ. ಮುನಿಯಪ್ಪ ಮುಂತಾದವರು […]
ಸ್ವಾತಂತ್ರ್ಯಸಂಗ್ರಾಮದಲ್ಲಿ ‘ವಿದುರಾಶ್ವತ್ಥ’ಹೋರಾಟದ ನೆನಪು
Month : May-2023 Episode : Author : ವೇಮಗಲ್ ಸೋಮಶೇಖರ್