ಈಚಿನ ವರ್ಷಗಳಲ್ಲಿ ಬಹುಸಂಖ್ಯಾತರಲ್ಲಿ ಅಸಹಿಷ್ಣುತೆ ಹೆಚ್ಚಿದೆಯೆಂದೂ ಇದರಿಂದಾಗಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಮನೋಭಾವ ಬೆಳೆಯುತ್ತಿದೆಯೆಂದೂ ವಾಮಪಂಥೀಯರು ಆರೋಪಿಸುವುದು ದಿನನಿತ್ಯದ ನಡವಳಿಯಾಗಿದೆ. ಅದು ಹುರುಳಿಲ್ಲದ ಆರೋಪವೆಂಬುದು ಹಾಗಿರಲಿ. ಆ ಆರೋಪಕರ್ತರ ವರ್ತನೆ ಹೇಗಿದೆಯೆಂದು ಪರಿಶೀಲಿಸಿದಲ್ಲಿ ಅಸಹಿಷ್ಣುತೆಯನ್ನು ಬೆಳೆಸುತ್ತಿರುವುದು ಯಾವ ವರ್ಗವೆಂಬುದು ಜಾಹೀರಾಗುತ್ತದೆ. ಹಿಂದಿನ ಇತಿಹಾಸ ಒತ್ತಟ್ಟಿಗಿರಲಿ. ಎರಡು ಇತ್ತೀಚಿನ ಪ್ರಸಂಗಗಳನ್ನಷ್ಟೇ ನೆನೆದರೂ ತಥ್ಯದರ್ಶನವಾದೀತು. ಕಳೆದ ಸೆಪ್ಟೆಂಬರ್ 19ರಂದು ಜಾದವಪುರ ವಿಶ್ವವಿದ್ಯಾಲಯದಲ್ಲಿ ಹೊಸ ವಿದ್ಯಾರ್ಥಿತಂಡವನ್ನು ಸ್ವಾಗತಿಸಿ ಒಂದೆರಡು ಹಿತವಚನ ಹೇಳುವ ಮಾಮೂಲು ಕಾರ್ಯಕ್ರಮ. ಭಾಷಣಕಾರರಲ್ಲಿ ಒಬ್ಬ ಸರ್ವೋಚ್ಚ ನ್ಯಾಯಾಲಯ ವಕೀಲರು, ಒಬ್ಬ […]
‘ಅಸಹಿಷ್ಣುತೆ’ಯ ಪೋಷಕರು ಯಾರು?
Month : November-2019 Episode : Author : ಎಸ್.ಆರ್. ರಾಮಸ್ವಾಮಿ