ಅಯೋಧ್ಯೆಯಲ್ಲಿ ೨೦೨೪ರ ಜನವರಿ ೨೨ಕ್ಕೆ ಬಹುಕಾಲ-ನಿರೀಕ್ಷಿತ ರಾಮಮಂದಿರದಲ್ಲಿ ಪ್ರಭು ರಾಮಚಂದ್ರಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಶ್ರೀರಾಮನದೇ ಆಗಿದ್ದ ಸ್ಥಳದ ಮೇಲಿನ ಅವನ ಪ್ರಭುತ್ವವನ್ನು ವಿವಾದಾತೀತವಾಗಿ ಸ್ಥಾಪಿಸಿ ಅದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗೀಕಾರಮುದ್ರೆಯನ್ನು ದೊರಕಿಸಿಕೊಟ್ಟ ಕೆ. ಪರಾಶರನ್ ಅವರಿಗೆ ಸಮಸ್ತ ಹಿಂದೂ ಜನತೆಯ ಅಭಿವಂದನೆ ಸಲ್ಲುತ್ತದೆ. ಭಗವಂತನೂ ವಕೀಲರನ್ನು ನೇಮಿಸಿಕೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ ಎಂಬ ವಿಕಟತೆಯನ್ನು ಸದ್ಯಕ್ಕೆ ಪಕ್ಕಕ್ಕಿರಿಸೋಣ. ಅಂತಹ ಸನ್ನಿವೇಶ ಬಂದಾಗ ‘ರಾಮಲಲ್ಲಾ’ನಿಗೆ ಸಮರ್ಥ ವಕೀಲರು ದೊರೆತದ್ದೂ ಅವರು ಕಕ್ಷಿಗಾರ ದೇವರಿಗೆ ಮೊಕದ್ದಮೆಯನ್ನು ಗೆಲ್ಲಿಸಿಕೊಟ್ಟದ್ದೂ ಇಡೀ […]
ಭಗವಂತನ ವಕೀಲ ಕೆ. ಪರಾಶರನ್
Month : December-2023 Episode : Author : ಎಸ್.ಆರ್. ರಾಮಸ್ವಾಮಿ