ದೇಶಾಂತರಕ್ಕೆ ಹೋದ ತಾಪಸನು ಊರಿಂದೂರಿಗೆ ಅಲೆಯುತ್ತ ವಕ್ರೋಲಕವೆಂಬ ಗ್ರಾಮಕ್ಕೆ ಬಂದನು. ಅಲ್ಲಿ ಯಾವನೋ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಅತಿಥಿಯಾಗಿ ನಿಂತನು. ಬ್ರಾಹ್ಮಣನು ಅತಿಥಿಯನ್ನು ಸತ್ಕರಿಸಿ ಊಟಕ್ಕೆ ಕುಳ್ಳಿರಿಸಿದನು. ಊಟ ಮಾಡುತ್ತಿರುವಾಗ ಒಂದು ಮಗುವು ತುಂಬ ಚಂಡಿ ಹಿಡಿದು ಅಳುವುದಕ್ಕೆ ಮೊದಲು ಮಾಡಿತು. ಯಾರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ಮನೆಯ ಯಜಮಾನಿಯು ಕೋಪಗೊಂಡು, ಆ ಮಗುವನ್ನು ಎತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಹಾಕಿಬಿಟ್ಟಳು. ಮಗು ಉರಿದು ಬೂದಿಯಾಗಿಹೋಯಿತು! ತ್ರಿವಿಕ್ರಮಸೇನನು ಅದೇ ಮುಳ್ಳುಮುತ್ತುಗದ ಮರದ ಬುಡಕ್ಕೆ ಬಂದನು. ಉರಿಯುತ್ತಿದ್ದ ಚಿತೆಗಳ […]
ಮಂದಾರವತಿಯ ಪರಿಣಯ
Month : November-2023 Episode : ಬೇತಾಳ ಕಥೆಗಳು - 2 Author : ಡಾ. ಎಚ್.ಆರ್. ವಿಶ್ವಾಸ