“ಒಂದು ಚಿಂತನೆ”_ ಎನ್‍. ರಂಗನಾಥಶರ್ಮಾ

‘ಚಿಂತಾ’-’ಚಿಂತನೆ’ಗಳೆರಡೂ ಮನೋವ್ಯಾಪಾರಗಳೇ ಆದರೂ ಚಿಂತೆಯಿಂದ ಚಿಂತನವು ತೀರ ವಿಭಿನ್ನವಾದದ್ದು. ಚಿಂತನವು ಅದರ ಯೋಗ್ಯವಾದ, ಪೂಜ್ಯವಾದ, ಶಾಸ್ತ್ರೀಯವಾದ ವಿಷಯವನ್ನು ಕುರಿತದ್ದು. ಇದರಲ್ಲಿ ನೋವು, ವ್ಯಥೆ, ಶೋಕ ಯಾವುದೂ ಇಲ್ಲ. ಸ್ವಸಂತೋಷದಿಂದಲೇ ಮನಸ್ಸು ಚಿಂತನದಲ್ಲಿ ಪ್ರವೃತ್ತವಾಗುತ್ತದೆ. ಈ ಚಿಂತನದಲ್ಲಿಯೂ ಎರಡು ಬಗೆಯುಂಟು. ನಿರ್ಣೀತವಾದ ವಿಷಯವನ್ನೇ ಕುರಿತು ಅದರ ದೃಢತೆಗಾಗಿ ತನ್ನ ಸಂತೃಪ್ತಿಗಾಗಿ ಮತ್ತೆ ಮತ್ತೆ ರ‍್ಯಾಲೋಚಿಸುವುದು ಒಂದು ಬಗೆ. ಈ ಪ್ರಕಾರವಾದ ಚಿಂತನವನ್ನು ಮನನವೆನ್ನಬಹುದು. ಹಂಸಾಃ ಶ್ವೇತೀಕೃತಾ ಯೇನ ಶುಕಾಶ್ಚ ಹರಿತೀಕೃತಾಃ | ಮಯೂರಾಶ್ಚಿತ್ರಿತಾ ಯೇನ ಸ ತೇ ವೃತ್ತಿಂ … Continue reading “ಒಂದು ಚಿಂತನೆ”_ ಎನ್‍. ರಂಗನಾಥಶರ್ಮಾ