
ಡಾ|| ವರ್ಗೀಸ್ ಕುರಿಯನ್ : ಆಪರೇಶನ್ ಫ್ಲಡ್: ರಾಷ್ಟ್ರಮಟ್ಟಕ್ಕೆ ವಿಸ್ತರಣೆ
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : Author : ಎಂ.ಬಿ. ಹಾರ್ಯಾಡಿ
‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಅದು ಸುಗಮ ಸಂಗೀತ’ ಎಂದು ಶ್ಲಾಘಿಸುವ ಭಟ್ಟರು ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ […]
Month : March-2023 Episode : Author : ಅಣಕು ರಾಮನಾಥ್
ಪದವೇ ಆಗಲಿ, ಅಣುವೇ ಆಗಲಿ, ಅದನ್ನು ಒಡೆದಾಗ ಕಂಡುಬರುವ ವಿಸ್ತಾರ ಅನನ್ಯ. ಸೃಜನ ಮತ್ತು ಶೀಲಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸೋಣ. ‘ಶೀಲ’ ಪದವನ್ನೊಳಗೊಂಡ ಹಿಂದಿ ಹಾಡು ನನಗೆ ಬಹಳ ಗೊಂದಲವುಂಟಾಗಿಸಿದೆ. ‘ಮೈ ನೇಮ್ ಈಸ್ ಶೀಲಾ; ಶೀಲಾ ಕೀ ಜವಾನಿ’ ಎಂದು ಅವಳು ಹಾಡಿದಾಗ ಶೀಲಾಳ ಜವಾನಿಯ ಹೆಸರೂ ಶೀಲಾ ಎಂದೇನು? ಜವಾನಿ, ಮಾಲಿಕಳು ಇಬ್ಬರದೂ ಒಂದೇ ಹೆಸರೆ? ಅಥವಾ ಶೀಲಾ key ಜವಾನಿ ಎಂದರೆ ಯಾವುದಾದರೂ ಬೀಗದ ಕೈಗೆ ಅಡಿಯಾಳಾಗಿ ಶೀಲಾ ಇದ್ದಾಳೆಯೆ… ಎಂದೆಲ್ಲ ಗೊಂದಲಗಳೆದ್ದವು. ಹಿಂದಿಯೊಂದೇ […]
Month : March-2023 Episode : Author : ಬಿ.ಪಿ. ಪ್ರೇಮಕುಮಾರ್
೧೯೩೦ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರ ಹೋರಾಟ ಗ್ರಾಮೀಣ ಪ್ರದೇಶವನ್ನೂ ಸೇರಿದಂತೆ ವ್ಯಾಪಕ ರೂಪ ಪಡೆಯುತ್ತದೆ. ‘ಕ್ರಾಂತಿಕಾರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಮೇಡಮ್ ಭಿಕಾಜೀ ಕಾಮಾ, ಸರಳಾದೇವಿ ಘೋಷಾಲ್ನಂತಹ ಮಹಿಳೆಯರು ನೇಪಥ್ಯದಲ್ಲಿದ್ದರೇ ವಿನಾ ಎಂದೂ ನೇರ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿರಲಿಲ್ಲ. ಆದರೆ ಮೂವತ್ತರ ದಶಕ, ಶಾಂತಿ ಘೋಷ್, ಸುನೀತಿ ಚೌಧರಿ, ಬೀನಾ ದಾಸ್, ಆಕೆಯ ಅಕ್ಕ ಕಲ್ಯಾಣಿ ದಾಸ್, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಮೊದಲಾದವರು ಈ ಸೀಮಿತ ಪರಿಧಿಯಿಂದ ಹೊರಬಂದು ಪುರುಷ ಸಂಗಾತಿ ಕ್ರಾಂತಿಕಾರಿಗಳೊಂದಿಗೆ […]
Month : March-2023 Episode : Author : ಶತಾವಧಾನಿ ಡಾ|| ರಾ. ಗಣೇಶ್
ಈಚೆಗಷ್ಟೇ ನಮ್ಮನ್ನಗಲಿ ತಾವು ಸೃಜಿಸುತ್ತಿದ್ದ ವರ್ಣ–ರೇಖೆಗಳ ಲೋಕದಲ್ಲಿ ಶಾಶ್ವತವಾಗಿ ಸೇರಿಹೋದ ಚಿತ್ರಬ್ರಹ್ಮ ಬಿ.ಕೆ.ಎಸ್. ವರ್ಮ ಅವರ ಅನುಪಸ್ಥಿತಿಯ ನಷ್ಟವನ್ನು ಮತ್ತಾವ ಕಲಾವಿದರೂ ತುಂಬಿಕೊಡಲಾರರು. ವರ್ಮರು ಕಣ್ಮರೆಯಾದದ್ದು ಅವರ ಅಭಿಮಾನಿಗಳೂ ಕಲಾರಾಧಕರೂ ಆದ ಅಶೇಷ ಸಹೃದಯರ ಪಾಲಿಗೆ ಚೇತರಿಸಿಕೊಳ್ಳಲಾಗದ ಆಘಾತ. ಶ್ರೇಷ್ಠ ಕಲಾವಿದರಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿಯಾಗಿಯೂ ವರ್ಮ ಮರೆಯಲಾಗದ ಮಹನೀಯರು. ಇವರ ಪುಣ್ಯಸ್ಮರಣೆಯ ನಿಮಿತ್ತವಾಗಿ ಈ ಲೇಖನ ಹವಣುಗೊಂಡಿದೆ. ಸುಮಾರು ೧೯೬೮-೬೯ರ ಆಸುಪಾಸಿನ ದಿನಗಳವು. ಆಗ ನನಗಿನ್ನೂ ಬಾಲ್ಯ. ಅಕ್ಷರಗಳನ್ನು ಕೂಡಿಸಿಕೊಂಡು ಪ್ರತಿಯೊಂದು ಪದವನ್ನೂ ಮೆಲ್ಲಮೆಲ್ಲನೆ ಓದಿಕೊಳ್ಳುವ […]
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ Author : ಎಚ್ ಮಂಜುನಾಥ ಭಟ್
ಒಂದೊಮ್ಮೆ ಭಾರತದ ಹೆಚ್ಚಿನೆಡೆಗಳಲ್ಲಿ ಹಾಲಿನ ಕೊರತೆಯಿತ್ತು. ಆ ಸ್ಥಿತಿಯಿಂದ ಹೊರಬಂದು ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದೆ. ನಾಡಿನ ಮೂಲೆಮೂಲೆಗಳಿಗೂ ಈಗ ಹಾಲು ಸರಬರಾಜಿನ ಜಾಲ ತಲಪಿರುವುದಲ್ಲದೆ, ಲಕ್ಷಾಂತರ ರೈತರಿಗೆ ‘ಕ್ಷೀರಕ್ರಾಂತಿ’ ಸ್ವಾವಲಂಬಿ ಸಮೃದ್ಧ ಬದುಕನ್ನು ಕಲ್ಪಿಸಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಹಾಲಿನ ಶೇ. ೨೨ರಷ್ಟನ್ನು ಭಾರತವೇ ಉತ್ಪಾದಿಸುತ್ತಿದೆ. ಇದೀಗ ಪ್ರತಿವರ್ಷ ೨೨ ಕೋಟಿ ಟನ್ನಿನಷ್ಟು ಹಾಲು ಭಾರತದಲ್ಲಿ ಉತ್ಪಾದಿತವಾಗುತ್ತಿದೆ. ಈ ಪವಾಡವನ್ನು ಆಗುಮಾಡಿಸಿದ ರೂವಾರಿ ಡಾ|| ವರ್ಗೀಸ್ ಕುರಿಯನ್. ‘ಶ್ವೇತಕ್ರಾಂತಿಯ ಪಿತಾಮಹ’ […]
Month : February-2023 Episode : Author : ಸತ್ಯನಾರಾಯಣ ಶಾನಭಾಗ್
ಭಾರತದಿಂದ ಅನೇಕ ಸಂತರು ಮಹಾತ್ಮರು ಅಮೆರಿಕದ ನೆಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬೀಜಗಳನ್ನು ಬಿತ್ತಿದರು. ೧೯೦೨ರಲ್ಲಿ ಅಮೆರಿಕದಲ್ಲಿ ಕಾಲಿಟ್ಟ ಯುವ ಸಂತ ಸ್ವಾಮಿ ರಾಮತೀರ್ಥರು ಆನ್ವಯಿಕ ವೇದಾಂತದ ತತ್ತ್ವಗಳನ್ನು ಪ್ರಸಾರ ಮಾಡಿದರು. ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕರೆತರಲು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ಗಳನ್ನು ಸ್ಥಾಪಿಸಲು ಅವರು ವಿಶೇಷ ಪ್ರಯತ್ನ ಮಾಡಿದರು. ಆಮೇಲಿನ ಕಾಲಘಟ್ಟದಲ್ಲಿ ಪರಮಹಂಸ ಯೋಗಾನಂದ, ಪ್ರಸಿದ್ಧ ಬೀಟಲ್ ಮ್ಯೂಸಿಕ್ ಬ್ಯಾಂಡ್ನ ಮೇಲೆ ವಿಶೇಷ ಪ್ರಭಾವ ಬೀರಿದ್ದ ಮಹರ್ಷಿ ಮಹೇಶಯೋಗಿ, ಹರೇ ಕೃಷ್ಣ […]
Month : February-2023 Episode : Author : ಎಚ್ ಮಂಜುನಾಥ ಭಟ್
ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ–ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕ ವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಎಣೆಯಿಲ್ಲದ ಮಾತುಗಾರಿಕೆಯ ಮೂಲಕ ಯಕ್ಷಗಾನ, ತಾಳಮದ್ದಳೆಗಳ […]