
ನಮ್ಮ ದೇಶದ ಆಂದೋಲನಗಳಲ್ಲಿ ಒಂದು ಕುತ್ಸಿತತೆ ಇದೆ. ಆಂದೋಲನಗಳ ವೈಚಾರಿಕ ತಳಹದಿ ದುರ್ಬಲವೆನಿಸಿದಾಗ ಅವನ್ನು ರಾಜಕೀಯಗೊಳಿಸಿ ಅದು ಪ್ರಾದೇಶಿಕ ಅಸ್ಮಿತೆಯ ವಿಷಯವೆಂದು ಮಂಡಿಸಲಾಗುತ್ತದೆ. ಜಾನಪದ ಕಥೆಯಲ್ಲಿ ನೀನಾದರೇನು ಯಾರಾದರೇನು! ನನಗೆ ಬೇಕಾದ್ದೇನೆಂದಷ್ಟೆ ನನಗೆ ಗೊತ್ತು ಎಂದು ತೋಳ ಹೇಳಿದಂತೆ ಇದು. ೧೯೮೦ರ ದಶಕದಲ್ಲಿ ಇಂಥದೇ ಕಪಟತೆ ನಡೆದು ಅದಕ್ಕೆ ತುಂಬಾ ಬೆಲೆಯನ್ನು ತೆರಬೇಕಾಗಿಬಂದಿತ್ತು. ಪಂಜಾಬ್ ಈಗಲೂ ಅದೇ ಪ್ರಮಾದವನ್ನು ಪುನರಾವರ್ತಿಸುತ್ತಿದೆಯೆ? ಈಚಿನ ಕೃಷಿ ಸಂಬಂಧಿತವಾದ ಮೂರು ಸುಧಾರಣಾ ಶಾಸನಗಳನ್ನು ಕಳೆದ (೨೦೨೧) ನವೆಂಬರ್ ತಿಂಗಳಲ್ಲಿ ರದ್ದುಗೊಳಿಸಲಾಯಿತಷ್ಟೆ. ವಾಸ್ತವದೃಷ್ಟಿಯಿಂದ […]