ಹೂವಿನ ತಟ್ಟೆಗಳನ್ನು ನೋಡಬಹುದು. ಬೆಳಗ್ಗಿನ ಹೊತ್ತು ಬಾಲಿಯಲ್ಲಿ ತಿರುಗಾಡುತ್ತಿದ್ದರೆ ಹೂವಿನ ತಟ್ಟೆಗಳನ್ನು ಅಂಗಡಿಯ ಹೊರಗಿಟ್ಟು, ಅಗರಬತ್ತಿ ಹಚ್ಚಿ, ಮಣಮಣ ಮಂತ್ರ ಹೇಳುವವರನ್ನು ನೋಡಬಹುದು. ಕೆಲವೊಮ್ಮೆ ತಟ್ಟೆಯಲ್ಲಿ ಸಿಹಿ ತಿಂಡಿ ಮತ್ತು ಸಿಗರೇಟ್ ಸಹ ಇಟ್ಟಿರುತ್ತಾರೆ. ಇದು ಸಂಪತ್ತು, ಸುಖ, ಶಾಂತಿ ಕೊಟ್ಟ ದೇವರಿಗೆ ಕೃತಜ್ಞತಾಪೂರ್ವಕವಾಗಿ ಕೊಡುವ ಸಮರ್ಪಣೆಯಂತೆ. ಇದನ್ನು ‘ಕನಂಗ್ ಸರಿ’ ಎನ್ನುತ್ತಾರೆ. ದಾರಿ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ದೇವರ ಮೂರ್ತಿಗಳು, ಮಂಟಪಗಳನ್ನು ನೋಡುವಾಗ ಭಾರತದಲ್ಲೆಲ್ಲೋ ಅಡ್ಡಾಡಿದಂತೆ ಕಂಡರೂ ಜನರ ಭಾಷೆ, ಆಚರಣೆಯಿಂದಾಗಿ ನಮ್ಮಿಂದ ಭಿನ್ನವಾಗಿ ನಿಲ್ಲುತ್ತಾರೆ. […]
ಬಾಲಿ ಅಪ್ರತಿಮ ಪ್ರಕೃತಿ ಸೌಂದರ್ಯದೊಂದಿಗೆ ಬೆಸೆದುಕೊಂಡ ಹಿಂದೂಧರ್ಮ
Month : October-2024 Episode : Author : ಗೀತಾ ಕುಂದಾಪುರ