ಕೃಷಿಭೂಮಿಯನ್ನು ಉಳ್ಳವರೇ ಕೃಷಿಕಾರ್ಯವನ್ನೂ ಮಾಡಬೇಕು. ಸ್ವಾವಲಂಬನೆಯ ಬದುಕನ್ನು ರೂಪಿಸುವ ಕೃಷಿಕಾರ್ಯವನ್ನು ಮಾಡಬೇಕು. ಕೃಷಿಕಾರ್ಯವನ್ನು ಸ್ವಾವಲಂಬಿಯಾಗಿ ಮಾಡಬೇಕು. ಮುಂಪೀಳಿಗೆಯಲ್ಲಿಯೂ ಸ್ವಾವಲಂಬನೆಯ ಸ್ವಾಭಿಮಾನವನ್ನು ಉದ್ದೀಪಿಸಬೇಕು. ಕೃಷಿವ್ಯವಸ್ಥೆಯೊಂದು ಸದೈವ ಸಂಗತಗೊಳ್ಳುವ ಬಗೆಯಿದು. ಅದೊಂದು ಮಲೆನಾಡಿನ ಹಳ್ಳಿ. ಅಲ್ಲೊಬ್ಬರು ಹಿತೈಷಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡುತ್ತಾ ಮಾತನಾಡುತ್ತ ಮಾತು ಮನೆಯ ಕಷ್ಟಗಳನ್ನು ಆವರಿಸಿಕೊಂಡು ಕ್ರಮೇಣ ಕೃಷಿಯತ್ತ ಹೊರಳಿತು. ಮನೆಯ ಎಲ್ಲಾ ಕಷ್ಟಸುಖಗಳಿಗೆ ದಂಪತಿಗಳಿಬ್ಬರೇ ಇರುವುದು. ಜತೆಗೆ ಮನೆಯ ಹೊರಗಿನ ಕೆಲಸಕ್ಕೆ ಯಾರೂ ಸಿಗ್ತಾ ಇಲ್ಲ ಎಂಬ ಆತಂಕ. ಮನೆಯ ಹೊರಗಿನ ಕೆಲಸಗಳಲ್ಲಿ ಅತಿಮುಖ್ಯವಾದುದು ಕೃಷಿ. […]
ಸಂಗತ ವ್ಯವಸ್ಥೆ
Month : December-2024 Episode : Author : ನಾರಾಯಣ ಶೇವಿರೆ