ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಸಂಪಾದಕೀಯ

ಸಂಪಾದಕೀಯ

ಮೋದಿಯವರ ಅಮೆರಿಕ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರದು ಅಮೆರಿಕಕ್ಕೆ ಈಗಿನದು ಮೊದಲ ಭೇಟಿಯಲ್ಲವಾದರೂ ಹಲವು ಕಾರಣಗಳಿಂದ ಇದು ವಿಶಿಷ್ಟವೆನಿಸಿತು – ವಿಶೇಷವಾಗಿ ಪ್ರಕೃತದ ರಾಷ್ಟ್ರ-ರಾಷ್ಟ್ರಗಳ ಸಂಬಂಧಗಳ ಸಂಕೀರ್ಣತೆಯಿಂದಾಗಿ. ‘ಶೀತಲ ಯುದ್ಧ’ ವರ್ಷಗಳ ಅವಧಿಯಲ್ಲಿ ಮತ್ತು ಅದಕ್ಕೆ ಹಿಂದೆ ಭಾರತ-ಅಮೆರಿಕಗಳ ನಡುವೆ ಸ್ನೇಹವು ಸಾಧ್ಯವೇ ಇಲ್ಲವೆನಿಸುವ ಸ್ಥಿತಿ ಇತ್ತು. ಆ ಹಿಂದಿನ ಮಾನಸಿಕತೆಯಿಂದ ಹೊರಬರಲು ೧೯೯೦ರ ದಶಕದಿಂದಾಚೆಗೆ ಭಾರತ ಹೆಣಗಬೇಕಾಯಿತು. ಹೊಸ ಸಹಸ್ರಾಬ್ದದ ಮೊದಲ ದಶಕದ ನಡುಭಾಗದಲ್ಲಿ ‘ಅಣುಶಕ್ತಿ ಒಡಂಬಡಿಕೆ’ ನಿರ್ಮಿಸಿದ ವಿರಸದಿಂದ ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಇತ್ತೀಚಿನ ರಷ್ಯ-ಯುಕ್ರೇನ್ ಸಮರದ […]

ಆತ್ಮನಿರ್ಭರತೆ

ಈಗ್ಗೆ ಮೂರು ವರ್ಷ ಹಿಂದೆ (ಮೇ ೨೦೨೦) ಮೋದಿ ಸರ್ಕಾರ ‘ಆತ್ಮನಿರ್ಭರ ಭಾರತ’ ಗುರಿಯನ್ನು ಘೋಷಿಸಿದಾಗ – ಅದೂ ಕೋವಿಡ್ ೧೯ ಸಾಂಕ್ರಾಮಿಕದ ವಿಘಾತದ ಹಿಂದುಗೂಡಿ – ಶಾಶ್ವತ ಸಿನಿಕತನಕ್ಕೆ ಹೆಸರಾದ ‘ವಿರೋಧಕ್ಕಾಗಿ ವಿರೋಧ’ವನ್ನು ಸ್ವಾಭಾವಿಕವಾಗಿಸಿಕೊಂಡ ಪಡೆಗಳಂತೂ ಎಂದಿನಂತೆ ಅದನ್ನು ಘೋಷಣೆ ಮಾತ್ರವೆಂದು ತಳ್ಳಿಹಾಕಿದುದು ಅವುಗಳ ಜಾಯಮಾನಕ್ಕೆ ಅನುಗುಣವಾಗಿತ್ತು. ಅನ್ಯ ವಲಯಗಳಲ್ಲಿಯೂ ಆ ಲಕ್ಷö್ಯದ ಬಗೆಗೆ ಅತ್ಯುತ್ಸಾಹವೇನೂ ತೋರಿರಲಿಲ್ಲ. ಅಲ್ಲಿಂದೀಚೆಗೂ ಪ್ರಮುಖ ವಿರೋಧಪಕ್ಷವು ಆರೂಢ ಸರ್ಕಾರದ ಪ್ರತಿಯೊಂದು ಉಪಕ್ರಮವನ್ನೂ ಟೀಕಿಸುತ್ತ ಬಂದಿರುವ ರೀತಿಯನ್ನು ನೋಡಿದರೆ ಅದರ ದೃಷ್ಟಿಯಲ್ಲಿ […]

ಸರ್ಕಾರ ಮತ್ತು ಜನತೆ

ಅಧಿಕಾರಕೇಂದ್ರಗಳಿಗೂ ಸಾಮಾನ್ಯ ಜನತೆಗೂ ನಡುವೆ ದೊಡ್ಡ ಕಂದರವಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂಬ ವ್ಯಾಖ್ಯೆ ಹಿಂದಿನ ವರ್ಷಗಳಲ್ಲಿ ಆಗಾಗ ಕೇಳಬರುತ್ತಿತ್ತು. ಅದು ದಿಟವೂ ಆಗಿತ್ತು. ಜನಸಂಪರ್ಕದಿಂದ ಆದಷ್ಟು ದೂರವಿರಿ ಎಂದೇ ಆಡಳಿತ ತರಬೇತಿ ಕೇಂದ್ರದಲ್ಲಿ ಬೋಧಿಸಲಾಗುತ್ತಿತ್ತು ಎಂಬ ವಾಸ್ತವವನ್ನು ಅನೇಕ ಹಿರಿಯ ಅಧಿಕಾರಿಗಳೇ ಹೇಳಿದ್ದಿದೆ; ಅದು ಹಾಗಿರಲಿ. ಸರ್ಕಾರಕ್ಕೂ ಪ್ರಜೆಗಳಿಗೂ ನಡುವೆ ಹೆಚ್ಚು ನಿಕಟವೂ ಸ್ಥಾಯಿಯೂ ಆದ ಸಂಪರ್ಕವನ್ನು ಸಾಧಿಸುವುದು ಈಗಿನ ಆರೂಢ ಸರ್ಕಾರದ ಆದ್ಯತೆಗಳಲ್ಲೊಂದಾಗಿರುವುದು ಅದರ ಹಲವಾರು ಕ್ರಮಗಳಿಂದ ದ್ಯೋತವಾಗುತ್ತಿದೆ. ಇದು ಶ್ಲಾಘನೀಯವೆಂದು ಗುರುತಿಸಬೇಕು. ನಿದರ್ಶನಕ್ಕೆ […]

ಸಂಪರ್ಕಕ್ರಾಂತಿ

ಸಂಪರ್ಕಸಾಧನಗಳು, ಸಂವಹನ ಮಾಧ್ಯಮಗಳು ವಿಸ್ತೃತಗೊಂಡಲ್ಲಿ ಆರ್ಥಿಕ ಅಭ್ಯುದಯಕ್ಕೆ ಹೆಚ್ಚಿನ ವೇಗ ಬರುತ್ತದೆಂಬುದು ಹಿಂದಿನ ಅನುಭವ. ಈ ಹಿನ್ನೆಲೆಯಲ್ಲಿ ಈಗಿನ ಆರೂಢ ಸರ್ಕಾರ ಆರಂಭದಿಂದ ಈ ಕ್ಷೇತ್ರಕ್ಕೆ ಆದ್ಯತೆ ನೀಡುತ್ತ ಬಂದಿರುವುದು ಪ್ರಶಂಸಾರ್ಹವಾಗಿದೆ. ಅಭಿವೃದ್ಧಿಗೆ ಒಂದು ಪ್ರಮುಖ ಚಾಲಕಶಕ್ತಿಯೆಂದರೆ ಮೂಲಸೌಕರ್ಯಗಳ ಹೆಚ್ಚಳ. ಕಳೆದ ಒಂಭತ್ತು ವರ್ಷಗಳಲ್ಲಿ ಮೂಲಸೌಕರ್ಯವರ್ಧನೆಯಲ್ಲಿ ಸತತವಾಗಿ ಹೆಚ್ಚಿನ ಹೂಡಿಕೆಯಾಗಿದೆ. ದೀರ್ಘಾವಧಿ ಲಾಭವಲ್ಲದೆ ಈ ವೃದ್ಧಿಯು ಸಾಮಾನ್ಯ ವ್ಯವಹಾರಗಳ ಗುಣಮಟ್ಟವನ್ನೂ ಉನ್ಮುಖಗೊಳಿಸುತ್ತದೆಂಬುದು ಸ್ಪಷ್ಟವೇ ಆಗಿದೆ. ಸುಸಜ್ಜಿತವಾದ ರಸ್ತೆಗಳು, ರೈಲುಯಾನ, ವಿಮಾನಯಾನ ಸಂಬಂಧಿತ ಒಳಹಂದರ ಮೊದಲಾದವು ಸಮೃದ್ಧ ಭಾರತ […]

ಸಿರಿಧಾನ್ಯಂ ಗೆಲ್ಗೆ!

೨೦೨೩ರ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ವೆಂದು ವಿಶ್ವಸಂಸ್ಥೆಯು ಘೋಷಿಸಿರುವುದು ಒಂದು ಸ್ವಾಗತಾರ್ಹ ಕ್ರಮವಾಗಿದೆ. ಈ ಆಶಯದ ಭಾರತದ ಪ್ರಸ್ತಾವವನ್ನು ಜಗತ್ತಿನ ೭೨ ದೇಶಗಳು ಸಮರ್ಥಿಸಿದುದೂ ಹೃದ್ಯವಾಗಿದೆ. ಚಾರಿತ್ರಿಕವಾಗಿ, ತಾಂತ್ರಿಕವಾಗಿ – ಎರಡೂ ದೃಷ್ಟಿಗಳಿಂದ ಸಿರಿಧಾನ್ಯಗಳಿಗೆ ಮಹತ್ತ್ವ ಸಲ್ಲುತ್ತದೆ. ಮಾನವಕುಲಕ್ಕೇ ಸಿರಿಧಾನ್ಯಗಳು ನಿಸರ್ಗದ ವಿಶಿಷ್ಟ ಕೊಡುಗೆಯಾಗಿವೆ. ಇವು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿ ಇದ್ದಂಥವೇ. ಹೆಚ್ಚಿನ ಪೌಷ್ಟಿಕತೆಯನ್ನುಳ್ಳ ರಾಗಿ, ಸಜ್ಜೆ, ಸಾಮೆ, ನವಣೆ ಮೊದಲಾದವು ಕಡಮೆ ನೀರಿನಲ್ಲಿ ಹಾಗೂ ಒಣಭೂಮಿಯಲ್ಲಿಯೂ ಬೆಳೆಯುವ ಬೆಳೆಗಳಾಗಿವೆಯಾದ್ದರಿಂದ ಆಹಾರಭದ್ರತೆಗೆ ಇವು ಪೂರಕವಾಗಿವೆ. ಭಾರತವಲ್ಲದೆ ಅನ್ಯ ನೂರಾರು […]

ನಿವಾರಣೀಯ ದುರಂತಗಳು

ನಂಬಿ ಕೆಟ್ಟವರಿಲ್ಲವೋ ಎಂಬಂತೆ ಪ್ರಕೃತಿಯನ್ನು ಕೆಣಕಿ ಬದುಕಿದವರಿಲ್ಲವೋ ಎಂದೂ ಹೇಳಬಹುದೇನೊ. ಹಿಮಾಲಯದಲ್ಲಿ ಈಚಿನ ವರ್ಷಗಳಲ್ಲಿಯೂ ಘಟಿಸಿರುವ ದುರಂತಗಳ ಹಿಂದುಗೂಡಿ ಇದೇ ವರ್ಷದ ಆರಂಭದಲ್ಲಿ ಜೋಶಿಮಠ ಭಾಗದಲ್ಲಿ ನೆಲ ಬಿರುಕುಬಿಟ್ಟು ಅನೇಕ ಕಡೆ ನೆಲ ಕುಸಿದು ಜನಜೀವನವನ್ನು ಉಧ್ವಸ್ತಗೊಳಿಸಿದೆ. ೭೦೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಸೀಳಿಹೋಗಿವೆ. ಅಲ್ಲಿಯ ನಿವಾಸಿಗಳು ಸ್ಥಾನಾಂತರಗೊಳ್ಳಬೇಕಾಗಿಬAದಿದೆ. ನೂರಾರು ಕುಟುಂಬಗಳು ಸುರಕ್ಷಿತತೆಯನ್ನರಸಿ ಬೇರೆಡೆಗಳಿಗೆ ವಲಸೆ ಹೋಗುವುದು ಉತ್ತರಾಖಂಡ ಪ್ರಾಂತದಲ್ಲಿ ಮಾಮೂಲೆನಿಸಿಬಿಟ್ಟಿದೆ. ಹೀಗೆ ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬಲಿಗೊಟ್ಟಾದರೂ ಊರ್ಜೋತ್ಪಾದನಾದಿ ಯೋಜನೆಗಳಿಗೆ ಆದ್ಯತೆ ನೀಡಬೇಕೆ? ಅಭಿವೃದ್ಧಿಯೋಜನೆಗಳು ಬೇಡವೆಂದು […]

ಪರಿಸರಸ್ನೇಹಿ ಜೀವನಶೈಲಿ

ಪರಿಸರಸ್ವಾಸ್ಥ್ಯ ಕುಸಿಯುತ್ತಿರುವುದರಿಂದುಂಟಾಗುತ್ತಿರುವ ಸಮಸ್ಯೆಗಳ ಅರಿವು ಈಗ ಜಗತ್ತಿಗೆಲ್ಲ ಆಗಿದೆ. ಆದರೆ ಇದುವರೆಗೆ ಬಹುಮಟ್ಟಿಗೆ ಯಾರಾರನ್ನೋ ಕಾರಣವಾಗಿಸುವುದು, ಪರಿಹಾರವನ್ನು ತಾಂತ್ರಿಕತೆಗಳಲ್ಲಿ ಅರಸುವುದು ಮೊದಲಾದವೇ ನಡೆದಿವೆ. ಈಗಲಾದರೋ ಎಲ್ಲೆಡೆ ಹವಾಮಾನವೈಪರೀತ್ಯ, ಹಿಮನದಿಗಳು ಕರಗುತ್ತಿರುವುದು, ಸಮುದ್ರಮಟ್ಟ ಏರುತ್ತಿರುವುದು, ಅಕಾಲಿಕ ಮಳೆ, ಭೂಕುಸಿತ ಮೊದಲಾದ ವಿದ್ಯಮಾನಗಳು ಹಿಂದಿಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಿಶ್ವ ಪರಿಸರ ದಿನ (ಜೂನ್ ೫) ಮೊದಲಾದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರವರ್ತಿಸುತ್ತ ಬಂದಿರುವ ‘ಮಿಷನ್ ಲೈಫ್’ ಸೂತ್ರಾವಳಿ ಎಲ್ಲರ ಚಿಂತನೆಗೂ ಅನುಷ್ಠಾನಕ್ಕೂ ಅರ್ಹವಾಗಿದೆ. […]

ಸಾಧನೆಗಳೇ ಉತ್ಸವಾಚರಣೆ

ಸ್ವಾತಂತ್ರ್ಯದ ಅಮೃತೋತ್ಸವ ಆಚರಣೆಯ ಸಂಭ್ರಮದ ಪರ್ವದಲ್ಲಿದೆ ನಾಡು. ಸಾಮಾನ್ಯವಾಗಿ ಇಂತಹ ಉತ್ಸವಾಚರಣೆಗಳು ಹಲವು ವಿಶೇಷ ಯೋಜಿತ ಕಾರ್ಯಕ್ರಮಗಳ ಮೂಲಕ ನಡೆಯುತ್ತವೆ. ಇಂಡಿಯಾಗೇಟ್‍ನಲ್ಲಿ ನೇತಾಜಿಯವರ ಹಾಲೋಗ್ರಾಂ ಸ್ಥಾಪನೆ ಮೊದಲಾದ ಕ್ರಮಗಳಂತೂ ಇತಿಹಾಸಾರ್ಹವಾಗಿವೆ. ಆದರೆ ಅಂತಹ ಸಾಂಕೇತಿಕ ಕಾರ್ಯಕ್ರಮಗಳ ಆವಶ್ಯಕತೆಯೇ ಇಲ್ಲವೆನಿಸುವ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಉನ್ನತ ಸಾಧನೆಗಳು ಗಮನ ಸೆಳೆಯುತ್ತಿವೆ. ತಾತ್ತ್ವಿಕವಾಗಿ ಯೋಚಿಸುವಾಗ ಈ ಸಾಧನೆಗಳೇ ಸ್ವಾತಂತ್ರ್ಯ ಅಮೃತೋತ್ಸವವನ್ನು ಅರ್ಥಪೂರ್ಣಗೊಳಿಸುವವಾಗಿವೆ ಎನಿಸುತ್ತದೆ. ಕೋವಿಡ್ ಸವಾಲಿಗೆ ಉತ್ತರವಾಗಿ 200 ಕೋಟಿ ಲಸಿಕೆ ಡೋಸ್‍ಗಳ ನೀಡಿಕೆಯ ಕಲ್ಪನೆಗೆ ಮೀರಿದ ಗುರಿಯನ್ನು ಸಾಧಿಸಿರುವುದಲ್ಲದೆ […]

ಮಹತ್ತ್ವಾಕಾಂಕ್ಷೆಯ ‘ಅಗ್ನಿಪಥ್’ಯೋಜನೆ

ಮಹತ್ತ್ವಾಕಾಂಕ್ಷೆಯ ‘ಅಗ್ನಿಪಥ್’ಯೋಜನೆ

ಸಂಪಾದಕೀಯ ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತಿರಬೇಕೆಂಬ ಏಕಾಂಶ ನೀತಿ ತಳೆದಿರುವ ವಿಪಕ್ಷಗಳು ‘ಅಗ್ನಿಪಥ್’ ಬಗೆಗೂ ಕೊಂಕು ತೆಗೆಯಹೊರಟಿದ್ದರೂ, ಅವುಗಳ ಕುತ್ಸಿತ ಟೀಕೆಗಳ ಪೊಳ್ಳುತನವನ್ನು ಜನತೆಯಿಂದ ಬಂದ ಅಪೂರ್ವ ಸ್ಪಂದನವೇ ಬಯಲು ಮಾಡಿದೆ. ದೇಶದ ಭದ್ರತೆಗೆ ಸವಾಲುಗಳು ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದೇಶದಲ್ಲಿ ಶೇ. 18ಕ್ಕೂ ಮಿಗಿಲಾಗಿರುವ ಯುವಜನತೆಗೆ ಸೇನೆಯೊಡನೆ ಸಹಕರಿಸುವ ಅವಕಾಶವನ್ನು ‘ಅಗ್ನಿಪಥ್’ ಕಲ್ಪಿಸಿರುವುದು ಅಭೂತಪೂರ್ವವೂ ಪ್ರಶಂಸನೀಯವೂ ಆಗಿದೆ. ಸೇನೆಯ ಆಧುನಿಕೀಕರಣ, ರಕ್ಷಣೋಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಸಾಧನೆ ಮೊದಲಾದ ಕ್ರಮಗಳ ಜೊತೆಗೆ ಯುವಜನರ ಅಲ್ಪಾವಧಿ ನೇಮಕಾತಿ ವ್ಯವಸ್ಥೆಯನ್ನು […]

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ಹಿನ್ನೆಲೆ ಗಾಯನದ   ಸಮ್ರಾಜ್ಞಿ ಇನ್ನಿಲ್ಲ

ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ