![ಸರಿಯಾದ ವರ](https://utthana.in/wp-content/uploads/2024/07/9.Sariyada-Vara-150x150.jpg)
ರಾಜಾ ತ್ರಿವಿಕ್ರಮನು ಛಲವನ್ನು ಬಿಡದೆ ಒಂಭತ್ತನೆಯ ಸಾರಿ ಮತ್ತೆ ಮುಳ್ಳುಮುತ್ತುಗದ ಮರದಿಂದ ಹೆಣವನ್ನು ಇಳಿಸಿ, ತನ್ನ ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದ ಕಡೆಗೆ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು – “ರಾಜನ್! ಸಮೃದ್ಧಿಯಾದ ರಾಜ್ಯದ ಒಡೆತನ ಎಲ್ಲಿ! ಶ್ಮಶಾನದಲ್ಲಿ ಹೆಣವನ್ನು ಹೊತ್ತುಕೊಂಡು ಹೀಗೆ ತಿರುಗುವುದು ಎಲ್ಲಿ…! ಆ ಭಿಕ್ಷುವಿನ ಮಾತನ್ನು ಕೇಳಿ ನೀನು ಹೀಗೆ ಕಷ್ಟ ಪಡುತ್ತಿರುವುದನ್ನು ಕಂಡು ನನಗೆ ವ್ಯಥೆಯಾಗುತ್ತಿದೆ. ಇರಲಿ, ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಮತ್ತೊಂದು ಕಥೆಯನ್ನು ಹೇಳುತ್ತೇನೆ. ಕೇಳಿಸಿಕೋ…’’ ಎಂದು ಹೇಳಿ […]