ಉತ್ಥಾನ ಸಂಕ್ರಾಂತಿ ವಿಶೇಷಾಂಕ 2024: “ಸಾಕಾರಗೊಂಡ ರಾಮಮಂದಿರ”
Month : December-2023 Episode : Author :
Month : December-2023 Episode : Author :
Month : December-2023 Episode : Author : ಎಚ್ ಮಂಜುನಾಥ ಭಟ್
ಗಾಯಕ ಎಂ.ಡಿ.ಆರ್. ಸಂಗೀತವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿರಲಿಲ್ಲ; ಅದು ಅದ್ವಿತೀಯ. ಸಂಗೀತರಸಿಕರ ಮೇಲೆ ಅವರು ಮೋಡಿಯನ್ನೇ ಮಾಡಿದ್ದರು. ಅವರೊಬ್ಬ ನಾದೋಪಾಸಕರಾಗಿದ್ದು, ಸಂಗೀತಕ್ಕಾಗಿ ಸಂಗೀತವನ್ನು ಹಾಡುತ್ತಿದ್ದರು. ಶ್ರೋತೃಗಳ ಸಂಖ್ಯೆ ಕಡಮೆಯಿದ್ದರೆ ಅವರಿಗೇನೂ ಚಿಂತೆಯಿಲ್ಲ. ತನ್ನ ಶೈಲಿಯನ್ನು ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೂ ಅಲ್ಲ. ಮುಖ್ಯವಾಗಿ ಅವರು ತನ್ನ ತೃಪ್ತಿಗಾಗಿ ಹಾಡುತ್ತಿದ್ದರು. ಭಾವನೆಗಳಿಂದ ಶ್ರೀಮಂತವಾಗಿ ಶಾಂತಿಯನ್ನು ನೀಡುವ ಸಂಗೀತ ಅವರದಾಗಿದ್ದು, ಆ ರೀತಿಯಲ್ಲಿ ಅವರು ಹೆಚ್ಚಿನ ಸಮಕಾಲೀನರಿಗಿಂತ ಭಿನ್ನವಾಗಿದ್ದರು. ಅವರದ್ದು ಸೌಮ್ಯ, ಶುದ್ಧ ಮತ್ತು ಮನಸ್ಸಿಗೆ ಸಮಾಧಾನ ತರುವ […]
Month : December-2023 Episode : ಭಾಗ-5 Author : ಎಂ.ಬಿ. ಹಾರ್ಯಾಡಿ
ಎರಡೂ ಕಡೆಯವರು ಸುಮಾರು ಎರಡು ತಾಸು ಇದೇ ರೀತಿ ಗುಂಡು ಹಾರಿಸುತ್ತಲೇ ಇದ್ದರು. ಕ್ಲೈವ್ ಸೇನೆಗೆ ಪರಿಸ್ಥಿತಿ ಕಷ್ಟಕರವಾಗಿಯೇ ಇತ್ತು. ಆದರೆ ಸಂಜೆ ೪ ಗಂಟೆಯ ಹೊತ್ತಿಗೆ ಈ ಮೊದಲು ನಿಷ್ಕಿçಯವಾಗಿದ್ದ ಒಂದಷ್ಟು ಸೈನ್ಯ ರಣರಂಗದಿಂದ ದೂರ ಹೋಗುತ್ತಿತ್ತು; ಹೋಗುವುದು ನವಾಬನ ಸೈನ್ಯದ ಜೊತೆಗಲ್ಲ. ಆಗ ಕ್ಲೈವ್ಗೆ ಪಿತೂರಿಗಾರ ಮೀರ್ಜಾಫರ್ ಹೇಳಿದ ಮಾತು ಸತ್ಯವೆಂದು ಗಮನಕ್ಕೆ ಬಂತು; ತಾವು ಸಿರಾಜ್ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲವೆಂದು ಮೀರ್ಜಾಫರ್ ಮತ್ತಿತರರು ಹೇಳಿದ್ದರು. ಆಗ ಚುರುಕಾದ ಕರ್ನಲ್ ಕ್ಲೈವ್ ನೇರವಾಗಿ ಶತ್ರುಸೈನ್ಯದ […]
Month : December-2023 Episode : Author : ಅನಂತ ರಮೇಶ್
ಮೋದಿಯವರ ಸುಧಾರಣಾ ಕ್ರಮಗಳು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿವೆ. ಆ ನಿಟ್ಟಿನಲ್ಲಿ ಅವರು ನೂರಾರು ಅನುಪಯುಕ್ತ ವಸಾಹತುಯುಗದ ಕಾನೂನುಗಳನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ವೇಗದ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಂಡಿದ್ದು, ೨೦೧೪ರಲ್ಲಿ ದೇಶದ ಬಡತನದ ಮಾಪನ ೨೨% ಇದ್ದುದು ಈಗ ೧೦%ರ ಗಡಿಯಿಂದ ಮತ್ತೆ ಇಳಿಕೆ ಕಾಣುತ್ತಿದೆ. ತೀವ್ರ ಬಡತನವು ೧%ಕ್ಕಿಂತ ಕಡಮೆಯಾಗಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಸೃಷ್ಟಿಸಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ನಮ್ಮ ಸೌರ ಮತ್ತು ಪವನವಿದ್ಯುತ್ […]
Month : December-2023 Episode : Author : ಎಸ್.ಆರ್. ರಾಮಸ್ವಾಮಿ
ಅಯೋಧ್ಯೆಯಲ್ಲಿ ೨೦೨೪ರ ಜನವರಿ ೨೨ಕ್ಕೆ ಬಹುಕಾಲ-ನಿರೀಕ್ಷಿತ ರಾಮಮಂದಿರದಲ್ಲಿ ಪ್ರಭು ರಾಮಚಂದ್ರಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಶ್ರೀರಾಮನದೇ ಆಗಿದ್ದ ಸ್ಥಳದ ಮೇಲಿನ ಅವನ ಪ್ರಭುತ್ವವನ್ನು ವಿವಾದಾತೀತವಾಗಿ ಸ್ಥಾಪಿಸಿ ಅದಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗೀಕಾರಮುದ್ರೆಯನ್ನು ದೊರಕಿಸಿಕೊಟ್ಟ ಕೆ. ಪರಾಶರನ್ ಅವರಿಗೆ ಸಮಸ್ತ ಹಿಂದೂ ಜನತೆಯ ಅಭಿವಂದನೆ ಸಲ್ಲುತ್ತದೆ. ಭಗವಂತನೂ ವಕೀಲರನ್ನು ನೇಮಿಸಿಕೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ ಎಂಬ ವಿಕಟತೆಯನ್ನು ಸದ್ಯಕ್ಕೆ ಪಕ್ಕಕ್ಕಿರಿಸೋಣ. ಅಂತಹ ಸನ್ನಿವೇಶ ಬಂದಾಗ ‘ರಾಮಲಲ್ಲಾ’ನಿಗೆ ಸಮರ್ಥ ವಕೀಲರು ದೊರೆತದ್ದೂ ಅವರು ಕಕ್ಷಿಗಾರ ದೇವರಿಗೆ ಮೊಕದ್ದಮೆಯನ್ನು ಗೆಲ್ಲಿಸಿಕೊಟ್ಟದ್ದೂ ಇಡೀ […]
Month : November-2023 Episode : Author :
Month : November-2023 Episode : Author : ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಬೆಳ್ತಂಗಡಿ
1920ರಲ್ಲಿ ಗಾಂಧಿ ಕರನಿರಾಕರಣೆಯ ಅಸಹಕಾರ ಚಳವಳಿಗೆ ಮುಂದಾಗಲು ಕರೆ ನೀಡಿದ್ದೇ ಕನ್ನೆಗಂಟಿ ಹನುಮಂತುವಿನ ಬಂಡಾಯಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಯಾವೊಬ್ಬ ರೈತ ಕೂಡ ಬ್ರಿಟಿಷ್ ಸರಕಾರಕ್ಕೆ ಈ ಸುಂಕವನ್ನು ನೀಡಬಾರದೆಂದು ಅವರು ನಾಲ್ಕಾರು ಗ್ರಾಮಗಳ ರೈತರನ್ನು ಒಗ್ಗೂಡಿಸಿದರು. ಆಗ ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸುಂಕ ನಿರಾಕರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತದಾದ್ಯಂತ ಧಗಧಗಿಸಿದ ಸ್ವಾತಂತ್ರ್ಯ ಸಂಗ್ರಾಮದ ದಳ್ಳುರಿಯ ನಡುವೆ ಆಂಧ್ರಪ್ರದೇಶದ ಒಂದು ಹಳ್ಳಿಯಿಂದ ಸಿಡಿದೆದ್ದ ಘೋಷಣೆಯೊಂದು ಬ್ರಿಟಿಷ್ ಆಡಳಿತಗಾರರ […]
Month : November-2023 Episode : ಭಾಗ - 4 Author : ಎಂ.ಬಿ. ಹಾರ್ಯಾಡಿ
ನವಾಬನ ಆಸ್ಥಾನದಲ್ಲೇ ಇದ್ದ ಮೀರ್ಜಾಫರ್ ಜೊತೆ ಬ್ರಿಟಿಷರ ವ್ಯವಹಾರ (ಡೀಲ್) ಆಗಲೇ ಆಗಿತ್ತು. ಕಲ್ಕತ್ತಾ ಕೌನ್ಸಿಲ್ ಆತನೊಂದಿಗೆ ಮೇ 19, 1757ರಂದು ಒಂದು ಒಪ್ಪಂದ ಮಾಡಿಕೊಂಡಿತ್ತು. ಮೀರ್ಜಾಫರ್ ಇಂಗ್ಲಿಷರ ಜೊತೆ ಸೇರಲು ತಾನು ಸದಾ ಸಿದ್ಧ ಎಂದು ಏಪ್ರಿಲ್ 26ರ ಪತ್ರದಲ್ಲಿ ತಿಳಿಸಿದ್ದ. ಪಿತೂರಿಯ ಬಗೆಗಿನ ಅಜ್ಞಾನ ಒಂದಾದರೆ, ಅದರ ಎದುರು ಏನನ್ನೂ ಮಾಡಲಾಗದ ಅಸಹಾಯ ಸ್ಥಿತಿಗೆ ನವಾಬ ತಲಪಿದ್ದನೇನೋ ಅನ್ನಿಸುತ್ತದೆ; ಭೇಟಿಗೆ ಅವಕಾಶ ಕೇಳಿ ಫ್ರೆಂಚ್ ಅಧಿಕಾರಿ ಲಾ ನವಾಬನ ಬಳಿ ಜನ ಕಳುಹಿಸಿದ್ದ (ಜೂನ್ […]
Month : November-2023 Episode : Author : ಡಾ.ಜಿ.ಎಸ್. ವೇಣುಗೋಪಾಲ್
ಅಭಿನವ ತ್ಯಾಗರಾಜರು ಎಂದೇ ಪ್ರಸಿದ್ಧರಾಗಿದ್ದ ಮೈಸೂರು ವಾಸುದೇವಾಚಾರ್ಯರ ಬಗ್ಗೆ ತಿಳಿಯದವರು ಬಹಳ ಕಡಮೆ. ಮೈಸೂರು ರಾಜಸಭೆಯ ವಾಗ್ಗೇಯಕಾರರಾಗಿ ಅವರು ಮಾಡಿದ ಸಂಗೀತಸೇವೆ ಅಪಾರವಾದದ್ದು. ಅವರು ರಚಿಸಿದ ಇನ್ನೂರಕ್ಕೂ ಹೆಚ್ಚು ಕೃತಿಗಳು ಇಂದಿಗೂ ಹಸಿರಾಗಿವೆ ಮತ್ತು ಹೆಸರಾಗಿವೆ. ವಾಸುದೇವಾಚಾರ್ಯರು ತಮ್ಮ ಜೀವಿತದ ಕೊನೆಯ ಅವಧಿಯನ್ನು ಚೆನ್ನೈನ ಅಡಿಯಾರನಲ್ಲಿರುವ ಕಲಾಕ್ಷೇತ್ರದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಳೆದರು. ಕಲಾಕ್ಷೇತ್ರದ ಸಂಸ್ಥಾಪಕರು ಮತ್ತು ಪ್ರಖ್ಯಾತ ನೃತ್ಯ ಕಲಾವಿದರೂ ಆದ ರುಕ್ಮಿಣಿದೇವಿ ಅರುಂಡೇಲ್, ವಾಸುದೇವಾಚಾರ್ಯರ ಸೇವೆಯನ್ನು ಬಯಸಿ ತಮ್ಮ ಕಲಾಕ್ಷೇತ್ರಕ್ಕೆ ಕರೆಸಿಕೊಂಡಿದ್ದರು. ಅವರಿಬ್ಬರೂ ಸೇರಿ ರಚಿಸಿದ […]
Month : November-2023 Episode : Author : ಎಚ್ ಮಂಜುನಾಥ ಭಟ್
ಪಕ್ಷದ ಸಿದ್ಧಾಂತಕ್ಕೆ ಮೂಲವಾದ ಆರೆಸ್ಸೆಸ್ ಜೊತೆಗೆ ಉತ್ತಮ ಸಂಬಂಧವನ್ನು ಇರಿಸಿಕೊಂಡಿರುವುದು ಮೋದಿ ಅವರ ಹೆಚ್ಚುಗಾರಿಕೆ ಎನ್ನಲಡ್ಡಿಯಿಲ್ಲ. ಈ ವಿಷಯದಲ್ಲಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದ ವಾಜಪೇಯಿ ಅವರು ಟೀಕೆಗೊಳಗಾಗಿದ್ದರು. ಸರ್ಕಾರವು ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಆರೆಸ್ಸೆಸ್ ಮತ್ತು ಪರಿವಾರದವರಿಂದ ಟೀಕೆಗಳು ಬಂದವು. ಅಂಥದೇನೂ ಇರದಂತೆ ತಡೆದದ್ದು ಮೋದಿ ಅವರ ಸಾಮರ್ಥ್ಯ ಎನ್ನಲಡ್ಡಿಯಿಲ್ಲ. ಅದಕ್ಕೆ ಮೋದಿ ಅವರ ವ್ಯಕ್ತಿತ್ವ ಮತ್ತು ಬಲಿಷ್ಠ ರಾಷ್ಟ್ರೀಯತೆಗೆ ಸಂಬಂಧಿಸಿದ ಎಲ್ಲವನ್ನೂ ಗಮನಿಸುತ್ತ ಅದನ್ನು ತಪ್ಪದಂತೆ ಅವರು ನೋಡಿಕೊಳ್ಳುತ್ತಿರುವುದು ಕಾರಣ ಎನ್ನಬಹುದು. (ಕಳೆದ […]