ಉತ್ಥಾನ ಮೇ 2024ರ ಸಂಚಿಕೆ
Month : May-2024 Episode : Author :
Month : May-2024 Episode : Author :
Month : April-2024 Episode : Author : ನಾರಾಯಣ ಶೇವಿರೆ
‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು. ಶಿರಸಿ ಸಮೀಪದ ಸ್ವರ್ಣವಲ್ಲೀ ಮಠದಲ್ಲಿ ಈಚೆಗೆ ಶಿಷ್ಯಸ್ವೀಕಾರ ಕಾರ್ಯಕ್ರಮ ನಡೆಯಿತಷ್ಟೆ. ಆ ಸಂದರ್ಭದಲ್ಲಿ ಅಲ್ಲಿಯ ಹಿರಿಯ ಗುರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಮಾತನಾಡುತ್ತ, ‘ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ’ ಎಂದು […]
Month : April-2024 Episode : Author : ಎಸ್.ಆರ್.ಆರ್.
ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ ಮನುಷ್ಯರ ಬದುಕು ಅಸಾಧ್ಯ.” ವಿಶೇಷವಾಗಿ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಖಾಸಗಿಯಾದ ಸರ್ಕಾರೇತರ ಸಂಸ್ಥೆಯೊಂದನ್ನೂ ಚಿಣ್ಣಪ್ಪ ನಡೆಸುತ್ತಿದ್ದರು. ನಾಗರಹೊಳೆಯ ಸಂರಕ್ಷಕ’ ಎಂಬ ಹೆಸರಿನ ಪ್ರಶಸ್ತಿ ಏನಾದರೂ ಇದ್ದಿದ್ದರೆ ಅದಕ್ಕೆ ಪೂರ್ಣವಾಗಿ ಪಾತ್ರರಾಗುತ್ತಿದ್ದವರು ಕಳೆದ […]
Month : April-2024 Episode : Author : ಎಸ್. ಕಾರ್ತಿಕ್
ಕಿರಿಯ ಕುಣಿಗಲ ರಾಮಶಾಸ್ತ್ರಿಗಳು ತಮ್ಮ ಮನೆಯನ್ನು ಯಾವುದಾದರೂ ಧರ್ಮಕಾರ್ಯಕ್ಕೆ ವಿನಿಯೋಗಿಸಬೇಕೆಂದು ಯೋಚಿಸಿದ್ದರು. ಇದಕ್ಕೆ ಅವಕಾಶ ತಾನಾಗಿಯೇ ಒದಗಿಬಂದಿತು. ಶೃಂಗೇರಿಯ ಶ್ರೀಶಾರದಾಪೀಠದ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು {ಕ್ರಿ.ಶ. ೭-೪-೧೯೧೨ ರಿಂದ ೨೬-೯-೧೯೫೪} ತಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು {ಪೀಠಾಧಿಪತ್ಯದ ಕಾಲ: ಕ್ರಿ.ಶ. ೨೭-೬-೧೮೭೯ ರಿಂದ ೨೦-೩-೧೯೧೨} ಜನ್ಮತಳೆದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದರು. ಇದಕ್ಕಾಗಿ ಆಗ ಶ್ರೀಮಠದ ಆಡಳಿತಾಧಿಕಾರಿಗಳಾಗಿದ್ದ ಶ್ರೀಕಂಠಶಾಸ್ತ್ರಿಗಳೇ ಈ ಕೆಲಸವನ್ನು ಸಾಧಿಸಲು ಸಮರ್ಥರು ಎಂದು ಅರಿತು ಅವರಿಗೆ […]
Month : April-2024 Episode : Author : ಅನಂತ ರಮೇಶ್
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ೧೯೬೨ರಲ್ಲಿ ಪ್ರಾರಂಭವಾದಾಗಿನಿಂದ ಗಮನಾರ್ಹವಾಗಿ ವಿಕಸನಗೊಂಡಿದೆ. ಇದರ ನೇತೃತ್ವ ವಹಿಸಿರುವ ‘ಇಸ್ರೋ’ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಿಶೋಧನೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಮಾಡಿದೆ. ಸಂಸ್ಥೆಯ ತಾಂತ್ರಿಕ ಕಾರ್ಯಕ್ರಮಗಳಾದ ಉಪಗ್ರಹಗಳ ಉಡಾವಣೆ ಮತ್ತು ಇತರ ಗ್ರಹಗಳ ಅನ್ವೇಷಣೆಯಲ್ಲಿ ಭಾರತವನ್ನು ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನದ ಪಥದಲ್ಲಿ ಮುಖ್ಯ ಸ್ಥಾನದಲ್ಲಿರಿಸಿದೆ. ಭಾರತದ ಬಾಹ್ಯಾಕಾಶ ಯೋಜನೆ ಮತ್ತು ಕಾರ್ಯಕ್ರಮವು ನಿಸ್ಸಂದೇಹವಾಗಿ ಪ್ರಗತಿಯತ್ತ ಸಾಗಿದ್ದು ಅದರ ಸಾಧನೆಗಳು ದೇಶದ ಆರ್ಥಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸುತ್ತಿವೆ. […]
Month : April-2024 Episode : ಭಾಗ - 2 Author : ಡಾ. ಬಿ. ಜನಾರ್ದನ ಭಟ್
“ಒಂದು ಸಂಸ್ಕೃತಿಯ ಸಾಹಿತ್ಯ ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದು ಭಾಷಾಂತರದ ಮೂಲಕ. ಆಮೇಲೆ ಅದು ಭಾವಾಂತರ, ಸ್ವತಂತ್ರ ಸಾಹಿತ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಅನುಗುಣವಾಗಿ ಆರಂಭದ ಕನ್ನಡ ಭಾವಗೀತೆ ಮತ್ತು ನಾಟಕಗಳು ಅನುವಾದದ ದಾರಿ ಹಿಡಿದೇ ಕನ್ನಡದೊಳಗೆ ಬಂದವು. ಅಂದರೆ ಇಂಗ್ಲಿಷ್ನಿಂದ ಕಾವ್ಯಸಾಹಿತ್ಯವನ್ನು, ಇಂಗ್ಲಿಷ್ ಮತ್ತು ಸಂಸ್ಕೃತಗಳಿಂದ ನಾಟಕಸಾಹಿತ್ಯವನ್ನು ಕನ್ನಡಿಗರು ಅನುವಾದಗೊಳಿಸಿಕೊಂಡರು. ಕಳೆದ ಸಂಚಿಕೆಯಿಂದ… ೩) ಬಿ. ವೆಂಕಟಾಚಾರ್ಯರ ಅನುವಾದಗಳು ಬಿ. ವೆಂಕಟಾಚಾರ್ಯರನ್ನು (೧೮೪೫-೧೯೧೪) ‘ಕನ್ನಡ ಕಾದಂಬರಿಗಳ ಪಿತಾಮಹ’ ಎಂದು ಕರೆಯಲಾಗಿದೆ. ಇವರ ಸಂಕ್ಷಿಪ್ತ ಪರಿಚಯ ಟಿಪ್ಪಣಿ- […]
Month : April-2024 Episode : Author : ಎಚ್ ಮಂಜುನಾಥ ಭಟ್
ಮಸೀದಿಯ ಬಗ್ಗೆ ಎಎಸ್ಐ ಶೋಧ ನಡೆಸುವಾಗ ಕಟ್ಟಡದ ಒಳಹೊರಗೆ ತುಂಬಿದ ಕಸಕಡ್ಡಿ ಮತ್ತು ಅವಶೇಷಗಳನ್ನು ತೆಗೆಯಬೇಕಾಯಿತು. ತೆಗೆದಾಗ ಹೂತುಹೋದ ಕಟ್ಟಡದ ವಾಸ್ತುಶಿಲ್ಪದ ವಿವರಗಳು ಮತ್ತು ಹೊಸಕಟ್ಟಡದ ಅವಶೇಷಗಳು ಕಂಡುಬAದವು. ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವಾಗ ಬಹಳಷ್ಟು ಮಾನವನಿರ್ಮಿತ ವಸ್ತುಗಳು ಕಂಡುಬಂದವು. ಸೆಂಟ್ರಲ್ ಹಾಲ್ನ ಮುಚ್ಚಿದ ದ್ವಾರದ ಎದುರು ಒಂದು ಶಿವಲಿಂಗದ ಅಲಂಕೃತ ಯೋನಿಪಟ್ಟವು ಕಂಡುಬಂತು. ಅದಲ್ಲದೆ ಹನುಮಂತ, ಮನುಷ್ಯ ಮತ್ತು ಪ್ರಾಣಿಗಳ ಟರ್ರಾಕೋಟಾ ಮೂರ್ತಿಗಳು, ಇತರ ವಸ್ತುಗಳು ಕಟ್ಟಡದ ಅವಶೇಷಗಳ ನಡುವೆ ಸಿಕ್ಕಿದವು. ಮೊಣಕಾಲೂರಿದ ಕಲ್ಲಿನ ಆನೆ ಅವಶೇಷಗಳ […]
Month : April-2024 Episode : ಕಾಂಗ್ರೆಸ್ ನ ಪೂರ್ವಕತೆ Author : ಎಂ.ಬಿ. ಹಾರ್ಯಾಡಿ
ಸ್ವತಂತ್ರ ಭಾರತದಲ್ಲಿ ಸುದೀರ್ಘ ಕಾಲ ಜೀವಂತವಾಗಿದ್ದ ಒಂದು ಹಗರಣವೆಂದರೆ ಅದು ಬೊಫೋರ್ಸ್ ಫಿರಂಗಿ ಖರೀದಿಗೆ ಸಂಬAಧಿಸಿದ ಹಗರಣ; ಅದನ್ನು ‘ಹಗರಣಗಳ ರಾಜ’ ಎಂದು ಬಣ್ಣಿಸಲಾಗುತ್ತದೆ. ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಹಗರಣವಾದ ಕಾರಣ ಇದರಲ್ಲಿ ದೇಶದ ಭದ್ರತೆಯ ಅಂಶ ಕೂಡ ಅಡಕವಾಗಿದೆ. ಈ ಹಗರಣದಲ್ಲಿ ಭಾಗಿಯಾದವರು ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವುದು ಮತ್ತು ಯರ್ಯಾರನ್ನೋ ಬಲಿಪಶುಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರೂ ಕೂಡ ಸಂಶಯದ ಮುಳ್ಳು ಯಾವಾಗಲೂ ಗಾಂಧಿ ಕುಟುಂಬದತ್ತಲೇ ತಿರುಗಿ ನಿಲ್ಲುತ್ತಿತ್ತು. ನೆಹರು-ಗಾಂಧಿ ಕುಟುಂಬದ ಹಗರಣಗಳ ಕಡೆಗೆ ಒಮ್ಮೆ ದೃಷ್ಟಿ […]
Month : April-2024 Episode : Author : ಎಸ್. ಪ್ರಸಾದ್, ಉಜಿರೆ
ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯು ವಿಕೋಪಕ್ಕೆ ಹೋಗುತ್ತಿದೆ. ಶಾಲೆಗಳಲ್ಲಿ ಹಿಂದೂವಿರೋಧಿ ನೀತಿ, ಹಿಂದೂ ದೇವಾಲಯಗಳ ಮೇಲೆ ದಬ್ಬಾಳಿಕೆ, ರಾಮಮಂದಿರದ ವಿಚಾರದಲ್ಲಿ ನಡೆದುಕೊಂಡ ರೀತಿ, ರಾಷ್ಟ್ರೀಯವಾದಿಗಳ ಬಂಧನ, ವಕ್ತಾರರುಗಳ ಮೇಲೆ ಜಾತಿನಿಂದನೆಯ ಕೇಸ್ ದಾಖಲಿಸಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ – ಇವೆಲ್ಲ ತುಷ್ಟೀಕರಣದ ನೀತಿಗೆ ಭರಪೂರ ಪುರಾವೆಗಳನ್ನು ಒದಗಿಸುತ್ತಿವೆ. ವಿರೋಧಾಭಾಸಗಳನ್ನೇ ಮೈವೆತ್ತಿ ಸರ್ಕಾರ ನಡೆಸುವವರು ರಾಜ್ಯದ ಸಮೃದ್ಧಿಯ ಬಗೆಗೆ ಆಸ್ಥೆ ವಹಿಸುತ್ತಿಲ್ಲ. ಕೇವಲ ಗ್ಯಾರಂಟಿಗಳ ಮೂಲಕ ಜನತೆ ಸುಖವಾಗಿದ್ದಾರೆ ಎಂದು ಸರ್ಕಾರವೇನಾದರೂ ಪರಿಭಾವಿಸಿದ್ದರೆ ಅದಕ್ಕಿಂತ ಮಿಗಿಲಾದ ಅಮಾಯಕತೆ ಇಲ್ಲ. […]
Month : April-2024 Episode : Author : ಚೈತನ್ಯ ಹೆಗಡೆ
ಪಡಿತರ, ಶೌಚಾಲಯ, ರಸ್ತೆ, ಗ್ಯಾಸ್ ಸಿಲಿಂಡರ್, ಬ್ಯಾಂಕ್ ಖಾತೆ ಇವನ್ನೆಲ್ಲ ಮೊದಲ ಅವಧಿ ಈಡೇರಿಸಿದ್ದರೆ ಎರಡನೇ ಅವಧಿಯಲ್ಲಿ ಜಲ ಜೀವನ ಮಿಷನ್ ಅನ್ನೋದು ಮನೆಮನೆಗೆ ನಲ್ಲಿ ಸಂಪರ್ಕ ಕೊಟ್ಟಿದೆ. ಮೋದಿ ನೇರ್ಪುಗೊಳಿಸಿದ ಮನೆಯಲ್ಲಿ ಬೆಳೆದ ಹೊಸ ಪೀಳಿಗೆ ಇನ್ನೂ ಹೆಚ್ಚಿನ ಆಕಾಂಕ್ಷೆಗಳಿಗೆ ಚಾಚಿಕೊಳ್ಳುವುದಕ್ಕೆ ಅನುವಾಗುವಂತೆ ಎಕ್ಸ್ಪ್ರೆಸ್ ಹೆದ್ದಾರಿಗಳಾಗಿವೆ, ಹೊಸ ವಿಮಾನನಿಲ್ದಾಣಗಳಾಗಿವೆ, ಆಧುನಿಕ ರೈಲುಗಳು ಹೆಚ್ಚಾಗುತ್ತಿವೆ, ನಿರ್ದಿಷ್ಟ ವಿಷಯಗಳಲ್ಲಿ ಉದ್ಯೋಗಗಳಿಗೆ ನೆರವಾಗುವಂತೆ ಕಾಲೇಜುಗಳು ಹೆಚ್ಚಿವೆ, ನಿಯಮಗಳ ಸಡಿಲಿಕೆಯ ಪೂರಕ ವಾತಾವರಣದಿಂದಾಗಿ ನವೋದ್ದಿಮೆಗಳಲ್ಲಿ ಯುವಕರ ಭವಿಷ್ಯ ಬೆಳಗುತ್ತಿದೆ… ಮೋದಿ ಸರ್ಕಾರವು […]