![ದೀಪ್ತಿ](https://utthana.in/wp-content/uploads/2016/03/dynamic-blue-background_zy9vsq_d-150x150.jpg)
ನ ವೈರಮುದ್ದೀಪಯತಿ ಪ್ರಶಾಂತಂ ನ ದರ್ಪಮಾರೋಹತಿ ನಾಸ್ತಮೇತಿ| ನ ದುರ್ಗತೋsಸ್ಮೀತಿ ಕರೋತ್ಯಕಾರ್ಯಂ ತಮಾರ್ಯಶೀಲಂ ಪರಮಾಹುರಾರ್ಯಾಃ|| (ಅಜ್ಞಾತಮೂಲ) ಯಾರು ಬೇರೆಯವರಲ್ಲಿ ದ್ವೇಷಭಾವನೆಯನ್ನು ಉತ್ತೇಜಿಸುವುದಿಲ್ಲವೋ, ಯಾರು ದುರಭಿಮಾನ ಮೆರೆಯುವುದಿಲ್ಲವೋ, ಯಾರು ತಾನು ಏಕಾಕಿಯೂ ಅಸಹಾಯನೂ ಆಗಿದ್ದೇನೆಂಬ ಕಾರಣದಿಂದ ಅಕಾರ್ಯವನ್ನು ಮಾಡುವುದಿಲ್ಲವೋ, ಅಂಥವನನ್ನು ಆರ್ಯಶೀಲನೆಂದು ಜ್ಞಾನಿಗಳು ಪರಿಗಣಿಸುತ್ತಾರೆ.