ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಹನಿಗವನ

ಮಹತಿ

ಹೆತ್ತ ಕುಡಿಗಳನೂ

ಕಣ್ಣೆತ್ತಿ ನೋಡದ ಕೋಗಿಲೆ

ಮಹಾ ನಿರ್ದಯಿ;

ಪರರ ಕುಡಿಗಳನು

ತನದೆಂದು ಸಲಹುವ ಕಾಗೆ

ಕರುಣಾಮಯಿ!

_ ಗಣಪತಿ ಹೆಗಡೆ

ಬಗೆ

ಈರ್ಷ್ಯೆಯ

ಮೃಷ್ಟಾನ್ನವನುಂಡ

ನಿನಗೆ

ಪ್ರೀತಿತುತ್ತಿನ ರುಚಿ

ಹೇಗೆ ಹತ್ತೀತು?

– ಗಿರಿಜ ಕೆ.ಎಂ.

 

 

 

ತುಳಿತ

ಇದೋ … ಬೆಳಕಾಗಿದೆ,

ಜನ ಚಪ್ಪಾಳೆ ತಟ್ಟುತ್ತಿದ್ದಾರೆ

ಕರಗುವ ಮೇಣದ ಬತ್ತಿಗೆ ಹಿಗ್ಗು,

ಸುಟ್ಟು ಕರಕಲಾದ ಬೆಂಕಿಕಡ್ಡಿ

ಕಾಲಡಿ ನರಳುತಿದೆ!

– ಪುಷ್ಪರಾಜ್ ಚೌಟ

 

 

 

ವ್ಯತ್ಯಾಸ

ಇರುಳ ಹೆಜ್ಜೆಯ

ಭರಿಸಲು

ಬೆಳಕೇ ಬೇಕಿಲ್ಲ.

ಅಂತರಾತ್ಮದ

ಸಣ್ಣ ಕಿಡಿಯೂ ಸಾಕು!

– ಸುಷ್ಮಾ ಮೂಡಬಿದ್ರಿ

 

 

 

ಚಂಚಲೆ

ಆ ಕೊಳದಿಂದ

ಈ ಕೊಳಕ್ಕೆ

ಜಿಗಿಯುವುದರಲ್ಲಿತ್ತು

ಮೀನು,

ಅಷ್ಟೊತ್ತಿಗೆ ಅವಳು

ಕಣ್ಣಿನ ಕಕ್ಷೆ

ತಪ್ಪಿಸಿದಳು!

_ ನಾಗರಾಜ್ ವೈದ್ಯ

 

 

 

 

ಬದುಕು

ಒಲವ ಘಾಸಿಗಳನು

ಸೈರಿಸಿಕೊಳ್ಳಲೇಬೇಕು

ಬದುಕು

ಒಲವಿಗಿಂತ ತೀವ್ರ!

_ ಸುಷ್ಮಾ ಮೂಡಬಿದ್ರಿ

 

 

 

ಏಕೆ?

ಪ್ರತಿದಿನ,

ಪ್ರತಿಕ್ಷಣವೂ

ನಿನಗೆ

ಮುಡುಪಿರುವಾಗ,

ಪ್ರೀತಿಗೆ

ಮತ್ತೇಕೆ ಬೇಕು

ವಿಶೇಷದಿನ?!

– ಅನುಪಮ ಎಸ್ ಗೌಡ

 

 

 

ಕರ್ತವ್ಯ

ಪಾದಗಳ ತಳದಲಿ

ನಲುಗಿದರೂ ತಾನು

ಪರಿಮಳಿಸುವುದೊಂದೇ

ಕೆಲಸ

ಮಲ್ಲಿಗೆಗೆ;

ಮುಡಿಯಾದರೇನು

ಗೋರಿಯಾದರೇನು!

– ಕಾದಂಬಿನಿ

 

 

 

ಸುರಕ್ಷೆ

ನೀನು,

ಪಾತಕವೆಸಗಿ

ತಲೆಮರೆಸಿಕೊಳ್ಳಬಹುದಾದ

ಒಂದೇ ಒಂದು ಜಾಗವೆಂದರೆ,

ಅದು-

ಸೆರಗು!

– ಕಾದಂಬಿನಿ

 

One Response to “ಹನಿಗವನ”

  1. gurunaath boragi

    ‘ಮಹತಿ ‘ ಕವಿತೆಯನ್ನು ಗಣಪತಿ ಹೆಗಡೆ ಯವರು ಬರೆದದ್ದು. ‘ಏಕೆ?’ ಕವಿತೆಯನ್ನು ಅನುಪಮ ಎಸ್ ಗೌಡ ಅವರು ಬರೆದದ್ದು. ಮೂಲ ಲೇಖಕರ ಹೆಸರಿನ ಬದಲು
    ಅಕ್ಷತ ಮತ್ತು ಕಾದಂಬಿನಿ ಹೆಸರುಗಳು ಕಣ್ತಪ್ಪಿನಿಂದಾಗಿ ಪ್ರಕಟವಾಗಿವೆ. ಇದಕ್ಕಾಗಿ ವಿಷಾದಿಸುತ್ತೇವೆ. ಮುಂದಿನ ಸಂಚಿಕೆಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ

    -ಉತ್ಥಾನದ ಪರವಾಗಿ

    Reply

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ