ಶಾಸ್ತ್ರಿಗಳ ಕಚೇರಿ ಅತ್ಯಂತ ವಿಶಿಷ್ಟ. ಯಾವುದೇ ರಾಗವನ್ನು ಹಿಗ್ಗಿಸಿ ಹಿಗ್ಗಿಸಿ ಎಳೆದು ತುಂಬಾ ಹೊತ್ತು ಆಲಾಪನೆ ಮಾಡುವುದು ಅವರ ಪರಿಪಾಟಿ ಆಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಇಡೀ ರಾಗದ ಸತ್ತ್ವವನ್ನು ಶ್ರೋತೃಗಳ ಮುಂದೆ ತೆರೆದಿಟ್ಟುಬಿಡುತ್ತಿದ್ದರು. ಚಿಕ್ಕ ಚೊಕ್ಕ ಹಿತವಾದ ಆಲಾಪನೆ; ಮುಂದಿನ ಹಂತ ಕೃತಿ, ನೆರವಲ್, ಸ್ವರಪ್ರಸ್ತಾರ. ನೆರವಲ್ ಮಾಡುವಾಗ ಅದರಲ್ಲೇ ಮುಳುಗಿ, ಆಮೇಲೆ ಅದರ ಜೊತೆಯಲ್ಲೇ ಎಲ್ಲೆಲ್ಲೋ ಪಯಣಿಸಿ ಸ್ವರಪ್ರಸ್ತಾರ ಮಾಡುವಾಗ ಉಸಿರು ಬಿಗಿಹಿಡಿದು ಕೇಳಿ, ಕೊನೆಗೆ ಪಲ್ಲವಿ ಹಾಡಿ ನಿಲ್ಲಿಸಿದಾಗ ದಡಕ್ಕನೆ ಕೆಳಗೆ ಬಿದ್ದ ಅನುಭವ; […]
ಸಂಗೀತ ಅಧ್ಯಾತ್ಮಗಳ ಬೆಸುಗೆ
Month : May-2015 Episode : Author : ಎಚ್ ಮಂಜುನಾಥ ಭಟ್