ಪರೀಕ್ಷೆಗಳು ನಿರಂತರ ನಡೆಯುತ್ತಿರುತ್ತವೆ ಅವುಗಳಲ್ಲಿ ಪಾಸಾಗಬೇಕು ನಿಜ! ಪಾಸಾಗಲೇಬೇಕು ಆ ಕಾರಣಕ್ಕೆ ನಾವು ಏನನ್ನೂ ಮಾಡುತ್ತೇವೆ ಎನ್ನುವುದು ದುಂಡಾವರ್ತನೆ. ಪಾಸೋ–ನಪಾಸೋ ಪರೀಕ್ಷೆಗಳು ನಮ್ಮ ಮನಸ್ಸನ್ನು ಪಕ್ವಗೊಳಿಸುತ್ತವೆ. ಮುಂದಿನ ಹೋರಾಟದ ಹಾದಿಯನ್ನು ಸುಗಮ ಮಾಡಿಕೊಡುತ್ತವೆ. ಕನಕದಾಸರ ಕಥೆಯಲ್ಲಿ ಗುರುಗಳ ಆಜ್ಞೆಯಂತೆ ಬಾಳೆಹಣ್ಣು ತಿನ್ನುವ ಕಥೆಯಲ್ಲಿ ಗುರುಗಳು ಹೇಳಿದಂತೆ ಮಾಡಬೇಕು ಎನ್ನುವ ಕಾರಣಕ್ಕೆ ಇತರ ಶಿಷ್ಯರು ಗೆದ್ದರು. ಆದರೆ ಗುರುಗಳ ಪ್ರಶ್ನೆಯನ್ನು ನಿಜವಾಗಿ ಅರ್ಥಮಾಡಿಕೊಂಡ ಕನಕನಿಗೆ ಯಾರೂ ಇಲ್ಲದ ಜಾಗ ದೊರೆಯಲೇ ಇಲ್ಲ! ಅವನು ವಸ್ತುಶಃ ಪರೀಕ್ಷೆಯಲ್ಲಿ ಸೋತರೂ ಅಂತರ್ದೃಷ್ಟಿಯಿಂದ […]




