
ಮನುಷ್ಯನಿಗೆ, ತನಗೆ ದುಃಖವಾಗಬಾರದು, ಕಾಯಿಲೆಯಾಗಬಾರದು ಎಂದು ಅನಿಸುತ್ತದೆ. ಆದರೆ ಅವನಿಗೆ ಕಾಯಿಲೆ ಹಾಗೂ ದುಃಖಗಳನ್ನು ನಿವಾರಿಸಲು ಶಕ್ಯವಾಗುವುದಿಲ್ಲ. ಅಂದರೆ `ನಾನು ಕರ್ತಾ’ ಎಂಬ ಭಾವನೆಯು ನಿಶ್ಚಿತವಾಗಿಯೂ ಮಿಥ್ಯೆ ಆಗಿರುತ್ತದೆ. ಒಡೆತನವು ಇಲ್ಲದೇ ಇದ್ದರೂ ಮನೆಯ ಒಡೆತನವನ್ನು ಮೆರೆಸುವ ಪ್ರಯತ್ನ ಮಾಡುವ ನಮಗೇನೆನ್ನಬೇಕು? ಆದ್ದರಿಂದ ಪ್ರಾಪಂಚಿಕರಿಗೂ ಸತ್ಪುರುಷರಿಗೂ ಇರುವ ವ್ಯತ್ಯಾಸವೇನೆಂದರೆ ಅವರು ಕರ್ತೃತ್ವವನ್ನು ಭಗವಂತನ ಕಡೆಗೆ ಕೊಡುತ್ತಾರೆ, ನಾವು ಅದನ್ನು ನಮ್ಮ ಕಡೆಗೆ ತೆಗೆದುಕೊಳ್ಳುತ್ತೇವೆ. ರಾಮನು ಕರ್ತಾ ಎಂದರೆ ಸುಖ, ಕಲ್ಯಾಣ ಎಲ್ಲವೂ ಬಂದಂತೆ. ಎಲ್ಲವನ್ನೂ ಅವನಿಗೆ ಒಪ್ಪಿಸಿ […]