
ಇಂದು ದೇಶದುದ್ದಕ್ಕೂ ಎಲ್ಲವನ್ನೂ ರಾಜಕೀಯ ಲಾಭದಿಂದ ನೋಡುವ, ಜಾತಿ-ಮತ, ಪಂಗಡಗಳನ್ನು ಚುನಾವಣಾ ಅಸ್ತ್ರವಾಗಿ, ಮತಬ್ಯಾಂಕುಗಳಾಗಿ ಬಳಸುವ, ದೀನ-ದಲಿತೋದ್ಧಾರದ ನೆಪದಲ್ಲಿ ಸ್ವಾರ್ಥಸಾಧಿಸಿಕೊಳ್ಳುವ, ರಾಷ್ಟ್ರದೇಳಿಗೆಯ ಸೋಗಿನಲ್ಲಿ ಲವಲೇಶವೂ ಸಾಮಾಜಿಕ ಕಳಕಳಿಯಿರದ ಮಂದಿಗಳೇ ಅಧಿಕವಾಗಿರುವ ಈ ಕಾಲದಲ್ಲೂ, ಸಮಾಜದ ಒಳಿತಿಗಾಗಿ ಚಿಂತಿಸುವ ಕೆಲವು ವ್ಯಕ್ತಿಗಳು ನಮ್ಮ ನಡುವೆ ಇರುವುದು ಈ ನೆಲದ ಪುಣ್ಯ…..