
೧೯೬೨ರ ಯುದ್ಧದ ಕಾರಣವನ್ನು ಹುಡುಕುತ್ತಾ ಹೋದರೆ ಅಲ್ಲಿಂದ ಒಂದು ದಶಕದಷ್ಟು ಹಿಂದಕ್ಕೆ ಹೋಗುತ್ತೇವೆ. ೧೯೫೦ರ ಅಕ್ಟೋಬರ್ ೭ರಂದು ಚೀನಾದ ಲಿಬರೇಷನ್ ಆರ್ಮಿ ಇದ್ದಕ್ಕಿದ್ದಂತೆ ಟಿಬೆಟ್ ಪ್ರವೇಶಿಸಿತು. ಒಳನುಗ್ಗಿದ ಚೀನಾ ಪಡೆಗಳನ್ನು ತಡೆಯುವ ಸ್ಥಿತಿಯಲ್ಲಿ ಟಿಬೆಟ್ ಇರಲಿಲ್ಲ, ಅದು ಭಾರತದ ಸಹಾಯವನ್ನು ಯಾಚಿಸಿತು. ಆದರೆ, ಚೀನಾವನ್ನು ಎದುರುಹಾಕಿಕೊಳ್ಳಲು ಸಿದ್ಧವಿರದ ಜವಾಹರಲಾಲ್ ನೆಹರೂ ಸರ್ಕಾರ ಯಾವುದೇ ರೀತಿಯ ಸಹಾಯವನ್ನು ನಿರಾಕರಿಸಿತು; ಚೀನಾದೊಂದಿಗೆ ಶಾಂತಿಯುತ ಸಂಧಾನ ಮಾಡಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿತು. ಈ ಪ್ರಸಂಗದಲ್ಲಿ ಅಂದಿನ ಭಾರತೀಯ ನಾಯಕರ ದೂರದೃಷ್ಟ್ಯಭಾವ […]