
ಕೆಲವು ಸಾಧಕರಿಗೆ ಕೊಡುವ ಪ್ರಶಸ್ತಿ ಆ ಪ್ರಶಸ್ತಿಯ ಗೌರವ-ಹಿರಿಮೆಯನ್ನೇ ಹೆಚ್ಚಿಸುತ್ತದೆ. ಅಂತಹ ಒಂದು ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗುವ ಅವಕಾಶ ದೊರಕುವುದು – ಜನವರಿ ೨೬, ೨೦೧೫ ಗಣರಾಜ್ಯೋತ್ಸವದಿನದಂದು ನೀಡುವ ಎರಡು ‘ಭಾರತ ರತ್ನ’ ಪ್ರಶಸ್ತಿಗೆ. ಅಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ‘ಮಹಾಮನಾ’ ಪಂಡಿತ ಮದನಮೋಹನ ಮಾಲವೀಯ (ಮರಣೋತ್ತರವಾಗಿ) ಮತ್ತು ‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ವನ್ನು ನೀಡಿ ಗೌರವಿಸುವರು. ಡಿಸೆಂಬರ್ ೨೫, ೨೦೧೪ರಂದೇ, ಈ ಇಬ್ಬರೂ ಗೌರವಾನ್ವಿತರ ಜನ್ಮದಿನದಂದೇ, ಭಾರತ […]