ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ ಸ್ವೀಕರಿಸಲು, ಮತ್ತು ಸಂಘ?ವು ಎದುರಾದಾಗ ಮುನ್ನಡೆದು ನಿಮ್ಮ ಕರ್ತವ್ಯವನ್ನು ನಿರ್ವಹಿಸಲು ಗೀತೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಭಗವದ್ಗೀತೆಯ ಪರಿಚಯ ದೊರೆತ ಎಲ್ಲ ಶ್ರದ್ಧಾವಂತರದೂ ಇಂತಹದೇ ಅನಿಸಿಕೆ ಇದೆ. ಗೀತೆಯ ಬಗೆಗೆ ಏನೇ ಹೇಳಹೊರಟರೂ ಚರ್ವಿತಚರ್ವಣವೆನಿಸುವ ಸಂಭವವಿದೆ. […]





