ಮಂತ್ರೋ ಹಿ ಭಾವೇನ ಯುತೋ ಫಲಪ್ರದಃ ಮೌರ್ವ್ಯಾ ಸುಸಜ್ಜೀಕೃತಬಾಣವದ್ ಧ್ರುವಂ | ಭಾವೇನ ಹೀನಸ್ತು ವಿನಿಷ್ಫಲೋ ಭವೇತ್ ಕೀರಸ್ಯವಾಗೀರಿತರಾಮಶಬ್ದವತ್ || “ಲಕ್ಷ್ಯವಾಕ್ಯದಲ್ಲಿ ಭಾವಸಾಂದ್ರತೆಯನ್ನು ಹೊಗಿಸಿದಲ್ಲಿ ಮಾತ್ರ ಅದು ಫಲಪ್ರದವಾದೀತು, ಆಗ ಅದು ಸರಿಯಾಗಿ ಸಂಧಾನ ಮಾಡಿದ ಬಾಣದಂತೆ ಗುರಿಯನ್ನು ಮುಟ್ಟೀತು. ಭಾವದ ದಟ್ಟಣೆಯ ಕೊರತೆಯಿದ್ದಲ್ಲಿ ಯಾಂತ್ರಿಕ ಆಚರಣೆ ಫಲ ಕೊಡಲಾರದು – ಗಿಣಿಪಾಠದಂತೆ.” ಧ್ಯೇಯವಾಕ್ಯಗಳಿಗೋ ಆದೇಶಗಳಿಗೋ ಸಾಫಲ್ಯಸಾಧ್ಯತೆಯುಂಟಾಗುವುದು ಅವುಗಳಲ್ಲಿ ಭಾವಸಾಂದ್ರತೆಯ ಸಮಾಗಮವಾದಾಗ. ಭಾವನೆಯು ಗರ್ಭೀಕೃತವಾಗದಿದ್ದಲ್ಲಿ ಅನೂಚ್ಚಾರಣವೂ ಪುರಶ್ಚರಣವೂ ಯಾಂತ್ರಿಕಕ್ರಿಯೆಯಷ್ಟೆ ಆದೀತು. ‘ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ’ […]
ದೀಪ್ತಿ
Month : April-2023 Episode : Author :