ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಮಂತ್ರೋ ಹಿ ಭಾವೇನ ಯುತೋ ಫಲಪ್ರದಃ

ಮೌರ್ವ್ಯಾ ಸುಸಜ್ಜೀಕೃತಬಾಣವದ್ ಧ್ರುವಂ |

ಭಾವೇನ ಹೀನಸ್ತು ವಿನಿಷ್ಫಲೋ ಭವೇತ್

ಕೀರಸ್ಯವಾಗೀರಿತರಾಮಶಬ್ದವತ್ ||

“ಲಕ್ಷ್ಯವಾಕ್ಯದಲ್ಲಿ ಭಾವಸಾಂದ್ರತೆಯನ್ನು ಹೊಗಿಸಿದಲ್ಲಿ ಮಾತ್ರ ಅದು ಫಲಪ್ರದವಾದೀತು, ಆಗ ಅದು ಸರಿಯಾಗಿ ಸಂಧಾನ ಮಾಡಿದ ಬಾಣದಂತೆ ಗುರಿಯನ್ನು ಮುಟ್ಟೀತು. ಭಾವದ ದಟ್ಟಣೆಯ ಕೊರತೆಯಿದ್ದಲ್ಲಿ ಯಾಂತ್ರಿಕ ಆಚರಣೆ ಫಲ ಕೊಡಲಾರದು – ಗಿಣಿಪಾಠದಂತೆ.”

ಧ್ಯೇಯವಾಕ್ಯಗಳಿಗೋ ಆದೇಶಗಳಿಗೋ ಸಾಫಲ್ಯಸಾಧ್ಯತೆಯುಂಟಾಗುವುದು ಅವುಗಳಲ್ಲಿ ಭಾವಸಾಂದ್ರತೆಯ ಸಮಾಗಮವಾದಾಗ. ಭಾವನೆಯು ಗರ್ಭೀಕೃತವಾಗದಿದ್ದಲ್ಲಿ ಅನೂಚ್ಚಾರಣವೂ ಪುರಶ್ಚರಣವೂ ಯಾಂತ್ರಿಕಕ್ರಿಯೆಯಷ್ಟೆ ಆದೀತು. ‘ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ’ ಮೊದಲಾದ ಪ್ರಸಿದ್ಧ ವಾಕ್ಯಗಳ ಇಂಗಿತವೂ ಇದೇ. ಭಾವನಾಸ್ತರದ ಸ್ಪಂದನ ಏರ್ಪಟ್ಟಲ್ಲಿ ಪವಾಡಗಳೇ ಘಟಿಸಬಹುದು.

ಜಪಾನಿನಲ್ಲಿ ನೋಬುನಾಗಾ ಎಂಬ ಸೇನಾಧಿಪತಿ ಇದ್ದ. ಅವನಲ್ಲಿದ್ದ ಸೈನ್ಯ ಶತ್ರುಸೈನ್ಯದ ಕಾಲುಭಾಗಕ್ಕೂ ಕಡಮೆ. ಆದರೂ ಯುದ್ಧ ಮಾಡಲೇಬೇಕೆಂದು ನಿರ್ಧರಿಸಿದ. ಆದರೆ ಅವನ ಸೈನಿಕರು ಹಿಂದೆಗೆಯುತ್ತಿದ್ದರು. ಆತ ಒಂದು ತಂತ್ರ ಮಾಡಿದ. ದಾರಿಯಲ್ಲಿ ಒಂದು ದೇವಾಲಯ ಕಂಡಿತು. ಆತ ಸೈನಿಕರಿಗೆ ಹೇಳಿದ – “ನಾನೀಗ ಗುಡಿಯೊಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತೇನೆ. ಆಮೇಲೆ ನಾಣ್ಯವೊಂದನ್ನು ಚಿಮ್ಮಿಸುತ್ತೇನೆ. ಆಗ ‘ರಾಜ’ ಮೇಲ್ಮುಖವಾದರೆ ಗೆಲವು ನಮ್ಮದಾಗುತ್ತದೆಂದು ಅದರ ಅರ್ಥ.” ಹಾಗೆಯೇ ನಡೆಯಿತು. ನಾಣ್ಯ ‘ರಾಜ’ನನ್ನು ತೋರಿಸಿದುದನ್ನು ನೋಡಿ ಸೈನಿಕರು ಉತ್ಸಾಹಿತರಾಗಿ ಮುನ್ನುಗ್ಗಿ ಹೋರಾಡಿದರು. ಯಶಸ್ಸು ಲಭಿಸಿತು. ಅನಂತರ “ನೀವು ಅದ್ಭುತವನ್ನು ಸಾಧಿಸಿದಿರಿ” ಎಂದು ಪ್ರಶಂಸಿಸಿದ ಮಿತ್ರನಿಗೆ ನೋಬುನಾಗಾ ಹೇಳಿದ – “ಹೌದು, ಅದು ಅದ್ಭುತವೇ. ಸೈನಿಕರಲ್ಲಿ ಮೂಡಿದ ಆತ್ಮವಿಶ್ವಾಸವೇ ಆ ಅದ್ಭುತ.” ಹೀಗೆಂದು ತಾನು ಬಳಸಿದ್ದ ನಾಣ್ಯವನ್ನು ತೋರಿಸಿದ. ಅದರ ಎರಡೂ ಬದಿಗಳಲ್ಲಿ ‘ರಾಜ’ ಇತ್ತು!

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ