ಕನ್ನಡ ವೈದಿಕ ಸಾಹಿತ್ಯ ಕೃತಿಗಳಲ್ಲಿ ಚಾಟುವಿಟ್ಠಲನಾಥನ ಭಾಗವತದ ಹೊರತು ಮಿಕ್ಕವುಗಳಲ್ಲಿ ಒಂದೊಂದು ಸಾಲಿನಲ್ಲಿ ಕಥಾಂಶ ಸೂಚಿತವಾಗಿದ್ದು ಯಾವುದೇ ವಿಶೇಷ ಕಂಡುಬರುವುದಿಲ್ಲ. ದಾಸಸಾಹಿತ್ಯದಲ್ಲಿನ ಕೆಲವು ಕಾವ್ಯಗಳನ್ನು ಹೊರತುಪಡಿಸಿ ಇನ್ನಿತರ ಕಾವ್ಯಗಳಲ್ಲಿ, ಯಕ್ಷಗಾನ ಕೃತಿಗಳಲ್ಲಿ, ಸಂಗೀತ ಕೃತಿಗಳಲ್ಲಿ ವಾಮನಾವತಾರದ ಕಥೆ ದಶಾವತಾರಗಳ ಸ್ತುತಿ ಸಂದರ್ಭದಲ್ಲಿ ಬಂದಿದೆ. ದಾಸಶ್ರೇಷ್ಠರು ತಮ್ಮ ಕೀರ್ತನೆಗಳಲ್ಲಿ ಈ ಕಥಾಂಶವನ್ನು ಬಹಳವಾಗಿ ತಂದಿರುವುದುಂಟು. ವಾಮನಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಐದನೆಯದು. ಈ ಅವತಾರದಲ್ಲಿ ವಿಷ್ಣುವು ಕಶ್ಯಪನ ಪತ್ನಿಯಾದ ಅದಿತಿಯಲ್ಲಿ ವಾಮನನಾಗಿ ಜನಿಸಿದನು. ಬಲಿಚಕ್ರವರ್ತಿಯ ಅಹಂಕಾರವನ್ನು ಮುರಿಯುವುದಕ್ಕಾಗಿ ಅದಿತಿದೇವಿಯಲ್ಲಿ ಇಂದ್ರನಿಗೆ […]
ಕನ್ನಡ ಸಾಹಿತ್ಯದಲ್ಲಿ ವಾಮನಾವತಾರದ ಉಲ್ಲೇಖಗಳು: ಸಂಕ್ಷಿಪ್ತ ಸಮೀಕ್ಷೆ
Month : November-2024 Episode : Author : ಎಸ್. ಕಾರ್ತಿಕ್