ಹಿಂದೊಮ್ಮೆ ದ್ವಾಪರಯುಗದಲ್ಲಿ ದ್ರೋಣರ ಆವಾಸ ಸ್ಥಾನವಾಗಿದ್ದು, ಕುರುಕ್ಷೇತ್ರ ಯುದ್ದದ ಧರ್ಮಭೂಮಿಯಾಗಿದ್ದ, ಸತ್ಯ ಅಸತ್ಯಗಳ ದರ್ಶನ ಮಾಡಿಸಿದ್ದ ಹರಿಯಾಣಾದ ನೋವು ಮನಸ್ಸನ್ನು ಹೈರಾಣಾಗಿಸುತ್ತದೆ. ಕಾಶ್ಮೀರದ ಸಮಸ್ಯೆ ಮುಗಿದ ಮೇಲೆ, ಅಲ್ಲಿ ಕಲ್ಲು ತೂರಾಟ ನಿಂತಮೇಲೆ, ಪೊಲೀಸರನ್ನು, ಸೈನಿಕರನ್ನು ಬಡಿಯುವುದು, ಸ್ಮಾರಕಗಳಿಗೆ ಒದೆಯುವುದೆಲ್ಲ ಈಗೀಗ ಸದ್ದಡಗಿ ಮೂಲೆ ಸೇರಿದೆ, ಅಂತಲೇ ಅನೇಕರು ನಿರಾಳರಾಗಿದ್ದಾರೆ. ದುರದೃಷ್ಟ ಅಲ್ಲಿ ಕಡಮೆಯಾದರೇನಂತೆ ಇಲ್ಲೆಲ್ಲ ಮೊಳಕೆಯೊಡೆಯುತ್ತಿದೆ. ಗುರುಗ್ರಾಮ ಭಾರತದ ಡಿಜಿಟಲ್ ರಾಜಧಾನಿಯಾಗುತ್ತಿದೆ ಎಂದಾಗ ಅವರೆಲ್ಲ ಉಬ್ಬಿಹೋಗಿದ್ದರು. ಅಳತೆಯಲ್ಲಿ ಭಾರತದ ಐವತ್ತಾರನೇ ನಗರವೇ ಆಗಿದ್ದರೂ ತಲಾ ಆದಾಯದಲ್ಲಿ […]




