
“ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದಂತೆ” ಎಂದು ಕನ್ನಡದ ಒಂದು ಗಾದೆ ಇದೆ; ದೇಶಾದ್ಯಂತ ನಡೆದ ಖಿಲಾಫತ್ ಚಳವಳಿ, ಅದಕ್ಕೆ ಸಂಬAಧಿಸಿದ ಹಿಂಸಾಚಾರ, ಮತ್ತು ಮುಖ್ಯವಾಗಿ ಕೇರಳದ ಕೆಲವು ಭಾಗಗಳಲ್ಲಿ ನಡೆದ ಮೋಪ್ಲಾ ಹತ್ಯಾಕಾಂಡವನ್ನು ಗಮನಿಸುವಾಗ ಮೇಲಣ ಗಾದೆ ಎಷ್ಟು ನಿಜ ಅನ್ನಿಸದಿರದು. ಹಲವು ತಿಂಗಳು ನಡೆದ ಮೋಪ್ಲಾ ಹತ್ಯಾಕಾಂಡವಂತೂ ಹಿಂದೆAದೂ ಕಂಡಿರದಂಥ ಅತ್ಯಂತ ಅಮಾನವೀಯ ಹಿಂಸಾಕಾಂಡವಾಗಿತ್ತು. ಮುಸಲ್ಮಾನರಿಗೆ ಸ್ವರಾಜ್ ಎಂದರೆ ಖಿಲಾಫತ್ ವಿಷಯವನ್ನು ಪರಿಣಾಮಕಾರಿಯಾಗಿ ಎದುರಿಸುವ ಭಾರತದ ಸಾಮರ್ಥ್ಯ. ಅವರ ಈ ನಿಲವಿಗೆ ಸಹಾನುಭೂತಿಯನ್ನು […]