ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜೂನ್ 2015 > ಕ್ಯಾನ್ವಸ್

ಕ್ಯಾನ್ವಸ್

art newನೀರು ಹೊತ್ತ ನೀರೆಯರು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರವಿ ಹೆಗಡೆ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ನಲ್ಲಿ ಸಂಶೋಧನಾ ಅಭ್ಯರ್ಥಿ. ತೀರ ಎಳವೆಯಲ್ಲೇ ಛಾಯಾಗ್ರಹಣ, ಚಿತ್ರಕಲೆ, ಪರಿಸರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ರೂಢಿಸಿಕೊಂಡು ಬಂದ ರವಿ, ಸತತ ಐದು ವರ್ಷಗಳ ಕಾಲ ಪ್ರಜಾವಾಣಿ ಮಕ್ಕಳ ದೀಪಾವಳಿ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದು ದಾಖಲೆ ನಿರ್ಮಿಸಿದ್ದಿದೆ. ಉತ್ತರ ಕನ್ನಡದ ಕಡಲ ತೀರದ ಕಲ್ಬಂಡೆಗಳು, ಪಶ್ಚಿಮ ಘಟ್ಟದ ಮಳೆಕಾಡು ಮತ್ತು ವಿನಾಶದ ಅಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಸಾಕಷ್ಟು ಕೆಲಸ ಮಾಡುತ್ತಿರುವ ರವಿ ಹೆಗಡೆ, ಜಗತ್ತಿನ ಪ್ರತಿಷ್ಠಿತ ನ್ಯಾಷನಲ್ ಜಿಯೊಗ್ರ್ಯಾಫಿಕ್‌ನಲ್ಲಿ ತಮ್ಮ ಛಾಯಾಚಿತ್ರ ಪ್ರಕಟಿಸಿದ ಹಿರಿಮೆ ಹೊಂದಿರುವವರು.
ಈ ಚಿತ್ರ ಪಡುವಣ ಕಡಲ ತೀರದ ತೆಂಗು-ಕಂಗುಗಳಿಂದ ಕಂಗೊಳಿಸುವ ಹಳ್ಳಿಗಳ ಚಿರಪರಿಚಿತ ಚಿತ್ರಣ. ಸೂರ್ಯಾಸ್ತದ ದೃಶ್ಯ ಮನಮೋಹಕ. ಹೊಂಬಣ್ಣದೋಕುಳಿ, ಕಡಲ ಮೊರೆತ, ನೀರ ಕೊಡಪಾನ ಹೊತ್ತು ನಡೆವ ನೀರೆಯರು, ಮುಸ್ಸಂಜೆಯ ನೆರಳು-ಬೆಳಕಿನಾಟ – ಇವೆಲ್ಲ ಕಣ್ಣಿಗೆ ಹಬ್ಬ, ಮನಸ್ಸಿಗೆ ಇಂಪು ನೀಡುವಂಥದ್ದು. ಉತ್ತರ ಕನ್ನಡದ ಹಳ್ಳಿಯ ದೃಶ್ಯ ರವಿ ಹೆಗಡೆ ಅವರ ಮನಸ್ಸಿನಲ್ಲಿ ಅಚ್ಚೊತ್ತಿ ಎಳವೆಯಲ್ಲಿ, ಅಂದರೆ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ, ಬಣ್ಣದಲ್ಲಿ ಅಭಿವ್ಯಕ್ತಿಗೊಂಡಿದ್ದು ಹೀಗೆ.
ravi hegdeಬ್ಲಾಗ್:

http://biologisthegde.wix.com/ravihegde
ಫೇಸ್‌ಬುಕ್:
https://www.facebook.com/biologisthegde
ಇಮೇಲ್:
[email protected]

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ