
೫೦೦ ವರ್ಷಗಳಿಂದ ಅಯೋಧ್ಯೆಯಲ್ಲಿ ಕೆಡವಲಾಗಿದ್ದ ಮಂದಿರವನ್ನು ಪುನಃ ಕಟ್ಟಲೆಂದು ನಡೆದ ಅವಿರತ ಹೋರಾಟವು ಸ್ವಾತಂತ್ರ್ಯ ನಿಕಟಪೂರ್ವದ ದಿನಗಳಲ್ಲಿ ಸ್ಥಗಿತವಾಗಿತ್ತಷ್ಟೆ. ಸ್ವಾತಂತ್ರ್ಯ ಬಂದ ಪ್ರಾರಂಭದ ದಿನಗಳಲ್ಲಿ, ಬಾಬರಿಮಸ್ಜಿದ್ ಎಂದು ಕರೆಯಲಾಗುತ್ತಿದ್ದ ಆ ಪರಿತ್ಯಕ್ತ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ರಾಮಲಲಾ ವಿಗ್ರಹ ರೂಪದಲ್ಲಿ ಕಾಣಿಸಿಕೊಳ್ಳಬೇಕೇ? ಇದೇ ಸಮಯದಲ್ಲಿ ಸರ್ದಾರ್ ಪಟೇಲರ ಮುಂದಾಳ್ತನದಲ್ಲಿ ಗುಜರಾತಿನ ಸೋಮನಾಥನು ನೂತನವಾದ ಭವ್ಯ ಆವರಣದಲ್ಲಿ ಪ್ರಕಟಗೊಂಡ. ಅಯೋಧ್ಯೆಯ ಆಂದೋಲನಕ್ಕೆ ಅದರಿಂದ ಸಂಜೀವನಿ ಪ್ರಾಪ್ತವಾಯಿತು. ಸ್ವರ್ಗೀಯ ಅಶೋಕ ಸಿಂಘಾಲ್, ಆದರಣೀಯ ಲಾಲ್ಕೃಷ್ಣ ಆಡ್ವಾಣಿಯವರ ‘killer Instinct’ನ ನೇತೃತ್ವದಲ್ಲಿ ಆಂದೋಲನಕ್ಕೆ […]