
ಈಗ್ಗೆ ಹತ್ತು ವರ್ಷಗಳ ಹಿಂದೆ (2011-12) ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ‘ಇಂಡಿಯಾ ಎಗೆನ್ಸ್ಟ್ ಕರಪ್ಶನ್’ ಘೋಷಣೆಯೊಡಗೂಡಿ ಅಣ್ಣಾ ಹಜಾರೆಯವರ ಮಾರ್ಗದರ್ಶನದಲ್ಲಿ ಸಂಘಟನೆ ಆರಂಭವಾದಾಗ ಇಂತಹದೊಂದು ಜನಾಧಾರಿತ ಆಂದೋಲನ ಅತ್ಯಂತ ಆವಶ್ಯಕವಾಗಿತ್ತೆಂದು ಇಡೀ ದೇಶ ಭಾವಿಸಿತ್ತು. ಆದರೆ ಅಲ್ಪಕಾಲದಲ್ಲಿ ಅಣ್ಣಾ ಹಜಾರೆಯವರನ್ನೇ ಮೂಲೆಗುಂಪು ಮಾಡಿ ಕೇಜ್ರಿವಾಲ್ ನೇರ ರಾಜಕಾರಣಕ್ಕೇ ಇಳಿದರು. ಬಹುಮಟ್ಟಿಗೆ ಅಣ್ಣಾ ಹಜಾರೆಯವರ ವ್ಯಕ್ತಿತ್ವಪ್ರಭಾವದಿಂದ ನಿರ್ಮಾಣಗೊಂಡಿದ್ದ ಸದಭಿಪ್ರಾಯವೇ ಕೇಜ್ರಿವಾಲ್ರ ರಾಜಕೀಯಾಕಾಂಕ್ಷೆಗೆ ಮುಖ್ಯ ಬಂಡವಾಳವಾಗಿ ಕೆಲಸ ಮಾಡಿತ್ತು. ಅವರು ದೆಹಲಿಯ ಮುಖ್ಯಮಂತ್ರಿಯೂ ಆದರು. ನಮ್ಮ ದೇಶಕ್ಕೆ ಭ್ರಮನಿರಸನ ಹೊಸ […]