
ಇಂಗ್ಲೆಂಡ್ನ ದೊರೆ ಪಂಚಮ ಜಾರ್ಜನು ೧೯೧೧ರಲ್ಲಿ ಭಾರತಕ್ಕೆ ಭೇಟಿ ನೀಡಿದನು. ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಅವನ ದರ್ಬಾರು ಏರ್ಪಾಡಾಯಿತು (ಅದು ದೆಹಲಿ ದರ್ಬಾರು ಎಂದು ಚರಿತ್ರೆಯಲ್ಲಿ ಪ್ರಸಿದ್ಧಿ).
Month : April-2015 Episode : Author : ಮ.ಸು. ಮನ್ನಾರ್ ಕೃಷ್ಣರಾವ್
Month : April-2015 Episode : Author : ಸದಾಶಿವ ಎಸ್. ಸಕಲೇಶಪುರ
ಅವತ್ತು ಕಪ್ಪುಬಣ್ಣಕ್ಕೆ ಭಯಂಕರ ಕೋಪ ಬಂದಿತ್ತು. ಭಯಂಕರ ಅಂದ್ರೆ ನಖಶಿಖಾಂತ ಅಂತಾರಲ್ಲ ಅಂಥದ್ದೊಂದು ಕೋಪ ಬಂದಿತ್ತು. ಆ ಊರಿನ ಜನರಿಗೆ ಕಪ್ಪುಬಣ್ಣವೆಂದರೆ ಆಗಿಬರುತ್ತಿರಲಿಲ್ಲ. ಅವರು ಆಗಾಗ ಕಪ್ಪುಬಣ್ಣವನ್ನು ಲೇವಡಿ ಮಾಡುತ್ತಿದ್ದರು.
Month : March-2015 Episode : ಧಾರಾವಾಹಿ 3 Author : ನಾಡೋಜ ಕಮಲಾ ಹಂಪನಾ
“ಅವೆಲ್ಲವನ್ನೂ ನಾವು ಇವಳಿಗೆ ಹೇಳಿಕೊಟ್ಟಿರುವೆವು. ಆದುದರಿಂದ ಇವಳು ನಮ್ಮ ಮಗಳು” ಎಂದ ಆಚಾರ್ಯರ ಮಾತುಗಳು ಅಲ್ಲಿ ನೆರೆದಿದ್ದ ಎಲ್ಲರಿಗೂ ಸೋಜಿಗವನ್ನು ಉಂಟುಮಾಡಿದವು. ಮಾರನೆಯ ದಿವಸ ಅನ್ವಿತಿಯ ಗೆಳತಿಯರ ಗುಂಪು ಹಾಜರಾಯಿತು. ಕಥೆ ಮುಂದುವರಿಯುತ್ತಲೇ ಇದೆ. ಪಂಚಾಣುವ್ರತಗಳಿಗೆ ಅದೆಷ್ಟು ಚೆನ್ನಾಗಿ ಕವಿ ಕಥೆ ನೇಯ್ದಿದ್ದಾನೆ. ನಾಗಶ್ರೀ ನಾಗಶರ್ಮ ಬಹುದೂರ ಬಂದಿದ್ದರು. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳ ಕೊರಳಿಗೆ ಒಂದು ಗಂಡಸಿನ ತಲೆಯನ್ನು ಕಟ್ಟಿದ್ದಾರೆ. ಅವಳನ್ನು ತಳವಾರ ಕರೆದೊಯ್ಯುತ್ತಿದ್ದಾನೆ. ನಾಗಶ್ರೀ ಅದನ್ನು ನೋಡಿದಳು. ಭಯ ಮತ್ತು ಜುಗುಪ್ಸೆಯಿಂದ ತನ್ನ ತಂದೆಯ […]
Month : March-2015 Episode : Author : ಎಂ.ಎ. ಭಾಗೀರಥಿ ಹಗರಿಬೊಮ್ಮನಹಳ್ಳಿ
ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಂದು ದೊಡ್ಡ ಬಾವಿ ಇತ್ತು. ಆ ಬಾವಿಯಲ್ಲಿ ಗಂಗದತ್ತ ಎಂಬ ಕಪ್ಪೆಯೊಂದು ವಾಸವಾಗಿತ್ತು. ಅದು ಆ ಬಾವಿಯಲ್ಲಿದ್ದ ಎಲ್ಲಾ ಕಪ್ಪೆಗಳಿಗೂ ಒಡೆಯನಾಗಿ ಮೆರೆಯುತ್ತ ಕಾಲ ಕಳೆಯುತ್ತಿತ್ತು. ಹೀಗಿರುವಾಗ ಒಮ್ಮೆ ಗಂಗದತ್ತನಿಗೆ ಉಳಿದೆಲ್ಲ ಕಪ್ಪೆಗಳೊಂದಿಗೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಮನಸ್ತಾಪ ಉಂಟಾಯಿತು. ಮಿಕ್ಕ ಕಪ್ಪೆಗಳೆಲ್ಲ ಗಂಗದತ್ತನ ಆಜ್ಞೆಯನ್ನು ಪಾಲಿಸದೆ ತಮ್ಮ ಪಾಡಿಗೆ ತಾವು ಮನಸ್ಸಿಗೆ ಬಂದಂತೆ ನಡೆದುಕೊಳ್ಳತೊಡಗಿದವು. ಇದರಿಂದ ಒಡೆಯನಿಗೆ ಸಹಜವಾಗಿಯೇ ಸಿಟ್ಟು ಬಂದಿತು. ತನ್ನ ಮಾತನ್ನು ಕೇಳದ ಕಪ್ಪೆಗಳಿಗೆಲ್ಲ […]