ಉಪಕ್ರಮ ದೇವವಾಣಿಯಾದ ಸಂಸ್ಕೃತಭಾಷೆಯಲ್ಲಿ ಗಂಭೀರವಾದ ಭಾವಗಳನ್ನೂ ವಿಷಯಗಳನ್ನೂ ಕುರಿತ ಕೃತಿಗಳು ಅಪಾರಸಂಖ್ಯೆಯಲ್ಲಿ ಲಭ್ಯವಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಸಂಸ್ಕೃತ ಸರಸ್ವತಿಯು ಲಘುವಾಗಿ ವಿನೋದ ಮಾಡಿ, ಗೇಲಿಗರೆದು, ನಕ್ಕು-ನಗಿಸಬಲ್ಲಳು ಎಂದರೆ ಹುಬ್ಬೇರಿಸುವ ಮಂದಿಯೇ ಹೆಚ್ಚು. ಇದಕ್ಕೆ ಕಾರಣ ಸಂಸ್ಕೃತದಲ್ಲಿರುವ ಕಟಕಿ, ಕುಹಕ, ಹಾಸ್ಯಗಳ ಬಗೆಗಿನ ಅಜ್ಞಾನವೇ. ಆದಿಕಾವ್ಯ ರಾಮಾಯಣದಲ್ಲಿಯೇ ಹಲವಾರು ಹಾಸ್ಯಪ್ರಸಂಗಗಳಿವೆ. ಅನಂತರದ ಸಾಹಿತ್ಯದಲ್ಲಂತೂ ಇಂಥ ಸಂದರ್ಭಗಳು ಸಾವಿರಾರು. ಇದು ಕಾವ್ಯದ ಮಾತಾಯಿತು, ಶಾಸ್ತ್ರದಲ್ಲಿಯೂ ಹಾಸ್ಯದ ಪ್ರಸ್ತಾವವುಂಟೋ? – ಎಂದರೆ, ಅವಶ್ಯವಾಗಿ ಉಂಟು. ಕಲಾಮೀಮಾಂಸೆಯ ಮೊಟ್ಟಮೊದಲ ಲಕ್ಷಣಗ್ರಂಥವಾದ ಭರತಮುನಿಯ […]
‘ಕಂಟಕಾಂಜಲಿ’: ವಿಡಂಬನೆಯ ಆಡುಂಬೊಲ
Month : April-2020 Episode : Author : ಬಿ.ಎನ್. ಶಶಿಕಿರಣ