![ಪ್ರಾರ್ಥನೆ](https://utthana.in/wp-content/uploads/2018/12/Utthana_October-2018-81-150x150.jpg)
ರಾವಣನ ರಾಜ್ಯದಿ ವಿಭೀಷಣನು ಇದ್ದಂತೆ ಇರಲು ಧೈರ್ಯವ ನೀಡು ದಾಶರಥಿ ರಾಮ | ಶುಕಸಾರಣಾದಿಗಳ ಶೂರ್ಪಣಖೆಯರ ನಡುವೆ ಋತಧರ್ಮ ತಪ್ಪದಂತಿರಿಸೆನ್ನ ಕ್ಷೇಮ ||೧|| ಧೃತರಾಷ್ಟ್ರನರಮನೆಯಲಿದ್ದ ವಿದುರನ ತೆರದಿ ಬಾಳ್ವದಾರಿಯನೆನಗೆ ತೋರೆಯಾ ಮಾಧವ? | ದು?ಸಹಚರರ ಪಡೆಕಟ್ಟಿದ ಸುಯೋಧನನ ಆಟಗಳ ನೋಡುತಿಹೆನಿಲ್ಲಿ ನಾ ಕಾದವ! ||೨|| ಕಂಸನಾಡಳಿತದಲಿ ಸೆರೆಯಾದರಿಲ್ಲ ಭಯ ನಿನ್ನ ಬರವನು ನಿರುಕಿಸುತ ಕಾಲ ಕಳೆವೆ | ದೌಷ್ಟ್ಯವೆಲ್ಲವ ಮೆಟ್ಟಿ ಧರ್ಮರಾಜ್ಯವ ಕಟ್ಟಿ ನಾದವ?ದಿ ಜಗದ ಕೊಳೆಯ ನೀ ತೊಳೆವೆ ||೩|| ರಾಮ-ಕೃಷ್ಣರ ನೆಲವು; ಋತಕಿಲ್ಲಿ ಬಲ_ಗೆಲವು […]