ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಉತ್ಥಾನದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ  ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭

ಉತ್ಥಾನದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ  ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭

ಉತ್ಥಾನ

ಉತ್ಥಾನ ಸದಭಿರುಚಿಯ ಕನ್ನಡ ಮಾಸಪತ್ರಿಕೆ,ಬೆಂಗಳೂರು ೫೬೦ ೦೧೯

 

ಕಾಲೇಜು ವಿದ್ಯಾರ್ಥಿಗಳಿಗಾಗಿ  ಸಂಶೋಧನ ಪ್ರಬಂಧ ಸ್ಪರ್ಧೆ೨೦೧೭

 ವಿಷಯ : ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್‌ನ ಒಳಗೆ – ಹೊರಗೆ

ಕಾಲೇಜು ಕ್ಯಾಂಪಸ್ – ಒಂದು ಅದ್ಭುತ ಲೋಕ. ಚಿಟ್ಟೆಯಾಗುವ ಕಂಬಳಿಹುಳಕ್ಕೆ ಗೂಡಿನವಾಸ ಅನಿವಾರ್ಯ. ಕ್ಯಾಂಪಸ್‌ನಲ್ಲಿ ಮುಕ್ತ ವೈಚಾರಿಕ ಚರ್ಚೆಯ ಅವಕಾಶವೂ ಬೇಕು. ಪಠ್ಯಪುಸ್ತಕ, ಪರೀಕ್ಷೆಯ ಅಂಕಗಳನ್ನೂ ಮೀರಿದ ವ್ಯಕ್ತಿತ್ವವನ್ನೂ ಕಾಲೇಜು ವಿದ್ಯಾಭ್ಯಾಸವು ವಿದ್ಯಾರ್ಥಿಗಳಲ್ಲಿ ಮೈಗೂಡಿಸಬೇಕು. ತಂತ್ರಜ್ಞಾನದ ಮೂಲಕ ಸಂವಹನ ಮಾಧ್ಯವಗಳು ಅಂಗೈಗೆ ಬಂದಿರುವುದೂ ನಿಜವೇ.

ಈ ಎಲ್ಲ ಹಿನ್ನೆಲೆಯಲ್ಲಿ ಕಾಲೇಜು ಕ್ಯಾಂಪಸ್‌ನ ವೈಚಾರಿಕ ಚರ್ಚೆಯ ಅವಕಾಶ ಹೇಗಿದೆ? ವಿಚಾರದ ದಿಕ್ಕು-ದಿಸೆ ಏನಿದೆ? ವೈಚಾರಿಕ ಚರ್ಚೆಗಳಿಂದ ದೂರ ಉಳಿದು ಕೇವಲ ಕೆರಿಯರಿನಲ್ಲಿ ಮುಳುಗುವುದು ಎಷ್ಟು ಸರಿ? ವಿಚಾರಸ್ವಾತಂತ್ರ್ಯ ಅತಿಯಾಗಿ ದೇಶದ ಘನತೆಯನ್ನು ಪ್ರಶ್ನಿಸುವ ಸ್ವೇಚ್ಛಾಚಾರವಾಗುತ್ತಿದೆಯೇ? ವಿಚಾರಸ್ವಾತಂತ್ರ್ಯದ ನಾಳೆಗಳು ಹೇಗಿದ್ದರೆ ಸಮಂಜಸ? – ನಿಮ್ಮ ಅಭಿಪ್ರಾಯಗಳನ್ನು ಪ್ರಬಂಧ ರೂಪದಲ್ಲಿ ಬರೆದು ನಮಗೆ ಕಳುಹಿಸಿ.

ಪ್ರಸ್ತುತ ಕ್ಯಾಂಪಸ್ ವಾತಾವರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ, ಆದರ್ಶ ಚಿಂತನೆಯನ್ನು ಪ್ರಚೋದಿಸುವುದಕ್ಕಾಗಿಯೆ ಈ ಸ್ಪರ್ಧೆ.

ಗಮನಿಸಿ:

ವಿಷಯ ಮಂಡನೆಯ ಸಂದರ್ಭದಲ್ಲಿ ಇವುಗಳಿಗೆ ಆದ್ಯತೆಯಿರಲಿ –

  1. ಸೂಕ್ತ ಮಾಹಿತಿಗಳು
  2. ಪೂರಕ ಅಂಕಿ-ಅಂಶಗಳು
  3. ಸಮೀಕ್ಷಾತ್ಮಕ ತುಲನಾತ್ಮಕ ದೃಷ್ಟಿಕೋನ.

– ಇವುಗಳೆಲ್ಲವೂ ಸಾಧಾರವಾಗಿರಲಿ..

 

 ಮೊದಲನೆಯ ಬಹುಮಾನ‘ -೮,೦೦೦

ಎರಡನೆಯ ಬಹುಮಾನ –  ೫,೦೦೦

 ಮೂರನೆಯ ಬಹುಮಾನ – ‘ ೩,೦೦೦

ಎರಡು ಮೆಚ್ಚುಗೆಯ ಬಹುಮಾನಗಳು- ತಲಾ ‘ ೧,೦೦೦

 ಸ್ಪರ್ಧೆಯ ನಿಯಮಗಳು:

  • ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
  • ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೂಪದಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
  • ಪ್ರಬಂಧವು ೧೦೦೦ ಪದಗಳನ್ನು ಮೀರಬಾರದು.
  • ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
  • ಸ್ಪರ್ಧೆಗೆ ಕಳುಹಿಸಿದ ಬರಹವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
  • ಸ್ಪರ್ಧಿಗಳು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರಬಂಧದ ಜೊತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳಿಸಬೇಕು. ಜೊತೆಗೆ ಸ್ಪರ್ಧಿಯ ಭಾವಚಿತ್ರವೂ ಇರಬೇಕು.
  • ಪ್ರಬಂಧವನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: [email protected]
  • ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ಸೀಮಿತ ಪ್ರೇಕ್ಷಕರ ಜೊತೆಗಿರುವ ತೀರ್ಪುಗಾರರ ಮುಂದೆ ತಮ್ಮ ಪ್ರಬಂಧವನ್ನು ಮಂಡಿಸಬೇಕು. PPT ಮೂಲಕ ಮಂಡಿಸುವ ಪ್ರಬಂಧಗಳಿಗೆ ಆದ್ಯತೆಯಿರುತ್ತದೆ. 
  • ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ ಕಾಯ್ದಿರಿಸಿಕೊಂಡಿದೆ.
  • ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು.
  • ವಿಜೇತರಿಗೆ ಮಾತ್ರ ಪತ್ರಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

 

 ಪ್ರಬಂಧಗಳು ನಮಗೆ ತಲಪಲು ಕೊನೆಯ ದಿನಾಂಕ ಸೆಪ್ಟೆಂಬರ್ ೩೦, ೨೦೧೭

ವಿಳಾಸ:

`ಸಂಪಾದಕರು’,

ಉತ್ಥಾನ’ ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭’

ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,

ಕೆಂಪೇಗೌಡನಗರ, ಬೆಂಗಳೂರು – ೫೬೦ ೦೧೯

ದೂರವಾಣಿ: ೦೮೦ – ೨೬೬೦ ೪೬೭೩

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ