ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ರಾಷ್ಟ್ರೋತ್ಥಾನ ಸಾಹಿತ್ಯ ಪುಸ್ತಕಗಳ ಪಟ್ಟಿ Rashtrotthana Sahitya Catalogue

ರಾಷ್ಟ್ರೋತ್ಥಾನ ಸಾಹಿತ್ಯ ಪುಸ್ತಕಗಳ ಪಟ್ಟಿ Rashtrotthana Sahitya Catalogue

ಪ್ರಿಯ ಓದುಗರೆ,

ಅನೇಕ ಶತಮಾನಗಳ ನಮ್ಮ ಸ್ವಾತಂತ್ರ್ಯ ಸಂಘರ್ಷ ಇಂದು ಯಶಸ್ಸಿನ ಒಂದು ಘಟ್ಟ ಮುಟ್ಟಿದೆ. ನಮ್ಮ ರಾಷ್ಟ್ರದ ಸ್ವತಂತ್ರ, ಸಾರ್ವಭೌಮ ಜೀವನವನ್ನು ಕಟ್ಟುವ ಸುವರ್ಣ ಸಂಧಿ ನಮಗಿಂದು ಒದಗಿಬಂದಿದೆ.
ಇದೊಂದು ಸುವರ್ಣಸಂಧಿ ಆಗಿರುವಂತೆಯೇ ಒಂದು ಗಂಭೀರ ಸವಾಲೂ ಆಗಿದೆ. ನಮ್ಮ ರಾಷ್ಟ್ರ ಜೀವನವನ್ನು ಯಾವ ಆದರ್ಶದ ಬೆಳಕಿನಲ್ಲಿ, ಯಾವ ಸಿದ್ಧಾಂತದ ಅಡಿಗಲ್ಲ ಮೇಲೆ ಕಟ್ಟಬೇಕು ಎಂಬ ಸವಾಲಿಗೆ ನಾವಿಂದು ಉತ್ತರ ಕೊಡಬೇಕಾಗಿದೆ.

ಆದರೆ ನಮ್ಮ ನಾಡಿನ ದೌರ್ಭಾಗ್ಯದಿಂದ ಇವತ್ತಿಗೂ ಈ ಮೂಲ ಪ್ರಶ್ನೆಯ ಬಗ್ಗೆ ನಮ್ಮ ಸ್ವತಂತ್ರ ಪ್ರತಿಭೆಯಿಂದ ವಿಚಾರಮಂಥನ ನಡೆಯುತ್ತಲೇ ಇಲ್ಲ. ಇಂಗ್ಲೆಂಡ್ ಅಮೆರಿಕಾ ಗಳಂತೆಯೋ ಇಲ್ಲವೆ ರಷ್ಯಾ ಚೀನಾಗಳಂತೆಯೋ ನಮ್ಮ ಜೀವನವನ್ನು ಎರಕ ಹೊಯ್ಯುವ ಆತುರ ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತಿದೆ. ನಮ್ಮ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಪರದೇಶ, ಪರಸಂಸ್ಕೃತಿಗಳ ಅಗ್ಗದ ನಕಲಾಗಿ ಮಾಡುವ ಪ್ರಯತ್ನವೇ ನಡೆದಿದೆ. ನಮ್ಮ ರಾಷ್ಟ್ರೀಯ ಪ್ರತಿಭೆ, ಪರಂಪರೆ, ತತ್ವಜ್ಞಾನ, ಜೀವನಾದರ್ಶ, ಇವೆಲ್ಲಕ್ಕೂ ಇಂದು ಗ್ರಹಣ ಹಿಡಿದಂತೆ ಆಗಿದೆ.

ಹೀಗಾಗಿ ಇಂದು ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವತಂತ್ರ ರಾಷ್ಟ್ರಜೀವನದ ಅಮೃತಸ್ಪರ್ಶ ಅನುಭವಕ್ಕೆ ಬರುತ್ತಿಲ್ಲ. ನಮ್ಮ ಜನಸಾಮಾನ್ಯರ ಅಂತಃಕರಣವನ್ನು ತಟ್ಟಿ ಎಬ್ಬಿಸುವ ರಾಷ್ಟ್ರೀಯ ಆದರ್ಶಗಳಿಲ್ಲದೆ ಹೋದಲ್ಲಿ ರಾ?ದ ಪುನರುತ್ಥಾನಕ್ಕಾಗಿ ಅವರಲ್ಲಿ ಸ್ವಯಂಪ್ರೇರಣೆ, ಕಾರ್ಯೋತ್ಸಾಹ, ತ್ಯಾಗ, ಪೌರುಷಗಳು ಬೆಳೆದು ನಿಲ್ಲುವುದಾದರೂ ಹೇಗೆ ? ಆದ್ದರಿಂದಲೇ ಇಂದು ರಾಷ್ಟ್ರದ ಆಗು ಹೋಗುಗಳ ಬಗೆಗೆ ಸರ್ವತ್ರ ಉದಾಸೀನತೆ, ಕ್ರಿಯಾಶೂನ್ಯತೆ, ವಿಫಲತೆಗಳೇ ತಾಂಡವವಾಡುತ್ತಿವೆ. ಎಂದ ಮೇಲೆ ಜನರೆದೆಗೆ ಸ್ಫೂರ್ತಿ ಉತ್ಸಾಹಗಳನ್ನೆರೆಯಬಲ್ಲ ಭಾರತೀಯತೆಯ ಆದರ್ಶವನ್ನು ಎತ್ತಿ ಹಿಡಿಯುವುದು ಇಂದು ತೀರ ಅನಿವಾರ್ಯ ಹಾಗೂ ತುರ್ತು ಕರ್ತವ್ಯವಾಗಿದೆ. ಭಾರತವು ‘ತನ್ನತನ’ದಿಂದ ಎದ್ದು ನಿಂತಾಗಲೇ ಅದು ಜಗತ್ತಿನಲ್ಲಿ ತಲೆಯೆತ್ತಿ ಬಾಳುವಂತಾದೀತು ಎಂಬುದು ಸ್ಪಷ್ಟವಿದೆ.

ನಮ್ಮ ಭಾರತೀಯತೆಯ- ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವಜ್ಞಾನ, ಜೀವನಾದರ್ಶಗಳ – ಹಿರಿಮೆ ಈ ಲೋಕದಲ್ಲಿ ಸಾಟಿಯಿಲ್ಲದ್ದು. ನೂರಾರು ಶತಮಾನಗಳವರೆಗೆ ನಮ್ಮ ರಾಷ್ಟ್ರಜೀವನವನ್ನು ವೈಭವಶಾಲಿಯಾಗಿ ಮಾಡಿದ್ದಷ್ಟೇ ಅಲ್ಲ. ಜಗತ್ತಿಗೆಲ್ಲ ದಿವ್ಯಜೀವನದ ಸುಧೆ ಕುಡಿಸಿದಂತಹ ಅದ್ಭುತ ಚೈತನ್ಯ ಅದರಲ್ಲಿದೆ. ಇಂದಿಗೂ ಸಹ ಆಧುನಿಕ ಜೀವನದ ಅನೇಕ ವಿಕಟ ಸಮಸ್ಯೆ – ಸವಾಲುಗಳಿಗೆ ಸಮರ್ಪಕವಾಗಿ ಸಮಾಧಾನ ನೀಡಬಲ್ಲಂತಹ ಸಮಗ್ರ ಜೀವನದೃಷ್ಟಿ, ವಿಚಾರಸಂಪತ್ತು ಅದರಲ್ಲಿದೆ.

ರಾಷ್ಟ್ರೋತ್ಥಾನದ ಅಡಿಗಲ್ಲಾದ ನಮ್ಮ ಭಾರತೀಯ ಜೀವನದ ಜ್ಞಾನ – ನಿಷ್ಟೇಗಳನ್ನು ಜನಮನದಲ್ಲಿ ಬೇರೂರಿಸುವ ಈ ಚರಿತ್ರಾರ್ಹ ಕಾರ್ಯಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ತು ಜನ್ಮತಾಳಿದೆ.

ಭಾರತೀಯ ಆದರ್ಶವನ್ನು ಎತ್ತಿ ಹಿಡಿಯುವ, ಜನರೆದೆಗೆ ಸ್ಫೂರ್ತಿ – ಉತ್ಸಾಹಗಳನ್ನೆರೆಯಬಲ್ಲ ಪುಸ್ತಕ ಪ್ರಕಟಣ ಸಂಸ್ಥೆಯಾಗಿ ರಾಷ್ಟ್ರೋತ್ಥಾನ ಸಾಹಿತ್ಯವು ೧೯೬೫ರಲ್ಲಿ ಪ್ರಾರಂಭವಾಯಿತು. ನೂರಾರು ಶತಮಾನಗಳಿಂದ ನಮ್ಮ ರಾಷ್ಟ್ರಜೀವನವನ್ನು ವೈಭವಶಾಲಿಯಾಗಿ ಮಾಡಿದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ತ್ವ ಜ್ಞಾನ, ಜೀವನಾದರ್ಶಗಳ ಹಿರಿಮೆಯನ್ನು ಸಾಹಿತ್ಯ ಪ್ರಕಟಣೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಸಾಮಾಜಿಕ ಚಿಂತನ ಪ್ರಧಾನವಾದ ಗ್ರಂಥಗಳ ಕೊರತೆ ಇದೆ. ಈ ಕೊರತೆಯನ್ನು ತುಂಬಲು ಕನ್ನಡ ಕೃತಿಗಳ ಜೊತೆಗೆ ಇತರ ಭಾಷೆಗಳಿಂದಲೂ ಉತ್ತಮ ರಾಷ್ಟ್ರೀಯ ಸಾಹಿತ್ಯವನ್ನು ಕನ್ನಡಕ್ಕೆ ತರುವ ಯೋಜನೆ ರಾಷ್ಟ್ರೋತ್ಥಾನ ಸಾಹಿತ್ಯದ್ದಾಗಿದೆ.

ನಿಜವಾದ ರಾಷ್ಟ್ರೀಯ ಇತಿಹಾಸದ ಗ್ರಂಥಗಳಿಗಂತೂ ಕನ್ನಡದಲ್ಲೇ ಏಕೆ, ಇಡೀ ದೇಶದಲ್ಲೇ ತೀವ್ರ ಕೊರತೆ ಇದೆ. ಇದುವರೆಗೆ ಪಾಶ್ಚಾತ್ಯ ವಿದ್ವಾಂಸರ ಗ್ರಂಥಗಳು, ಅವರ ದೃಷ್ಟಿ – ಧೋರಣೆಗಳ ಜಾಡಿನಲ್ಲೇ ನಮ್ಮ ಇತಿಹಾಸದ ಅಧ್ಯಯನ ಸಾಗಿದೆ. ಇನ್ನಾದರೂ ನಮ್ಮ ರಾಷ್ಟ್ರೀಯ ದೃಷ್ಟಿಯಿಂದ ಚರಿತ್ರೆಯನ್ನು ಬರೆಯುವ, ಓದುವ ಅಭ್ಯಾಸವಾಗುವಂತೆ ನಮ್ಮ ರಾಷ್ಟ್ರೀಯ ಇತಿಹಾಸ ಗ್ರಂಥಗಳಿಗೆ ‘ರಾಷ್ಟ್ರೋತ್ಥಾನ ಸಾಹಿತ್ಯ’ದಲ್ಲಿ ಅಗ್ರಸ್ಥಾನ ಕೊಡಲಾಗಿದೆ.

ವೈಚಾರಿಕ ಲೇಖನ, ಪ್ರಬಂಧ, ಭಾಷಣ, ವ್ಯಕ್ತಿಚಿತ್ರ – ಜೀವನ ಕಥನ, ಸಾಂಸ್ಕೃತಿಕ – ಸಾಮಾಜಿಕ, ಇತಿಹಾಸ – ಸಂಶೋಧನೆ, ಯೋಗ-ಆರೋಗ್ಯ, ವ್ಯಕ್ತಿತ್ವ ವಿಕಾಸ ಇತ್ಯಾದಿ ಸಮಾಜದಲ್ಲಿ ಸತ್ಸಂಸ್ಕಾರಗಳನ್ನು ಮೂಡಿಸುವ ಸದಭಿರುಚಿಯ ಸಾಹಿತ್ಯದ ಪ್ರಕಟನೆ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನದಿಂದಾಗಿದೆ.

‘ಅಜೇಯ’, ‘ಅದಮ್ಯ’, ‘ತೋರ್ಬೆರಳು’, ‘ಶತಮಾನದ ತಿರುವಿನಲ್ಲಿ ಭಾರತ’ – ಈ ಕೃತಿಗಳು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತಗೊಂಡಿವೆ.

ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ – ಕನ್ನಡ ೬೦೦ ಮತ್ತು ಇಂಗ್ಲೀಷ್ ೩೦೦ – ಮಹಾಪುರುಷರ ಕಿರುಪರಿಚಯ ನೀಡಿದ ಭಾರತ ಭಾರತಿ ಪುಸ್ತಕ ಸಂಪದ ಜನಮನ್ನಣೆ ಪಡೆಯಿತು. ಒಂದು ಕೋಟಿಗೂ ಹೆಚ್ಚು ಪುಸ್ತಕಗಳು ಜನರ ಕೈ ಸೇರಿದವು. ಭಾರತ ಭಾರತಿ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿದೆ.

(ಭಾರತ-ಭಾರತಿ ಪುಸ್ತಕಗಳ ಪಟ್ಟಿಗಾಗಿ http://utthana.in/?p=5576 )

ಶ್ರವಣ ಮಾಧ್ಯಮದ ಮೂಲಕ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸುವುದಕ್ಕಾಗಿ ಗೀತಭಾರತಿ ಇಲ್ಲಿಯವರೆಗೆ ೩೬ ಧ್ವನಿಸುರುಳಿಗಳನ್ನು ಮತ್ತು ೬ ಕಾಂಪಾಕ್ಟ್ ಡಿಸ್ಕ್ (CD) ಹೊರ ತಂದಿದೆ. ಇದರಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿನ ದೇಶಭಕ್ತಿ ಗೀತೆಗಳು, ಭಜನೆ, ಉಪನ್ಯಾಸದ ಧ್ವನಿಸುರುಳಿಗಳೂ ಸೇರಿವೆ. ಭಾರತದರ್ಶನ ಉಪನ್ಯಾಸ ಮಾಲಿಕೆಯ ಮೂರು ಧ್ವನಿಸುರುಳಿಗಳು ಕರ್ನಾಟಕದ ಮೂಲೆ ಮೂಲೆಗೂ ತಲುಪಿ ಜನಮನದ ಮೆಚ್ಚಿಗೆ ಗಳಿಸಿವೆ.

ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನದ ಈವರೆಗಿನ ಪ್ರಕಟಣೆಗಳಲ್ಲಿ ಲಭ್ಯವಿರುವ ಕೃತಿಗಳ, ಗೀತಭಾರತಿ ಕ್ಯಾಸೆಟ್‌ಗಳ ಹಾಗೂ ಪ್ರಧಾನ ವಿತರಣೆಯ ಸಾಹಿತ್ಯಗಳ ಪಟ್ಟಿ ಇದಾಗಿದೆ.
ಸಹೃದಯಿ ಓದುಗರಿಂದ ನಿರಂತರವಾಗಿ ಸಹಕಾರ – ಪ್ರೋತ್ಸಾಹ ಒದಗಿಬರಲಿ ಎಂಬುದು ನಮ್ಮ ಹೃದಯದಾಳದ ಹಾರೈಕೆ.

ಈ ಕೆಳಗಿನ ಪುಸ್ತಕಗಳನ್ನು ಆನ್ ಲೈನ್ ಮೂಲಕ  http://www.sahityabooks.com ನಲ್ಲಿ ಖರೀದಿಸಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ

ಪ್ರ. ಸಂಖ್ಯೆ

ಶೀರ್ಷಿಕೆ ಲೇಖಕರು

ಬೆಲೆ (ರೂ.)

ರಣವೀಳ್ಯ (ವೀರ ಸೈನಿಕರ ಶೌರ್ಯ ಕಥೆಗಳು) ಸಂಗ್ರಹ

(ಸೈನಿಕರ ಬಗ್ಗೆ)

೬೦-೦೦
ಯವನ ವಿಜೇತ ಚಂದ್ರಗುಪ್ತ ಶಿವರಾಮು ೩೫-೦೦
ಕನ್ನಡದ ಕಡುಗಲಿಗಳು ಶಿವರಾಮು ೧೨೦-೦೦
ಯುಗಾವತಾರ (ಶಿವಾಜಿ ಮಹಾರಾಜರ ಜೀವನ) ಹೊ.ವೈ. ಶೇಷಾದ್ರಿ ೧೫೦-೦೦
ವನವಾಸಿ ಶಿವಶಂಕರ ೫೫-೦೦
ಒಂದು ಕಥೆ ಒಂದು ವ್ಯಥೆ (‘ವಂದೇ ಮಾತರಂ’ ಕವನ ಕುರಿತು) ಶಿವರಾಮು ೧೦೦-೦೦
ವಿಚಾರ ರಶ್ಮಿ (ಪಂ. ದೀನದಯಾಳ್ ಉಪಾಧ್ಯಾಯರ ವಿಚಾರಗಳು) ಪಂ. ದೀನದಯಾಳ್‌ಉಪಾಧ್ಯಾಯ ೬೦-೦೦
ಸ್ವಾತಂತ್ರ್ಯ ಯೋಧ ಶ್ರೀ ಅರವಿಂದ ಕೊ. ಚನ್ನಬಸಪ್ಪ ೮೫-೦೦
೧೧ ಅಕ್ಕನಿವೇದಿತಾ ಶಿವರಾಮು ೫೦-೦೦
೧೩ ನಂದಾದೀಪವಿದು  (ಪಂ. ದೀನದಯಾಳ ಉಪಾಧ್ಯಾಯರ ಜೀವನ) ಭಾ.ವೆಂ. ದೇಶಪಾಂಡೆ ೭೫-೦೦
೧೬ ಕಡಲ ತಡಿಯಿಂದ ಹೈಮಾಚಲದಡಿಗೆ ಕೊ. ಚ-ನ್ನಬಸಪ್ಪ ೧೧೫-೦೦
೨೦ ಗಡಿಯಾಚೆಯ ಗುಡಿಗಳು ಎನ್.ಪಿ. ಶಂಕರನಾರಾಯಣರಾವ್ ೭೦-೦೦
೨೫ ಮಹಾ ಸನ್ಯಾಸಿ ಪದ್ಮಾ ಶೈಣೈ ೫೫-೦೦
೨೭ ನೋಡುವ ಬೀಡುಗಳು ಸಂಗ್ರಹ ೬೫-೦೦
೨೯ ಶ್ರೀರಾಮನ ಕಥೆಯಲ್ಲಿ ಆದರ್ಶಗಳು ಸು.ನಾ. ಮಲ್ಯ ೬೫-೦೦
೩೧ ಹುಲಿ ಹಾರಿತು ಕೆ.ಬಿ. ಅಭ್ಯಂಕರ್ ೬೦-೦೦
೩೨ ಶರೀರ ಶಿಲ್ಪ (ಸುಲಭ ವ್ಯಾಯಾಮಗಳ ಪರಿಚಯ) ಅಜಿತ್ ಕುಮಾರ್ ೯೦-೦೦
೩೩ ಅಜೇಯ ಬಾಬು ಕೃ?ಮೂರ್ತಿ ೩೨೦-೦೦
೩೪ ಜಗಜ್ಜನನಿ ಭಾರತ ಕೊ. ಚನ್ನಬಸಪ್ಪ ೫೫-೦೦
೩೫ ಈಸೂರಿನ ಚಿರಂಜೀವಿಗಳು ಆರ್. ಬಸವರಾಜು ೯೦-೦೦
೩೭ ತಿಳಿವು ಗೆಲವು (ಕಿಶೋರರಿಗಾಗಿ ವ್ಯಕ್ತಿತ್ವ ವಿಕಾಸ ಬರಹಗಳು) ಚಿರಂಜೀವಿ ೭೫-೦೦
೩೮ ರಾಮಾಯಣ ಸುಧೆ ನಾರಾಯಣರಾವ್ ತಾಳಿಕೋಟೆ ೬೦-೦೦
೪೦ ಗೆಲುವಿನ ಗುಟ್ಟು (ಕಿಶೋರರಿಗಾಗಿ ವ್ಯಕ್ತಿತ್ವ ವಿಕಾಸ ಬರಹಗಳು) ಚಿರಂಜೀವಿ ೫೦-೦೦
೪೧ ನಾರಾಯಣ ಗುರು ಬಿ. ನರಸಿಂಗರಾವ್ ೫೫-೦೦
೪೨ ಏಕಾತ್ಮ ಮಾನವತೆ ಎನ್.ಪಿ. ಶಂಕರನಾರಾಯಣರಾವ್ ೭೦-೦೦
೪೩ ನಾಳಿನ ನಾಡಶಿಲ್ಪಿಗೆ ಎಲ್.ಎಸ್. ಶೇ?ಗಿರಿರಾವ್ ೬೦-೦೦
೪೭ ಧರ್ಮವೀರ ಗುರುಗೋವಿಂದ ಸಿಂಹ ಚಿ. ವಿಶ್ವನಾಥರಾವ್ ೬೦-೦೦
೫೦ ಯೋಗಪ್ರವೇಶ  (ಅಭ್ಯಾಸಿಗಳಿಗೆ, ಶಿಕ್ಷಕರಿಗೆ ಕೈಪಿಡಿ) ಅಜಿತ್‌ಕುಮಾರ್ ೧೭೦-೦೦
೫೧ ಅದಮ್ಯ ಬಾಬು ಕೃ?ಮೂರ್ತಿ ೧೩೫-೦೦
೫೨ ಶ್ರೀಮಾತೆ ಮತ್ತು ಭಾರತ ಎಂ. ಮಾದವ ಪೈ ೪೦-೦೦
೫೬ ರಾಷ್ಟ್ರ ಧರ್ಮನಿಷ್ಠ ಹರ್ಡೇಕರ ಮಂಜಪ್ಪ ಡಾ|| ಶಿವಾನಂದ ಗುಬ್ಬಣನವರ ೬೦-೦೦
೫೭ ಜೀವನ ಮೌಲ್ಯಗಳು (ಭಾಗ-೧)  (ವ್ಯಕ್ತಿತ್ವ ವಿಕಾಸ ಬರಹಗಳು) ಶಕುಂತಲಾ ಎನ್. ರಾವ್ ೫೫-೦೦
೫೮ ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ಹೋರಾಟ ಎಂ.ಪಿ. ಶಂಕರನಾರಾಯಣ್ ೬೦-೦೦
೫೯ ಜೀವನ ಮೌಲ್ಯಗಳು (ಭಾಗ-೨) ರಸಿಕ ಪುತ್ತಿಗೆ ೫೦-೦೦
೬೦ ಭಾರತ ಜಾಗೃತಿ ಎಸ್.ಆರ್. ರಾಮಸ್ವಾಮಿ ೪೫-೦೦
೬೧ ಜೀವನ ಮೌಲ್ಯಗಳು (ಭಾಗ-೩) ರಸಿಕ ಪುತ್ತಿಗೆ ೬೦-೦೦
೬೨ ಶತಮಾನದ ತಿರುವಿನಲ್ಲಿ ಭಾರತ  (ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ) ಎಸ್.ಆರ್. ರಾಮಸ್ವಾಮಿ ೧೧೫-೦೦
೬೩ ಸಮಾಜ ಚಿಕಿತ್ಸಕ ಅಂಬೇಡ್ಕರ್ ಚಂದ್ರಶೇಖರ ಭಂಡಾರಿ ೫೫-೦೦
೬೪ ಬಿಳಲುಗಳು (ವ್ಯಕ್ತಿತ್ವ ವಿಕಾಸ ಪ್ರಬಂಧಗಳು) ಶಕುಂತಲ ಎನ್. ರಾವ್ ೫೫-೦೦
೬೫ ಅವಸಾನದತ್ತ ಕಮ್ಯೂನಿಸಂ ಪಿ. ನಾರಾಯಣನ್ ೨೨-೦೦
೬೬ ಸೂಕ್ತಿ -ವ್ಯಾಪ್ತಿ (ಭಾಗ-೧)  (ಪ್ರಾಚೀನ ಶ್ಲೋಕಗಳು, ಆಧುನಿಕ ಅನ್ವಯ) ಎನ್. ರಂಗನಾಥ ಶರ್ಮಾ ೭೫-೦೦
೬೯ ಸಾರ್ಥಕ ಜೀವನದ ಹಾಸುಹೊಕ್ಕು   (ವ್ಯಕ್ತಿತ್ವ ವಿಕಾಸ ಪ್ರಬಂಧಗಳು) ಶುಭಾ ದೋಟಿಹಾಳ್ ೬೦-೦೦
೭೦ ಸಫಲ ಜೀವನ ಸೋಪಾನ (ವ್ಯಕ್ತಿತ್ವ ವಿಕಾಸ ಪ್ರಬಂಧಗಳು) ಮಾ. ಭ. ಪೆರ್ಲ ೬೦-೦೦
೭೪ ವಿಕಸಿತ ಜೀವನ (ಪ್ರಬಂಧಗಳು) ಶುಭಾ ದೋಟಿಹಾಳ್ ೫೦-೦೦
೭೫ ನವನಿರ್ಮಾಣದ ಒಳಪದರಗಳು (ಹೊ.ವೆ. ಶೇಷಾದ್ರಿಯವರ ವೈಚಾರಿಕ ಲೇಖನಗಳು) ಹೊ.ವೈ. ಶೇಷಾದ್ರಿ ೭೫-೦೦
೭೬ ಭಾರತೀಯ ಚಿತ್ತ, ಮಾನಸಿಕತೆ, ಕಾಲ ಎಸ್.ಆರ್. ರಾಮಸ್ವಾಮಿ ೪೫-೦೦
೭೭ ಕೋಲ್ಮಿಂಚು  (ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನ) ಎಸ್.ಆರ್. ರಾಮಸ್ವಾಮಿ ೧೦೫-೦೦
೭೮ ಅಸತ್ಯದೊಡನೆ ಒಂದು ಪ್ರಯೋಗ   (ಬ್ರಿಟಿಷ್  ಹಾಗೂ ಮುಸ್ಲಿಂ ಇತಿಹಾಸಕಾರರು ಭಾರತದ ಇತಿಹಾಸಕ್ಕೆ ಬಗೆದ ದ್ರೋಹ) ರ.ವಿ. ಜಹಗೀರದಾರ ೫೦-೦೦
೭೯ ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು (ಸ್ವಾತಂತ್ರ್ಯ ಹೋರಾಟದ ಚಿತ್ರಣ, ವಿಶ್ಲೇಷಣೆ) ಎಸ್.ಆರ್. ರಾಮಸ್ವಾಮಿ ೧೬೫-೦೦
೮೦ ಸಾಮಯಿಕ  (ವೈಚಾರಿಕ ಲೇಖನಗಳು) ಗೋಪಾಲರಾವ್ ಹೇಜೀಬ್ ೯೦-೦೦
೮೨ ಸೂಕ್ತಿ -ವ್ಯಾಪ್ತಿ  (ಭಾಗ -೨) ಎನ್. ರಂಗನಾಥಶರ್ಮಾ ೭೦-೦೦
೮೪ ಕಾರ್ಗಿಲ್ ಕಂಪನ ಎಸ್.ಆರ್. ರಾಮಸ್ವಾಮಿ ೭೦-೦೦
೮೫ ಮನಸ್ಸೇ, ರಿಲ್ಯಾಕ್ಸ್ ಪ್ಲೀಸ್  (ನೆಮ್ಮದಿಯ ಬದುಕಿಗೆ ಹಲವು ಸೂತ್ರಗಳು) ಚಿರಂಜೀವಿ ೧೨೦-೦೦
೮೬ ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ ನವರತ್ನ ಎಸ್. ರಾಜಾರಾಮ್ ೧೦೦-೦೦
೮೮ ಭಾರತೀಯ ಗಣಿತಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ ವೇಣುಗೋಪಾಲ್ ಹೇರೂರ ೭೦-೦೦
೮೯ ಮನಸ್ಸು ಅರಳಲಿ  (ಸ್ವಾಮಿ ದಯಾನಂದ ಸರಸ್ವತಿ ಅವರ ಪ್ರೇರಣಾದಾಯಿ ಉಪನ್ಯಾಸಗಳ ಸಂಕಲನ) ಚಿರಂಜೀವಿ ೧೪೫-೦೦
೯೦ ಭಾರತ ದರ್ಶನ ಬಿ.ವಿ. ವಿದ್ಯಾನಂದ ಶೆಣೈ ೧೫೫-೦೦
೯೧ ಜಾಗೃತಾತ್ಮರಿಗಾಗಿ ಹೊ.ವೆ. ಶೇಷಾದ್ರಿ ೩೦-೦೦
೯೨ ಸಾರ್ಥಕ ಜೀವನ ಮಾ.ಭ. ಪೆರ್ಲ ೫೫-೦೦
೯೩ ಸೂಕ್ತಿ -ವ್ಯಾಪ್ತಿ (ಭಾಗ-೩) ಎನ್. ರಂಗನಾಥಶರ್ಮ ೪೫-೦೦
೯೪ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್ ಚಕ್ರವರ್ತಿ ಸೂಲಿಬೆಲೆ ೧೦೦-೦೦
೯೭ ಮತ್ತೆ ಹೊತ್ತಿತು ಹೀಬ್ರೂ ಹಣತೆ ಎಚ್.ಆರ್. ವಿಶ್ವಾಸ್ ೧೦೫-೦೦
೯೮ ಜೀವನ ಮೌಲ್ಯಗಳು (ಭಾಗ-೪) ಶುಭಾ ದೋಟಿಹಾಳ್ ೭೦-೦೦
೯೯ ಆನಂದಮಠ ಎಸ್.ಆರ್. ರಾಮಸ್ವಾಮಿ ೧೦೦-೦೦
೧೦೦ ಸ್ವಾತಂತ್ರ್ಯ ಮಹಾಸಂಗ್ರಾಮ ೧೮೫೭ – ಒಂದು ವಾಕ್ಚಿತ್ರ ಚಕ್ರವರ್ತಿ ಸೂಲಿಬೆಲೆ ೧೭೫-೦೦
೧೦೧ ನಾ ಹೇಗೆ ಹಿಂದುವಾದೆ ಮಂಗಳಾಭಟ್ ೧೩೫-೦೦
೧೦೨ ಮೋಪ್ಲಾಕಾಂಡ ಗಿರಿಜಾ ಶಾಸ್ತ್ರೀ ೧೦೦-೦೦
೧೦೩ ಪ್ರಾಚೀನ ಭಾರತದಲ್ಲಿ ರಸಾಯನ ವಿಜ್ಞಾನ ಕೈವಾರ ಗೋಪಿನಾಥ್ ೧೦೦-೦೦
೧೦೪ ನಾಗರಿಕತೆಗಳ ಸಂಘರ್ಷ ಎಸ್.ಆರ್. ರಾಮಸ್ವಾಮಿ ೭೫-೦೦
೧೦೫ ಸೂಕ್ತಿ-ಸಪ್ತತಿ (ಸುಭಾಷಿತ ಸಂಗ್ರಹ) ಎಸ್.ಆರ್. ರಾಮಸ್ವಾಮಿ ೭೫-೦೦
೧೦೬ ಮಂಥನ (ಪ್ರಚಲಿತ ವೈಚಾರಿಕ ಲೇಖನಗಳು) ಗೋಪಾಲರಾವ್ ಹೇಜೀಬ್ ೩೫೦-೦೦
೧೦೭ ಸಾರ್ಥಕ ಜವನದ ನಿಚ್ಚಣಿಗೆ (ವ್ಯಕ್ತಿತ್ವ ವಿಕಾಸ ಪ್ರಬಂಧಗಳು) ಡಾ|| ಕೆ. ಜಗದೀಶ್ ಪೈ ೧೪೦-೦೦
೧೦೮ ಕೆಲವು ಇತಿಹಾಸ ಪರ್ವಗಳು ಎಸ್.ಆರ್. ರಾಮಸ್ವಾಮಿ ೧೦೦-೦೦
೧೦೯ ಸಂವಾದ (ವ್ಯಕ್ತಿತ್ವ ವಿಕಾಸ ಪ್ರಬಂಧಗಳು) ಹೇಮಂತ್‌ರಾಜ್ ೮೫-೦೦
೧೧೦ ಉತ್ಕರ್ಷ ಪಥ ಡಾ|| ಕೆ. ಜಗದೀಶ್ ಪೈ ೧೫೦-೦೦
೧೧೧ ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಂದ್ರಶೇಖರ್ ಭಂಡಾರಿ ೪೦೦-೦೦
೧೧೨ ಧ್ರುವಜಲ ಎಸ್.ಆರ್. ರಾಮಸ್ವಾಮಿ ೧೦೦-೦೦
೧೧೩ ನೌಕಾ ಬಂಡಾಯ ೧೯೪೬ -ಸಾಗರದಲ್ಲಿ ಅಗ್ನಿಶಿಖೆ ಬಿ.ಪಿ. ಪ್ರೇಮ್‌ಕುಮಾರ್ ೨೦೦-೦೦
೧೧೪ ಕರಿನೀರ ರೌರವ ಗಿರಿಜಾ ಶಾಸ್ತ್ರೀ ೯೦-೦೦
೧೧೫ ನಮಗೆ ನಾವೇ ಪರಕೀಯರು ರಮಾನಂದ ಐನಕೈ ೮೦-೦೦
೧೧೬ ಎಳೆಯರಿಗಾಗಿ ಭಾರತೀಯ ಸ್ವಾತಂತ್ರ್ಯದ ಇತಿಹಾಸ ಪ್ರಹ್ಲಾದ್ ವೆಂ. ಕುಳಗೇರಿ ೧೨೫-೦೦
೧೧೭ ಕ್ರೈಸ್ತ ಕ್ರೌರ್ಯ ಪರಂಪರೆ ಟಿ.ಎ.ಪಿ. ಶೆಣೈ ೭೫-೦೦
೧೧೮ ಮಹಾನ್ ಇತಿಹಾಸಕಾರರು ಮಂಜುನಾಥ ಅಜ್ಜಂಪುರ ೪೦೦-೦೦
೧೧೯ ಕವಳಿಗೆ ಎಸ್.ಆರ್. ರಾಮಸ್ವಾಮಿ ೨೦೦-೦೦
೧೨೦ ನಿಗೂಢ ಭಾರತದಲ್ಲೊಂದು ಹುಡುಕಾಟ ಗಿರಿಜಾಶಾಸ್ತ್ರೀ ೨೫೦-೦೦
೧೨೧ ಸಾನೇ ಗುರೂಜಿ ಹೇಳಿದ ಕಥೆಗಳು ಶಕುಂತಲಾ ಎನ್. ರಾವ್ ೧೦೦-೦೦
೧೨೨ ಗದರ್ ಚಳವಳಿ ಚಕ್ರವರ್ತಿ ಸೂಲಿಬೆಲೆ ೧೨೦-೦೦
೧೨೩ ಕೋಮಗಾತ ಮರು ನೌಕಾಘಾತ ಬಿ.ಪಿ. ಪ್ರೇಮ್‌ಕುಮಾರ್ ೨೫೦-೦೦
೧೨೪ ಸೂಕ್ತಿ ಸಂಚಯ ಎಸ್.ಆರ್. ರಾಮಸ್ವಾಮಿ ೮೦-೦೦
೧೨೫ ಭಾರತೀಯ ಕ್ಷಾತ್ರಪರಂಪರೆ ಶತವಧಾನಿ ಡಾ|| ಆರ್. ಗಣೇಶ್ ೨೫೦-೦೦
೧೨೬ ಪ್ರಾಚೀನ ಭಾರತದ ಮಹರ್ಷಿಗಳು ಡಾ|| ಎಸ್. ಹೇಮಲತಾ ೧೦೦-೦೦
೧೨೭ ಮಹಾನ್ ಇತಿಹಾಸಕಾರರು (ಭಾಗ-೨) ಮಂಜುನಾಥ ಅಜ್ಜಂಪುರ ೧೨೦-೦೦
೧೨೮ ವಿವೇಕಾನಂದ ಸಂದೇಶ-ಕೌಮುದಿ ಡಾ|| ಎಸ್.ಆರ್. ರಾಮಸ್ವಾಮಿ ೧೦೦-೦೦
೧೨೯ ನವೋತ್ಥಾನದ ಅಧ್ವರ್ಯುಗಳು ಡಾ|| ಎಸ್.ಆರ್. ರಾಮಸ್ವಾಮಿ ೨೦೦-೦೦
೧೩೦ ಭಾರತದಲ್ಲೊಂದು ಸುಂಕದಬೇಲಿ ಹೆಚ್.ಎಸ್. ನರೇಂದ್ರಕುಮಾರ್ ೧೨೫-೦೦
೧೩೧ ಪ್ರಾಚೀನ ಭಾರತದ ಮಹರ್ಷಿಗಳು-೨ ಡಾ|| ಎಸ್. ಹೇಮಲತಾ ೧೦೦-೦೦
೧೩೨ ಸಂನ್ಯಾಸಿ ಆಂದೋಲನ ಬಿ.ಪಿ. ಪ್ರೇಮಕುಮಾರ್ ೨೫೦-೦೦
೧೩೩ ವಿಕ್ರಾಂತ ಭಾರತ ತಿ.ತಾ. ಶರ್ಮ ೨೭೫-೦೦
೧೩೪ ರಾಷ್ಟ್ರಚಿಂತನ ತರಂಗಗಳು ನವರತ್ನ ಎಸ್. ರಾಜಾರಾಂ ೨೦೦-೦೦

ಸಾಹಿತ್ಯ ಸಿಂಧು ಪ್ರಕಾಶನ

ಸಂಖ್ಯೆ ಶೀರ್ಷಿಕೆ ಲೇಖಕರು ಬೆಲೆರೂ.ಪೈ.
ಏಳಿ ! ಎದ್ದೇಳಿ !!   (ಸ್ವಾಮಿ ವಿವೇಕಾನಂದರ ಸಾಹಿತ್ಯದಿಂದ ಆಯ್ದ ವ್ಯಕ್ತಿ ನಿರ್ಮಾಣ ಸೂತ್ರಗಳು) ಏಕನಾಥ ರಾನಡೆ ೧೦೦-೦೦
೨೪ ಸ್ವದೇಶಿ ಜಾಗೃತಿ ಎಸ್.ಆರ್. ರಾಮಸ್ವಾಮಿ ೩೫-೦೦
೨೫ ಆರ್ಥಿಕತೆಯ ಎರಡು ಧ್ರುವ ಎಸ್.ಆರ್. ರಾಮಸ್ವಾಮಿ ೬೦-೦೦
೨೬ ಪ್ರಾಣಾಯಾಮ ದೀಪಿಕಾ ಕೆ.ಎಸ್. ನಾಗರಾಜ ೧೨೦-೦೦
೨೭ ದೇಶ ವಿಭಜನೆಯ ದುರಂತ ಕಥೆ ಕಾ.ಶ್ರೀ. ನಾಗರಾಜ್ ೧೫೦-೦೦
೪೨ ಆಯುರ್ವೇದೀಯ ಆಹಾರ ಕ್ರಮ ಡಾ|| ಎನ್. ಅನಂತರಾಮನ್ ೪೦-೦೦
೫೫ ಉಬ್ಬಸ -ಆಯುರ್ವೇದದ ಪರಿಹಾರಗಳು ಡಾ|| ಎಚ್.ಎಸ್. ವೆಂಕಟೇಶ್ ೩೫-೦೦
೫೯ ಭಾರತೀಯ ಸಂಸ್ಕೃತಿ (ಸಾನೆ ಗುರೂಜಿ ವಿಚಾರಧಾರೆ) ಭಾಸ್ಕರ ಗೋವಿಂದ ಗೋಕಲೆ ೧೨೫-೦೦
೬೦ ಸರಳ ರಾಮಾಯಣ ಜಿ.ಎ. ನರಸಿಂಹಮೂರ್ತಿ ೩೦-೦೦
೬೧ ಆಯುರ್ವೇದ ಚಿಕಿತ್ಸಾ ಮಾರ್ಗದರ್ಶಿ ಡಿ.ಎನ್. ಅನಂತರಾಮನ್ ೩೦-೦೦
೬೪ ಟಿಪ್ಪು ನಿಜ ಸ್ವರೂಪ ಡಾ||  ಪ್ರಧಾನ್ ಗುರುದತ್ ೯೦-೦೦
೬೭ ಜನಪ್ರಿಯ ಆಯುರ್ವೇದ ಡಾ|| ವಿ.ಆರ್. ಪದ್ಮನಾಭರಾವ್ ೬೦-೦೦
೬೮ ವ್ಯಕ್ತಿತ್ವ ಸುಧಾರಣೆ ಎನ್.ಎಸ್. ಶ್ರೀನಿವಾಸನ್ ೬೫-೦೦
೬೯ ರಾಷ್ಟ್ರನಾಯಕ ಡಾ|| ಅಂಬೇಡ್ಕರ್ ಚಂದ್ರಶೇಖರ ಭಂಡಾರಿ ೧೦-೦೦
೭೧ ನಾನಾನಿಂದ ನೇತಾಜಿವರೆಗೆ ಸ್ವಾತಂತ್ರ್ಯ ಸಂಗ್ರಾಮ ೧೮೫೭- ೧೯೪೭ ಚಂದ್ರಶೇಖರ ಭಂಡಾರಿ ೫೦-೦೦
೭೨ ಮಾನಸಿಕ ಆರೋಗ್ಯಕ್ಕೆ ಋಷಿವಾಕ್ಯ ಎನ್.ಎಸ್. ಶ್ರೀನಿವಾಸನ್ ೯೦-೦೦
೭೩ ದೀವಟಿಗೆಗಳು ಎಸ್.ಆರ್. ರಾಮಸ್ವಾಮಿ ೧೨೦-೦೦
೭೪ ವೀರ ವಿಶ್ವಾಮಿತ್ರ ಹರಿಹರ ಗೊಂಡುರಾವ್ ೩೦-೦೦
೭೫ ಸರಳ ಮಹಾಭಾರತ ಜಿ.ಎ. ನರಸಿಂಹಮೂರ್ತಿ ೩೦-೦೦
೭೬ ಪಂಚಕರ್ಮ ಚಿಕಿತ್ಸಾ ವಿಜ್ಞಾನ ಪ್ರೊ|| ಟಿ.ಎಲ್. ದೇವರಾಜು ೪೫೦-೦೦
೭೭ ಹಸಿದ ಕಲ್ಲು ಮತ್ತು ಇತರ ಕಥೆಗಳು ಶ್ರೀನಿವಾಸ ವಿ. ಸುತ್ರಾವೆ ೫೦-೦೦
೭೮ ಸಾಮಾನ್ಯ ರೋಗಗಳು ಮತ್ತು ಆಯುರ್ವೇದ ಪರಿಹಾರ ಪ್ರೊ|| ಟಿ.ಎಲ್. ದೇವರಾಜು ೧೨೫-೦೦
೭೯ ಇತಿ ನಿನ್ನ ಪ್ರೀತಿಯ ಆಪ್ಪ (ಒಂದು ಪತ್ರರೂಪ ಸಂದೇಶ ಸರಣಿ) ಎಲ್.ಜಿ. ನಾಗೇಶರಾವ್ ೩೦-೦೦
೮೦ ಎಂದಿಗೂ ಮರೆಯಲಾಗದ ಮಹಾ ಭಾಗವತರು ಡಾ|| ರಾ. ಜಾಲಿಹಾಳ ೯೦-೦೦
೮೧ ನವ ನಿರ್ಮಾಣದ ಹೊಳಹುಗಳು ಡಾ|| ಉಪೇಂದ್ರ ಶೆಣೈ ೧೭೫.೦೦
೮೨ ದೀಪ್ತಿಮಂತರು ಎಸ್.ಆರ್. ರಾಮಸ್ವಾಮಿ ೧೦೦.೦೦
೮೩ ಒತ್ತಡಕ್ಕೆ ವಿದಾಯ ಕಾ. ಕೇಶವ ಭಟ್ ೮೦.೦೦
೮೪ ಜಿಹಾದ್ ಗಿರಿಧರ ಉದ್ಯಾವರ ೯೦.೦೦
೮೫ ಮಧ್ಯಯುಗೇನ ಭಾರತದಲ್ಲಿ ಪರಿಶಿಷ್ಟ ವರ್ಗ-ಜಾತಿಗಳ ವೃದ್ಧಿ ವಸಂತನಾಯಕ್ ಪಲಿಮಾರ್ಕರ್ ೧೬೦.೦೦
೮೬ ದಿಗ್ಬಂಧನದಲ್ಲಿ ಹಿಂದೂ ಸಮಾಜ ಶಂಕರ ಅಜ್ಜಂಪುರ ೭೫.೦೦
೮೭ ಇಸ್ಲಾಂ ಆಕ್ರಾಂತ – ಹಿಂದೂ ದೇವಾಲಯಗಳು ಎಚ್. ಮಂಜುನಾಥ ಭಟ್ ೯೦.೦೦
೮೮ ಯಾರು ಈ ಭಾರತೀಯ ಮುಸ್ಲಿಮರು ಎಸ್.ಎಸ್. ನರೇಂದ್ರಕುಮಾರ್ ೧೫೦.೦೦
೮೯ ಭಾರತದ ಸೆಕ್ಯುಲರಿಸಂ ಎಚ್. ಮಂಜುನಾಥ ಭಟ್ ೧೦೦.೦೦
೯೦ ಮುಸ್ಲಿಂ ಪ್ರತ್ಯೇಕತಾವಾದ ಎಚ್. ಮಂಜುನಾಥ ಭಟ್ ೧೫೦.೦೦
೯೧ ಹದೀಸ್ ಚಿತ್ರಿಸುವ ಇಸ್ಲಾಂ ಸುದರ್ಶನ್ ೨೩೦.೦೦
೯೨ ಗುಡ್‌ಬೈ ಆಸ್ತ್ಮ ಕಾ. ಕೇಶವ ಭಟ್ಟ ೧೨೦.೦೦
೯೩ ಆಯುರ್ವೇದ ಸಂಗಾತಿ ಡಾ|| ವಿ.ಆರ್. ಪದ್ಮನಾಭರಾವ್ ೮೦.೦೦
೯೪ ನವೋತ್ಥಾನದ ಹರಿಕಾರ ಸ್ವಾಮಿ ವಿವೇಕಾನಂದ ಆರತಿ ಪಟ್ರಮೆ ೭೫.೦೦
೯೫ ಕೃತಿರೂಪ ಸಂಘದರ್ಶನ ಚಂದ್ರಶೇಖರ ಭಂಡಾರಿ ೨೨೫.೦೦
೯೭ ಮುದ್ರಾ ಪ್ರವೇಶ ಕೆ. ರಂಗರಾಜ ಅಯ್ಯಂಗಾರ್ ೨೦೦.೦೦
೯೮ ಹುಸಿ ಜಾತ್ಯಾತೀತವಾದ ಶ್ರೀನಿವಾಸ ಸುಬ್ರಹ್ಮಣ್ಯಂ ೭೫.೦೦
೯೯ ಆತ್ಮ ರಕ್ಷಣೆಯೆಡೆಗೆ ಹಿಂದೂ ಸಮಾಜ ಮಂಜುನಾಥ ಅಜ್ಜಂಪುರ ೧೦೦.೦೦
೧೦೦ ಕುಟಿಲ ಸಾಚಾರ್ ವರದಿ ಎಚ್. ಮಂಜುನಾಥಭಟ್ ೧೦.೦೦
೧೦೧ ಬಾಲಪ್ರದೀಪ ಎಚ್.ಎಂ. ರುಕ್ಮಿಣಿ ನಾಯಕ್ ೧೨೫.೦೦
೧೦೨ ಆಯುರ್ವೇದ ಮತ್ತು ಮಹಿಳಾ ಆರೋಗ್ಯ ಗೀತಾ ಶ್ರೀನಿವಾಸನ್ ೬೦.೦೦
೧೦೩ ಕರ್ನಾಟಕದಲ್ಲಿ ರವೀಂದ್ರನಾಥ ಠಾಕೂರ್ ವೇಮಗಲ್ ಸೋಮಶೇಖರ್ ೫೦.೦೦
೧೦೪ ಯಶಸ್ಸಿಗೊಂದು ಯುಕ್ತಿಮಾರ್ಗ ಚಿರಂಜೀವಿ ೧೦೦.೦೦
೧೦೫ ವಿವೇಕ ಚೂಡಾಮಣಿ ಕೆ. ಕೃಷ್ಣ ಭಟ್ ೧೨೦.೦೦
೧೦೭ ಬದುಕು ಸವಿಯೋಣ ಕಾ. ಕೇಶವ ಭಟ್ಟ ೧೨೦.೦೦
೧೦೮ ಸಂಪೂರ್ಣ ಆರೋಗ್ಯಕ್ಕೆ ಆರ್ಯುವೇದ ಡಾ|| ಟಿ.ಎಲ್. ದೇವರಾಜ್ ೧೫೦.೦೦
೧೦೯ ಬದುಕು ನಂಬಿಕೆಯ ಕಡಲು ಆರತಿ ಪಟ್ರಮೆ ೧೦೦.೦೦
೧೧೦ ರಾಜಾ ಕೇರಳವರ್ಮರ ವಿಷ ಚಿಕಿತ್ಸೆ ಡಾ|| ಟಿ. ವಿಶ್ವನಾಥರಾವ್ ೫೦.೦೦
೧೧೧ ‘ಸೆಕ್ಯುಲರ್’  ಭಾರತದಲ್ಲಿನ ಮುಸ್ಲಿಂ ರಾಜಕಾರಣ ಚಂದ್ರಶೇಖರ್ ಭಂಡಾರಿ ೧೪೦.೦೦
೧೧೨ ಅಭಿವ್ಯಕ್ತಿ ಸ್ವಾತಂತ್ರ್ಯ ಕೃಷ್ಣ ವಿ. ೨೨೫.೦೦
೧೧೩ ಹಿಂದೂ ವೀರಗಾಥೆ ಮಾಲಾ ಮಂಜುನಾಥ್ ೭೫.೦೦
೧೧೪ ಸರಳ ಅಡುಗೆಗಳು ಸುಭಾಷಿಣಿ ಹಿರಣ್ಯ ೧೨೦.೦೦
೧೧೫ ಬಿಚ್ಚುಗತ್ತಿ ರವಿಕುಮಾರ್ ೬೦.೦೦
೧೧೬ ದೀಪ್ತ ಶೃಂಗಗಳು ಎಸ್.ಆರ್. ರಾಮಸ್ವಾಮಿ ೧೩೫.೦೦

 

SAHITYA SINDHU PRAKASHANA

(English books)

Sl.No. Title Author Price
2 Bunch of Thoughts M.S. Golwalkar 225-00
7 Indian Resistance to Early Muslim Invaders upto 1206 A.D. Ram Gopal Mishra 100-00
Third Way Dattopant Thengadi 150-00
14 Dr. Hedgewar the Epoch-Maker H.V. Sheshadri 100-00
16 The Tragic Story of Partition H.V. Sheshadri 100-00
21 RSS A Vision in Action H.V. Sheshadri 150-00
23 Nationalist Pursuit Dattopant Thengadi 75-00
28 In the Woods of Globalisation (Essays on Swadeshi) S.R. Ramaswamy 150-00
33 Seva Patha S.R. Ramaswamy 25-00
58 A Close Look at Anti -Sanskrit Oxford University Dictionary Sudhakar Raje 35-00
65 Philosophy of Sri Guru Grantha Sahibji Dr. Arvind S. Godbole 100-00
96 Hear to Remember – Difficult to Forget Madhava Mehendale 150-00
106 Towards Man Making Yeshwanth Rao 120-00

 

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ