ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸುದ್ದಿಗಳು > ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ – 2020

ಕಾಲೇಜು ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಪ್ರಬಂಧಸ್ಪರ್ಧೆ – 2020

`ಉತ್ಥಾನ’ ಕನ್ನಡ ಮಾಸಪತ್ರಿಕೆ, ಕಾಲೇಜು ವಿದ್ಯಾರ್ಥಿಗಳಿಗಾಗಿ “ವಾರ್ಷಿಕ ಪ್ರಬಂಧಸ್ಪರ್ಧೆ – ೨೦೨೦” ಆಯೋಜಿಸಿದೆ .

ವಿಷಯ: ‘ಆತ್ಮನಿರ್ಭರ ಭಾರತ’ – ನನ್ನ ಜವಾಬ್ದಾರಿಗಳು

                ಮೊದಲ ಬಹುಮಾನ: ರೂ. ೮,೦೦೦

                ಎರಡನೆಯ ಬಹುಮಾನ: ರೂ. ೫,೦೦೦

                ಮೂರನೆಯ ಬಹುಮಾನ: ರೂ. ೩,೦೦೦

                ಎರಡು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೧,೦೦೦

ಪ್ರಬಂಧ ಬರೆಯಲು ಕೆಲವು ಆಧಾರಬಿಂದುಗಳು:

ಆತ್ಮನಿರ್ಭರತೆ ಎಂದರೆ ಸ್ವಾವಲಂಬಿತ ಬದುಕು. ತನ್ನಲ್ಲಿ ತಾನು ವಿಶ್ವಾಸವಿರಿಸಿ ಯಾರಿಗೂ ಹೊರೆಯಾಗದಂತೆ ಬದುಕುವುದು. ಅದಕ್ಕೆ ಪೂರಕವಾಗುವಂತೆ ತನ್ನ ಜೀವನವನ್ನು ರೂಪಿಸಿಕೊಳ್ಳುವುದು.

ಮನುಷ್ಯನಂತೆಯೇ ಒಂದು ಕುಟುಂಬ, ಸಮಾಜ, ರಾಷ್ಟ್ರವೂ ಕೂಡ ಸ್ವಾವಲಂಬಿಯೂ, ಸ್ವಯಂಪೂರ್ಣವೂ ಆಗಿರಬೇಕು.

ರಾಷ್ಟ್ರವು ಆತ್ಮನಿರ್ಭರವಾಗಲು ಸ್ವಾವಲಂಬಿಯಾಗುವುದರ ಜೊತೆಗೆ ಸ್ವಾಭಿಮಾನ, ಸಶಕ್ತತೆ, ಸಾಮಾಜಿಕ ಏಕತೆ, ರಾಷ್ಟ್ರೀಯ ಭಾವೈಕ್ಯವನ್ನು ಒಳಗೊಂಡಿರಬೇಕಾಗುತ್ತದೆ…..

ಮೇಲಿನ ಆಧಾರಬಿಂದುಗಳನ್ನು ವಿಸ್ತರಿಸಿ, ೧೫೦೦ ಪದಗಳಿಗೆ ಮೀರದಂತೆ, ವಿಷಯದ ಕುರಿತಾಗಿ ಪ್ರಬಂಧವನ್ನು ಬರೆದು ನಮಗೆ ಕಳಿಸಿ.

ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ, ಆದರ್ಶ ಚಿಂತನೆಗಳನ್ನು ಪ್ರಚೋದಿಸುವುದರ ಮೂಲಕ ರಾಷ್ಟ್ರೀಯ ಭಾವನೆಗಳನ್ನು ಜಾಗೃತಗೊಳಿಸುವುದು ಈ ಸ್ಪರ್ಧೆಯ ಉದ್ದೇಶ.

ಸ್ಪರ್ಧೆಯ ನಿಯಮಗಳು:

ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.

ಕಳಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕಳಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಿರಬೇಕು.

ಸ್ಪರ್ಧೆಯಲ್ಲಿ ಭಾವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.

ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ಸೀಲ್ ಇತ್ಯಾದಿಗಳು ಇರುವ ಹಾಳೆಯನ್ನು ಪ್ರಬಂಧ ಬರೆದು ಕಳುಹಿಸಲು ಉಪಯೋಗಿಸಬಾರದು.

ಪ್ರಬಂಧವನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.

ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.

ಪ್ರಬಂಧವನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ [email protected] ಈ ವಿಳಾಸಕ್ಕೆ ಇಮೇಲ್ ಮೂಲಕವೂ ಕಳುಹಿಸಬಹುದು. 

ಸ್ಪರ್ಧೆಯು ಎರಡು ಹಂತದಲ್ಲಿ ನಡೆಯುವುದು. ಮೊದಲನೆಯ ಹಂತದಿಂದ ಎರಡನೆಯ ಅಂತಿಮ ಹಂತಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು, ಬೆಂಗಳೂರಿನಲ್ಲಿರುವ ಪತ್ರಿಕೆಯ ಕಾರ್ಯಾಲಯದ ಆವರಣಲ್ಲಿ, ಸೀಮಿತ ಪ್ರೇಕ್ಷಕರ ಜೊತೆಯಲ್ಲಿರುವ ತೀರ್ಪುಗಾರರ ಮುಂದೆ ತಮ್ಮ ಪ್ರಬಂಧವನ್ನು PPಖಿ ಮೂಲಕ ಮಂಡಿಸಬೇಕು.

ಬಹುಮಾನಿತ ಪ್ರಬಂಧವನ್ನು ಯಾವುದೇ ರೂಪದಲ್ಲಿ ಯಾವಾಗ ಬೇಕಾದರೂ ಪ್ರಕಟಿಸುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.

ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.

ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ ೩೧, ೨೦೨೦.

ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:

ಸಂಪಾದಕರು, ’ಉತ್ಥಾನ’ ವಾರ್ಷಿಕ ಪ್ರಬಂಧಸ್ಪರ್ಧೆ – ೨೦೨೦

’ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ, ಕೆಂಪೇಗೌಡನಗರ,

ಬೆಂಗಳೂರು – ೫೬೦ ೦೧೯.

ದೂರವಾಣಿ: ೦೮೦-೨೬೬೦ ೪೬೭೩; ಮೊಬೈಲ್: ೯೪೪೮೨೮೪೬೦೮

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ