ಗಾಂಧಿಯವರೂ ಸುಧಾರಣೆಯ ಪರವಾಗಿದ್ದವರೇ. ಆದರೆ ಸುಧಾರಣೆಗೆ ಒಂದು ಕ್ರಾಂತಿಕಾರಿ ಸ್ವರೂಪವನ್ನು ಕೊಡಲು ಹೊರಟವರು ಅಂಬೇಡ್ಕರ್ ಮತ್ತು ಸಾವರಕರ್. ಹಿಂದೆ ಯಾವುದೊ ಕಾಲದಲ್ಲಿ ಸಮಾಜಸ್ವಾಸ್ಥö್ಯಕ್ಕೆ ಪೋಷಕವಾಗಿದ್ದ ಜಾತಿವ್ಯವಸ್ಥೆ ಆಧುನಿಕ ಕಾಲದಲ್ಲಿ ಕಾಲಬಾಹ್ಯವೆನಿಸಿತ್ತು. ಅಂತಹ ರೂಢಿಗಳಿಂದ ಪಕ್ಕಕ್ಕೆ ಸರಿದಲ್ಲಿ ಮಾತ್ರ ಸಮಾಜದಲ್ಲಿ ಹೆಚ್ಚಿನ ಗತಿಶೀಲತೆ ಉಂಟಾದೀತು – ಎಂಬುದು ಸಾವರಕರರ ಪರಾಮರ್ಶನೆಯಾಗಿತ್ತು. ಪೌರೋಹಿತ್ಯಾದಿ ಕಲಾಪಗಳು ಒಂದು ವರ್ಗದವರಿಗೇ ಮೀಸಲಾಗಿದ್ದುದು; ಅಂತರ್ಜಾತೀಯ ವಿವಾಹಕ್ಕೆ ನಿಷೇಧ; ಮತಾಂತರಿತರನ್ನು ಮತ್ತೆ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುವುದಕ್ಕೆ ಇದ್ದ ನಿಷೇಧ; – ಇಂತಹ ಪರಿಮಿತಿಗಳು ಸಮಾಜದ ಹಿನ್ನಡೆಗೆ ಕಾರಣವಾಗಿವೆ […]













