ಬಹುಮುಖ ಪ್ರತಿಭಾವಂತರಾಗಿದ್ದ ಮಹಾರಾಜರನ್ನು ಹೆಚ್ಚು ಸೆಳೆದದ್ದು ಅಧ್ಯಾತ್ಮ ಮತ್ತು ತತ್ತ್ವಸಾಹಿತ್ಯ. ತಾವು ಕೆಲಸ ಮಾಡುವ ಜಾಗಗಳಲ್ಲೆಲ್ಲ ಅಧ್ಯಾತ್ಮಪ್ರಿಯರನ್ನೆಲ್ಲ ಸೇರಿಸಿಕೊಂಡು ಪ್ರವಚನ ಮತ್ತು ಹಲವು ದಾರ್ಶನಿಕರ ಪ್ರೇರಕ ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಆ ನಡುವೆಯೂ ಕಾಯಕನಿಷ್ಠೆಯನ್ನು ಮಾತ್ರ ಯಾವತ್ತೂ ಮರೆಯುತ್ತಿರಲಿಲ್ಲ. ನೈತಿಕ ಮತ್ತು ಆಧ್ಯಾತ್ಮಿಕ ಉತ್ಕರ್ಷಕ್ಕಾಗಿ ಶರಣರು, ಸಂತರು, ದಾಸರು, ತತ್ತ್ವಪದ ರಚನಕಾರರು ತಮ್ಮ ಜೀವಿತಾವಧಿಯನ್ನೆಲ್ಲ ಮುಡಿಪಾಗಿಟ್ಟ ಉದಾಹರಣೆಗಳು ನಮ್ಮ ನಾಡಿನಲ್ಲಿ ಹೇರಳವಾಗಿ ಸಿಗುತ್ತವೆ. ಸರ್ವಜ್ಞ, ಪುರಂದರದಾಸ, ಕನಕದಾಸ, ಶಿಶುನಾಳ ಶರೀಫ, ದೇವರ ದಾಸಿಮಯ್ಯ, ಅಂಬಿಗರಚೌಡಯ್ಯ, ಬಸವಣ್ಣ, ಅಲ್ಲಮ, […]






![ತಾರಕಮಂತ್ರ - ಹಿಂದೂಧರ್ಮದ ಉಜ್ಜೀವನ [ವಿವೇಕಾನಂದ ಸಾರ್ಧಶತಾಬ್ದಿ ಲೇಖನಮಾಲೆ ೨೪]](https://utthana.in/wp-content/uploads/2015/02/vivekanand-150x150.jpg)






