ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2015

ಉತ್ಥಾನ ಮಾರ್ಚ್ 2015

ಟಿ.ವಿ. ಛಾನಲ್ ನಿರ್ದೇಶಕರಿಗೊಂದು ಬಹಿರಂಗ ಪತ್ರ

ಟಿ.ವಿ. ಛಾನಲ್  ನಿರ್ದೇಶಕರಿಗೊಂದು  ಬಹಿರಂಗ ಪತ್ರ

ನಾವು ನಮ್ಮ ವೈದಿಕ ಸಂಸ್ಕೃತಿಗೆ ಮರ್ಯಾದೆಕೊಡುವುದಕ್ಕೆ ಹೋಗಿ, ಬಂದಿರುವ ಅಂಧಾಚರಣೆಗಳಿಗೆ ಸಮರ್ಥನೆಗಳನ್ನೇ ಹುಡುಕಬೇಕಾದ್ದಿಲ್ಲ. ಅವುಗಳನ್ನು ಪೂರ್ವಗ್ರಹದಿಂದ ವಿಶ್ಲೇಷಿಸುವುದು ಬೇಡ. ಅಜ್ಞಾನದಿಂದಲೋ ಭಯದಿಂದಲೋ ಅವು ಬಂದಿರುವುದು ನಿಶ್ಚಯವಾದರೆ ನಿರ್ಭೀತತೆಯಿಂದ ಕೈಬಿಡಬೇಕು. ಮಾನ್ಯರೇ, ಇದೇ ತಿಂಗಳ, ಅಂದರೆ ೨೦೦೮ರ ಆಗಸ್ಟ್ ೧ನೇ ತಾರೀಖು, ಶುಕ್ರವಾರ ಸಾಯಂಕಾಲ ಸೂರ್ಯಗ್ರಹಣ ಸಂಭವಿಸಿತ್ತು. ಸಾಮಾನ್ಯ ಜನಗಳ ತಿಳಿವಳಿಕೆಗೋಸ್ಕರ ನೀವು ಏರ್ಪಡಿಸಿದ್ದ ಚರ್ಚಾಗೋಷ್ಠಿಯನ್ನು ವೀಕ್ಷಿಸಿದೆ. ವಿಜ್ಞಾನಿಗಳಿಗೂ ಜ್ಯೋತಿಷಿಗಳಿಗೂ ಆದ ಚಕಮಕಿಯನ್ನು ಕುತೂಹಲದಿಂದ ಕೇಳಿದೆ. ನಿರಾಶೆಯಾಯಿತೆಂದು ಹೇಳಿದರೆ ಬೇಜಾರುಪಟ್ಟುಕೊಳ್ಳಬಾರದು. ಕಾರಣ, ಅವರವರ ದೃಷ್ಟಿಕೋನದಿಂದಲೇ ಮಾತನಾಡುತ್ತಿದ್ದರೇ ಹೊರತು ಅವರಾರೂ […]

ಬದಲಾವಣೆಗೊಂದು ಅವಕಾಶ ನೀಡೋಣವೇ?

ಗಮನ ಸೆಳೆದ ಇತ್ತೀಚಿನ ಎರಡು ವರದಿಗಳು ಹೀಗಿವೆ: ವರದಿ ೧: ಬೆಂಗಳೂರಿನ ಪರಪ್ಪನ ಅಗ್ರಹಾರ ಎದುರಿಗೆ ಜೈಲುವಾಸಿಗಳೇ ನಿರ್ಮಿಸಿದ ಒಂದು ಬೇಕರಿ. ಸ್ಥಳದಲ್ಲಿ ಜಮಾಯಿಸುತ್ತಿದ್ದ ಪತ್ರಕರ್ತರ, ಪೊಲೀಸು ಅಧಿಕಾರಿಗಳ ಹಸಿವು ತಣಿಸುತ್ತಿರುವ ಈ ಪುಣ್ಯಕಾರ್ಯದ ಯೋಚನೆ ಬಂದಿದ್ದೂ ಅಲ್ಲಿನ ಜೈಲುವಾಸಿಗಳಿಗೇ! ಐವತ್ತಕ್ಕೂ ಹೆಚ್ಚು ಖೈದಿಗಳು ಸೇರಿ ಆಧುನಿಕ ಯಂತ್ರೋಪಕರಣಗಳಿಂದ ಕೇಕ್, ಬ್ರೆಡ್ ಇನ್ನಿತರ ಆಹಾರ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟಕ್ಕಿಡುತ್ತಿದ್ದಾರೆ. ತಂದಿಡುವ ತಿನಿಸುಗಳೂ ಫಟಾಫಟ್ ಎಂಬಂತೆ ಖಾಲಿಯಾಗುತ್ತಿವೆಯಂತೆ. ದಿನಾಂತ್ಯಕ್ಕೆ ಉಳಿದ ಆಹಾರೋತ್ಪನ್ನಗಳನ್ನು ಮರುದಿನ ಮಾರಾಟ ಮಾಡಲಾಗುವುದಿಲ್ಲ.

ಕುಶಲೋಪರಿ

‘ಉತ್ಥಾನ’ದ ಹೊಸ ರೂಪವೂ ಅದರಲ್ಲಿರುವ ಲೇಖನಗಳೂ ಬಹಳ ಆಕರ್ಷಕವಾಗಿವೆ. ಈ ಸ್ವರೂಪದಿಂದ ಅದರ ಬಗೆಗೆ ಮತ್ತಷ್ಟು ಆತ್ಮೀಯತೆ ಬರುತ್ತದೆ.ಎಸ್.ಎಲ್. ಭೈರಪ್ಪನವರ ‘ಯಾನ’ ಪುಸ್ತಕದ ಬಗೆಗೆ ಇರುವ ಲೇಖನ ಅತ್ಯಂತ ವಿಶಿಷ್ಟವಾಗಿದೆ. ‘ಮ್ಯಾಜಿಕಲ್ ಇಮ್ಯಾಜಿನೇಷನ್’ ಮತ್ತು ‘ಮ್ಯಾಜಿಕಲ್ ರಿಯಲಿಸ್ಮ್’ ನುಡಿಗಟ್ಟುಗಳು ‘ಯಾನ’ಕ್ಕೆ ಪೂರ್ತಿ ಹೊಂದುವ ಶಬ್ದಗಳಾಗಿವೆ. ಆದರೂ ‘ಯಾನ’ವನ್ನು ಓದುವುದು ನಿಧಾನವಾಗಿ ಆಗಬೇಕು; ಆಗ ಅದರ ಸ್ವಾರಸ್ಯ ತಿಳಿವಿಗೆ ಬರುತ್ತದೆ.     – ಪ್ರೊ|| ಜಿ. ವೆಂಕಟಸುಬ್ಬಯ್ಯ, ಬೆಂಗಳೂರು ‘ಉತ್ಥಾನ’ ಹೊಸರೂಪದಲ್ಲಿ, ಮನಸ್ಸಿಗೆ ಆನಂದವನ್ನು ನೀಡುವಂತೆ ಮೂಡಿಬರುತ್ತಿದೆ. ಹಿರಿಯರ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ