ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಕಥಾಸ್ಪರ್ಧೆ > ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ, ಹೆಗಡೆಕಟ್ಟಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಮೊದಲನೆಯ ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. 15,000) ಶಿರಸಿಯ ಕರುಣಾಕರ ಹಬ್ಬುಮನೆ ಅವರ ಒಂದು ಸಂಸ್ಕಾರದ ಕಥೆ ಪಡೆದಿದ್ದು, ಎರಡನೇ ಬಹುಮಾನವನ್ನು (ರೂ. 12,000) ಯಾದಗಿರಿಯ ಶಿವವಿಷ್ಣು ವಲ್ಲಭ ಅವರ ಜಂಬುಕೇಶನ ಮತಾಂತರ ಪ್ರಹಸನ ಪಡೆದಿದೆ ಮತ್ತು ಮೂರನೇ ಬಹುಮಾನವನ್ನು (ರೂ. 10,000) ಕಾಸರಗೋಡಿನ ಸಂತೋಷ್ ಅನಂತಪುರ ಅವರ ಭೂತ ಪಾದ ಕಥೆ ಪಡೆದಿದೆ.

ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಉಡುಪಿಯ ಶ್ರೀಲೋಲ ಸೋಮಯಾಜಿ ಅವರು ಬರೆದ ಇರ್ಬುಸಾಬಿಯ ಅಷ್ಟಾವಧಾನ ಸೇವೆ, ಬೆಂಗಳೂರಿನ ಜಯರಾಮಚಾರಿ ಅವರು ಬರೆದ ಪೊಮ್ಯಾಟೋ, ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿ ಅವರು ಬರೆದ ’ಋಣ’ವೆಂಬ ಗೂಢ ಚಿತ್ರದುರ್ಗದ ಜಿ.ಎಂ. ಸಂಜಯ್ (ಪತ್ರಿಕೋದ್ಯಮ ವಿದ್ಯಾರ್ಥಿ) ಅವರು ಬರೆದ ಉದ್ಭವ ಸೇತುವೆ ಹಾಗೂ ಮೈಸೂರಿನ ಮಾಲತಿ ಹೆಗಡೆ ಅವರು ಬರೆದ ನೆಲೆ – ಕಥೆಗಳು ಮೆಚ್ಚುಗೆ ಬಹುಮಾನಕ್ಕೆ (ತಲಾ ರೂ. 2,000) ಆಯ್ಕೆಯಾಗಿವೆ.

ಉತ್ಥಾನ ಮಾಸಪತ್ರಿಕೆಯು ಕಳೆದ 36 ವರ್ಷಗಳಿಂದ ವಾರ್ಷಿಕ ಕಥಾಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಈ ವರ್ಷದ 2022ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು 398 ಕಥೆಗಳು ಭಾಗವಹಿಸಿದ್ದವು. ಖ್ಯಾತ ಲೇಖಕರು, ಅಂಕಣಕಾರರು, ಕತೆಗಾರರಾದ ಪ್ರೇಮಶೇಖರ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು.

ವಿಜೇತರ ವಿವರ ಹೀಗಿದೆ:

  ಕಥೆಯ ಹೆಸರುಕಥೆಗಾರರ ಹೆಸರು
1ಪ್ರಥಮ ಬಹುಮಾನ
(ರೂ. 15,000)
ಒಂದು ಸಂಸ್ಕಾರದ ಕಥೆಕರುಣಾಕರ್ ಹಬ್ಬುಮನೆ, ಶಿರಸಿ (ಉ.ಕ.)
2ಎರಡನೆಯ ಬಹುಮಾನ
(ರೂ. 12,000)
ಜಂಬುಕೇಶನ ಮತಾಂತರ ಪ್ರಹಸನಶಿವವಿಷ್ಣು ವಲ್ಲಭ, ಯಾದಗಿರಿ
3ಮೂರನೆಯ ಬಹುಮಾನ
(ರೂ. 10,000)
ಭೂತ ಪಾದಸಂತೋಷ್ ಅನಂತಪುರ, ಕಾಸರಗೋಡು

ಮೆಚ್ಚುಗೆ ಬಹುಮಾನ (ತಲಾ ರೂ. 2,000)

 ಕಥೆಯ ಹೆಸರುಕಥೆಗಾರರ ಹೆಸರು
1ಇರ್ಬುಸಾಬಿಯ ಅಷ್ಟಾವಧಾನ ಸೇವೆಶ್ರೀಲೋಲ ಸೋಮಯಾಜಿ, ಉಡುಪಿ
2ಪೊಮ್ಯಾಟೋಜಯರಾಮಚಾರಿ, ಬೆಂಗಳೂರು
3’ಋಣ’ವೆಂಬ ಗೂಢರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ
4ಉದ್ಭವ ಸೇತುವೆಜಿ.ಎಂ. ಸಂಜಯ್, ಚಿತ್ರದುರ್ಗ
5ನೆಲೆಮಾಲತಿ ಹೆಗಡೆ, ಮೈಸೂರು

ಉತ್ಥಾನ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕಥೆಗಾರ-ಕಥೆಗಾರ್ತಿಯರಿಗೆ ಹಾಗೂ ಬಹುಮಾನ ಪಡೆದವರಿಗೆ ಅಭಿನಂದನೆಗಳು.

ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸುತ್ತಿದ್ದೇವೆ.

ಎಸ್.ಆರ್. ರಾಮಸ್ವಾಮಿ

ಪ್ರಧಾನ ಸಂಪಾದಕರು, ಉತ್ಥಾನ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ